ಚೆನ್ನೈ: ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಅವರ ಕೊನೆಯ ಚಿತ್ರ ‘ಜನನಾಯಕನ್’ಗೆ ಕೇಂದ್ರೀಯ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೇ ಇರುವುದಕ್ಕೆ ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡವೇ ಕಾರಣ ಎಂದು ತಮಿಳುನಾಡಿನ ಕಾಂಗ್ರೆಸ್ ಮತ್ತು ಡಿಎಂಕೆ ಆರೋಪಿಸಿವೆ. ರಾಜಕೀಯ ಕಾರಣಕ್ಕಾಗಿ ಚಿತ್ರದ ಬಿಡುಗಡೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಅವು ಆರೋಪಿಸಿವೆ. ಆದರೆ ಈ ಆರೋಪವನ್ನು ಕೇಂದ್ರ ಸಚಿವ ಮುರುಗನ್ ತಳ್ಳಿಹಾಕಿದ್ದಾರೆ. ಈ ನಡುವೆ ಪ್ರಮಾಣಪತ್ರ ನಿರಾಕರಣೆ ಪ್ರಶ್ನಿಸಿ ಚಿತ್ರ ತಂಡ ಸಲ್ಲಿಸಿರುವ ಅರ್ಜಿ ಕುರಿತು ಮದ್ರಾಸ್ ಹೈಕೋರ್ಟ್ ಜ.9ರಂದು ತೀರ್ಪು ನೀಡಲಿದೆ.

11:55 PM (IST) Jan 09
Mukesh Ambani Loses ₹223 Crore in 5 Days ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಸತತ ಐದು ದಿನಗಳ ಕಾಲ ಕುಸಿದ ಪರಿಣಾಮ, ಮುಖೇಶ್ ಅಂಬಾನಿ ತಮ್ಮ ನಿವ್ವಳ ಮೌಲ್ಯದಲ್ಲಿ ₹223 ಕೋಟಿ ಕಳೆದುಕೊಂಡಿದ್ದಾರೆ. ರಷ್ಯಾದ ತೈಲಕ್ಕೆ ಸಂಬಂಧಿಸಿದ ವರದಿಯು ಈ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ.
11:19 PM (IST) Jan 09
ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್ನಲ್ಲಿ 18 ರನ್ಗಳ ಅವಶ್ಯಕತೆಯಿದ್ದಾಗ, ಡಿ ಕ್ಲರ್ಕ್ ಅವರ ಸ್ಫೋಟಕ ಬ್ಯಾಟಿಂಗ್ ಗೆಲುವಿಗೆ ಕಾರಣವಾಯಿತು.
10:48 PM (IST) Jan 09
ಟರ್ನ್ ಗ್ರೂಪ್ ಅಧ್ಯಯನದ ಪ್ರಕಾರ ಭಾರತದ ಶೇ. 52ರಷ್ಟು ಯುವಕರಿಗೆ ವಿದೇಶದಲ್ಲಿ ಕೆಲಸ ಮಾಡುವುದೇ ಇಷ್ಟ. ಅದಕ್ಕೆ ಕಾರಣ ಭಾರತದಲ್ಲಿ ಅವರಿಗೆ ಸಿಗುವ ಕಡಿಮೆ ವೇತನ ಎಂದು ತಿಳಿಸಿದೆ. ಜರ್ಮನಿ ಮತ್ತು ಯುಕೆ ಉತ್ತಮ ವೇತನ, ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಗೆ ಪ್ರಮುಖ ಆಯ್ಕೆಗಳಾಗಿವೆ.
09:44 PM (IST) Jan 09
Hyderabad Horror: Mother Kills 10-Month-Old Baby, Ends Life; Mother-in-Law Critical ಹೈದರಾಬಾದ್ನಲ್ಲಿ ನಡೆದ ಕೌಟುಂಬಿಕ ಕಲಹದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಬದುಕುಳಿಯಲು ಕಷ್ಟಪಡುತ್ತಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟ್ನಲ್ಲಿ ಈ ದುರಂತ ಘಟನೆ ನಡೆದಿದೆ.
08:14 PM (IST) Jan 09
Mizoram Cricketer K Lalremruata Dies After Collapsing on Field; BCCI Mourns ಕ್ರಿಕೆಟ್ ಪಂದ್ಯದ ವೇಳೆ ಕುಸಿದು ಬಿದ್ದು ನಿಧನರಾದ ಮಿಜೋರಾಂನ ಮಾಜಿ ರಣಜಿ ಆಟಗಾರ ಕೆ. ಲಾಲ್ರೆಮ್ರುಟಾ ಅವರ ನಿಧನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ.
08:11 PM (IST) Jan 09
ಇಂಟರ್ನೆಟ್ನಲ್ಲಿ ಪ್ರೀತಿ ಹುಡುಕುವ ಇಂದಿನ ಕಾಲಘಟದಲ್ಲಿ ಇಲ್ಲೊಂದು ವೃದ್ಧ ಜೋಡಿಯ ಮಾಗಿದ ಪ್ರೀತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ
07:36 PM (IST) Jan 09
Share Market:ಈ ವಾರ ಷೇರು ಮಾರುಕಟ್ಟೆಯಲ್ಲಿ ಭೂಕಂಪ ಸಂಭವಿಸಿದೆ. ಅಮೆರಿಕ ಶೇ. 500 ರಷ್ಟು ಸುಂಕ ವಿಧಿಸುವ ಸುದ್ದಿ ಬಂದಾಗಿನಿಂದ ಷೇರು ಮಾರುಕಟ್ಟೆ ಗೊಂದಲದಲ್ಲಿದೆ. ಆದರೆ ಈ ಪರಿಸ್ಥಿತಿಯಲ್ಲೂ ಈ ಷೇರುಗಳು ಏರಿವೆ. ಇದರಿಂದಾಗಿ ಹೂಡಿಕೆದಾರರು ಶ್ರೀಮಂತರಾಗಿದ್ದಾರೆ.
07:11 PM (IST) Jan 09
ಟರ್ಕಿಯ ಇಸ್ತಾಂಬುಲ್ನಲ್ಲಿ ಪ್ರಬಲ ಸುಂಟರಗಾಳಿಗೆ ಸಿಲುಕಿದ ಪೆಗಸಾಸ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅಪಾಯಕ್ಕೆ ಸಿಲುಕಿತ್ತು. ಆದರೆ, ಪೈಲಟ್ನ ಚಾಣಾಕ್ಷತನದಿಂದ ವಿಮಾನವು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿ, ಸುರಕ್ಷಿತವಾಗಿ ಮತ್ತೆ ಟೇಕಾಫ್ ಆಗಿದೆ.
06:34 PM (IST) Jan 09
ಹೆದ್ದಾರಿಯಲ್ಲಿ ಬಿದ್ದ ಬೈಕರ್ ಐಫೋನ್ ಮೇಲಿಂದ ಪಾಸಾಯ್ತು 7 ಕಾರು, ಒಂದ ಹಿಂದೆ ಮತ್ತೊಂದರಂತೆ 7 ಕಾರುಗಳು ಐಫೋನ್ ಮೇಲಿಂದ ತೆರಳಿದೆ. ಕೊನೆಗೂ ಐಫೋನ್ ಎತ್ತಿಕೊಂಡ ಮಾಲೀಕ ಹೇಳಿದ್ದೇನು?
06:30 PM (IST) Jan 09
05:26 PM (IST) Jan 09
ಖಾಸಗಿ ಬಸ್ ಭೀಕರ ಅಪಘಾತ, ಪ್ರಪಾತಕ್ಕೆ ಉರುಳಿ 8 ಪ್ರಯಾಣಿಕರು ಸಾವು, ಹಲವರಿಗೆ ಗಾಯ, 30 ರಿಂದ 35 ಮಂದಿ ಪ್ರಯಾಣಿಸುತ್ತಿದ್ದ ಬಸ್ ಪ್ರವಾತಕ್ಕೆ ಉರುಳಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ. ರಕ್ಷಣಾ ಕಾರ್ಯಾಚರಣೆ ಸಾಗಿದೆ.
05:13 PM (IST) Jan 09
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತನ್ನ ತವರು ಮೈದಾನವನ್ನಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಿಟ್ಟು ಬೇರೆ ಸ್ಟೇಡಿಯಂ ಆಯ್ಕೆ ಮಾಡುತ್ತಾ? ಇದೀಗ ಹೊಸದೊಂದು ಬೆಳವಣಿಗೆ ನಡೆದಿದೆ.
04:16 PM (IST) Jan 09
03:56 PM (IST) Jan 09
03:39 PM (IST) Jan 09
ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ಇದೀಗ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಎರಡು ವರ್ಷಗಳ ಬಳಿಕ ತಮ್ಮ ಕ್ರಿಕೆಟ್ ಅಭ್ಯಾಸದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
03:15 PM (IST) Jan 09
ಇಂದೋರ್ನಲ್ಲಿ ಭೀಕರ ಕಾರು ಅಪಘಾತ, ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮಧ್ಯಪ್ರದೇಶ ಮಾಜಿ ಗೃಹ ಸಚಿವರ ಪುತ್ರಿ ಸೇರಿದಂತೆ ಮೂವರು ಮೃತಪಟ್ಟರೆ, ಮತ್ತೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
02:49 PM (IST) Jan 09
ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಒಂದು ವರ್ಷದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವಿಮಾನವನ್ನುಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಆದರೂ ಮಗು ಸಾವನ್ನಪ್ಪಿದಂತಹ ಘಟನೆ ನಡೆದಿದೆ.
01:41 PM (IST) Jan 09
01:41 PM (IST) Jan 09
ತಡರಾತ್ರಿ ಇಲಿ ವಿಷ ಆರ್ಡರ್ ಮಾಡಿದ ಮಹಿಳೆ, ಪಾರ್ಸೆಲ್ ಹಿಡಿದು ಮಹಿಳೆಯ ಮನೆ ವಿಳಾಸಕ್ಕೆ ತೆರಳುತ್ತಿದ್ದಂತೆ ಡೆಲಿವರಿ ಎಜೆಂಟ್ ಅಪಾಯ ಊಹಿಸಿದ್ದಾನೆ. ಮಹಿಳೆಗೆ ಆರ್ಡರ್ ಡೆಲಿವರಿ ಮಾಡಲು ಬಾಗಿಲು ತಟ್ಟಿದ್ದಾನೆ, ಮುಂದೇನಾಯ್ತು?
01:21 PM (IST) Jan 09
01:11 PM (IST) Jan 09
ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ಸರಣಿ ಹಾಗೂ ಟಿ20 ವಿಶ್ವಕಪ್ನಿಂದ ಹೊರಗುಳಿಯುವ ಭೀತಿಯಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗ ತಿಲಕ್ ವರ್ಮಾ, ಇದೀಗ ತಮ್ಮ ಫಿಟ್ನೆಸ್ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.
01:04 PM (IST) Jan 09
ಪಾಕ್ ಪಜೆಗೆ ಭಾರತದ ಸರ್ಕಾರಿ ಶಾಲೆಯಲ್ಲಿ ಉದ್ಯೋಗ, ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿದೆ ಈಕೆ ಭಾರತೀಯ ಪ್ರಜೆಯಲ್ಲ, ಪಾಕಿಸ್ತಾನಿ ಪ್ರಜೆ ಅನ್ನೋದು ಬಯಲಾಗುತ್ತಿದ್ದಂತೆ ಅಮಾನತುಗೊಂಡಿದ್ದಾರೆ.
12:09 PM (IST) Jan 09
ಈ ವರ್ಷದಿಂದಲೇ ವಾಹನ to ವಾಹನ ಟೆಕ್ನಾಲಜಿ ಜಾರಿ ಎಂದ ಗಡ್ಕರಿ, 2026ರ ಅಂತ್ಯದ ವೇಳೆ ಹೊಸ ತಂತ್ರಜ್ಞಾನ ಜಾರಿಯಾಗುತ್ತಿದೆ. ಇದು ವಾಹನಗಳಿಗೆ ಕಡ್ಡಾಯವಾಗಿದೆ. ಈ ಕುರಿತು ಕೇಂದ್ರ ಸಚಿವ ಮಾಹಿತಿ ಹಂಚಿಕೊಂಡಿದ್ದಾರೆ.
11:27 AM (IST) Jan 09
ಬೆಳ್ಳಂಬೆಳಗ್ಗೆ ಹಲೆವೆಡೆ ವಕ್ಕರಿಸಿದ ಮಳೆ, ಮಹತ್ವದ ಸೂಚನೆ ಕೊಟ್ಟ ಹವಮಾನ ಇಲಾಖೆ, ದಕ್ಷಿಣ ಭಾರತದ 2 ರಾಜ್ಯಗಳಲ್ಲಿ ಮಳೆ ಮೂನ್ಸೂಚನೆ ನೀಡಲಾಗಿದೆ. ಇತ್ತ ಬೆಂಗಳೂರು ಹಾಗೂ ಕರ್ನಾಟಕಕ್ಕೂ ಹವಮಾನ ಇಲಾಖೆ ಎಚ್ಚರಿಸಿದೆ.
11:21 AM (IST) Jan 09
09:58 AM (IST) Jan 09
ಢಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ತಿಕ್ಕಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ತಮ್ಮ ಪಾಲಿನ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸಿ ಎಂದು ಎರಡನೇ ಬಾರಿಗೆ ಐಸಿಸಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ಗೆ ಪತ್ರ ಬರೆದಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ.
09:24 AM (IST) Jan 09
ನವಿ ಮುಂಬೈ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ಅಪ್ಡೇಟ್ಸ್ ಇಲ್ಲಿದೆ ನೋಡಿ.
08:54 AM (IST) Jan 09
ಮಹಿಳಾ ಪ್ರೀಮಿಯರ್ ಲೀಗ್ನ (ಡಬ್ಲ್ಯುಪಿಎಲ್) 4ನೇ ಆವೃತ್ತಿಯು ಜ.9ರಿಂದ ಫೆ.5ರ ವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿದೆ. 5 ತಂಡಗಳು ಭಾಗವಹಿಸುವ ಈ ಟೂರ್ನಿಯು, ಮುಂಬರುವ ಟಿ20 ವಿಶ್ವಕಪ್ಗೆ ಆಟಗಾರ್ತಿಯರ ಆಯ್ಕೆಗೆ ಪ್ರಮುಖ ವೇದಿಕೆಯಾಗಲಿದೆ.