ಕೋಲ್ಕತಾ: ‘ಚುನಾವಣೆ ವೇಳೆ ಪಕ್ಷವು ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಪ.ಬಂಗಾಳದ ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಭರವಸೆ ನೀಡಿದ್ದಾರೆ.
ಸಿಎಂ ಹುದ್ದೆಗೆ ತಮ್ಮ ಆಯ್ಕೆಯ ಬಳಿಕ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರಾಜ್ಯದಲ್ಲೀಗ ಭಯವು ಹೋಗಿ ಭರವಸೆ ಬಂದಿದೆ. ಬಂಗಾಳದ ಜನ ನಮಗೆ ಐತಿಹಾಸಿಕ ಜನಾದೇಶ ನೀಡಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುತ್ತೇವೆ. ಬಂಗಾಳ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದು ಅತ್ಯಗತ್ಯ’ ಎನ್ನುವ ಮೂಲಕ ಡಬಲ್ ಎಂಜಿನ್ ಸರ್ಕಾರ ಉತ್ತಮ ಆಡಳಿತ ಕೊಡಲಿದೆ ಎಂಬ ವಾಗ್ದಾನವನ್ನೂ ಅಧಿಕಾರಿ ಮಾಡಿದರು.
10:05 AM (IST) May 09
ವಿಜ್ಞಾನಿಗಳು ಶನಿಗ್ರಹದ ಉಪಗ್ರಹವಾದ ಟೈಟಾನ್ ಅನ್ನು ಮಾನವನ ಮುಂದಿನ ಸಂಭಾವ್ಯ ನೆಲೆಯಾಗಿ ಪರಿಗಣಿಸುತ್ತಿದ್ದಾರೆ. ನಾಸಾದ 'ಡ್ರಾಗನ್ಫ್ಲೈ' ಯೋಜನೆ ಮತ್ತು ಮುಂಬರುವ ಶೃಂಗಸಭೆಯು ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳಾಗಿದ್ದು, ಅಲ್ಲಿನ ವಿಪರೀತ ಶೀತದಂತಹ ಸವಾಲುಗಳ ನಡುವೆಯೂ ಟೈಟಾನ್ ಅನ್ನು ಆಕರ್ಷಕವಾಗಿಸಿದೆ.
09:30 AM (IST) May 09
ಆಪರೇಷನ್ ಸಿಂದೂರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೈಪುರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಭಾರತೀಯ ಸೇನಾಧಿಕಾರಿಗಳು ಇಂಗ್ಲಿಷ್ನಲ್ಲಿ ಮಾತನಾಡಿದ್ದಕ್ಕೆ ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್ ಷರೀಫ್ ಚೌಧರಿ ಪ್ರಶ್ನಿಸಿದ್ದಾರೆ.
09:11 AM (IST) May 09
ಸರ್ಕಾರ ರಚಿಸಲು ಬೇಕಾದ ಬಹುಮತವಿಲ್ಲದೆ ನಟ ವಿಜಯ್ ಅವರ ಟಿವಿಕೆ ಪಕ್ಷ ಹೆಣಗಾಡುತ್ತಿರುವಾಗ, ಎಎಂಎಂಕೆ ಶಾಸಕರ ಬೆಂಬಲ ಪತ್ರ ನಕಲಿ ಎಂದು ಟಿಟಿವಿ ದಿನಕರನ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಎಎಂಎಂಕೆ ಶಾಸಕರು ಪ್ರಜ್ಞಾಪೂರ್ವಕವಾಗಿಯೇ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಟಿವಿಕೆ ವಿಡಿಯೋ ಬಿಡುಗಡೆ ಮಾಡಿದೆ.
08:06 AM (IST) May 09
ಕದನ ವಿರಾಮದ ನಡುವೆಯೂ, ಅಮೆರಿಕ ಮತ್ತು ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಪರಸ್ಪರ ದಾಳಿ ನಡೆಸಿವೆ. ಎರಡೂ ದೇಶಗಳು ದಾಳಿಯ ಬಗ್ಗೆ ಪರಸ್ಪರ ಆರೋಪ ಮಾಡುತ್ತಿದ್ದು, ಯುಎಇ ಕೂಡ ಇರಾನ್ನಿಂದ ದಾಳಿಯಾಗಿದೆ ಎಂದು ವರದಿ ಮಾಡಿದೆ.