ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಇಲ್ಲಿನ ಕಾಂಗ್ಪೋಕ್ಪಿ ಜಿಲ್ಲೆಯ ಮನೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ನುಗ್ಗಿ ಮೂವರನ್ನು ಹತ್ಯೆಗೈದಿದ್ದಾರೆ. ಮತ್ತೊಂದೆಡೆ ಗಲಭೆಯಲ್ಲಿ 7 ಮನೆಗಳು ಬೆಂಕಿಗಾಹುತಿಯಾಗಿವೆ.
ಜಿಲ್ಲೆಯ ಲೊಯಿಬೋಲ್ ಖುಲ್ಲೆನ್ ಗ್ರಾಮದಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಏಕಾಏಕಿ ಇಲ್ಲಿನ ನಾಗರಿಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಿಂದ ಭಯಗೊಂಡು ಕೆಲವು ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಕಾಡಿನಲ್ಲಿ ಅಡಗಿ ಕುಳಿತ ಪ್ರಸಂಗವೂ ನಡೆಯಿತು.
11:10 PM (IST) Jun 06
ಇಸ್ರೇಲ್ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಇಸ್ರೇಲ್ನ ಕಾನ್ಸುಲ್ ಜನರಲ್ ಯಾನಿವ್ ರೆವಾಕ್ ಘೋಷಿಸಿದ್ದಾರೆ. ಭಾರತ ಮತ್ತು ಯಹೂದಿ ಜನಾಂಗದ ಐತಿಹಾಸಿಕ ಹೋರಾಟಗಳ ನಡುವೆ ಸಾಮ್ಯತೆ ಇದೆ, ಈ ಹೆಜ್ಜೆ ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲಿದೆಯೇ?
10:43 PM (IST) Jun 06
ವೈಭವ್ ಸೂರ್ಯವಂಶಿಗೆ ನೆರವಾಗಲು ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೈಭವ್ ಕೇವಲ 15ರ ಹುಡುಗ. ಹೀಗಾಗಿ ಆತನಿಗಾಗಿ ನಿಯಮ ಬದಲಿಸಿದ ಬಿಸಿಸಿಐ ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಹೇಳಿದೆ.
10:15 PM (IST) Jun 06
09:21 PM (IST) Jun 06
ಬಾಲಿವುಡ್ನಲ್ಲಿ ಸದ್ಯ ಮದುವೆ ಸೀಸನ್ ಜೋರಾಗಿದೆ. ಎಲ್ಲೆಲ್ಲೂ ಗ್ಲಾಮರ್, ಸಂಬಂಧಗಳು ಮತ್ತು ಸ್ಟಾರ್ ಪವರ್ ಬಗ್ಗೆಯೇ ಚರ್ಚೆ. ಅಮೀರ್ ಖಾನ್ ಅವರದ್ದು ಎನ್ನಲಾದ ಮದುವೆಯಿಂದ ಹಿಡಿದು, ಅನ್ಶುಲಾ ಕಪೂರ್ ಮತ್ತು..
08:55 PM (IST) Jun 06
ಒಬ್ಬ ಸ್ಟಾರ್ ಹೀರೋ ಮೊದಲ ಬಾರಿಗೆ ಪ್ರಭಾಸ್ ಮನೆಗೆ ಹೋಗಿ, ಸಿನಿಮಾ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದರಂತೆ. ಆ ಸಮಯದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ಪ್ರಭಾಸ್ ಹಂಚಿಕೊಂಡಿದ್ದಾರೆ.
08:23 PM (IST) Jun 06
ಐಪಿಎಲ್ನಲ್ಲಿ ಜಗತ್ತನ್ನೆ ಬೆರಗುಗೊಳಿಸಿದ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ ವೈಭವ್ ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.
08:17 PM (IST) Jun 06
ತಮಿಳು ನಟ ವಿಜಯ್ ಸೇತುಪತಿ ಹಾಗೂ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನೇಷನ್ನಲ್ಲಿ ಬರ್ತಿರೋ 'ಸ್ಲಂ ಡಾಗ್' ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜೂನ್ 8 ರಂದು ಟೀಸರ್ ಬಿಡುಗಡೆಯಾಗಲಿದೆ.
07:15 PM (IST) Jun 06
ರಾಮ್ ಚರಣ್ ಜೊತೆಗಿನ 'ಪೆದ್ದಿ' ಸಿನಿಮಾದಲ್ಲಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ವಿವಾದ ಎದ್ದಿದೆ. ಆದರೆ ಇದು ಮೊದಲೇನಲ್ಲ. ಈ ಹಿಂದೆಯೂ 'ಘೋಸ್ಟ್ ಸ್ಟೋರೀಸ್', 'ಉಲಝ್' ಮತ್ತು 'ದೇವರ ಪಾರ್ಟ್ 1' ನಂತಹ ಸಿನಿಮಾಗಳಲ್ಲಿ ಅವರ ಬೋಲ್ಡ್ ಮತ್ತು ರೊಮ್ಯಾಂಟಿಕ್ ದೃಶ್ಯಗಳು ಸಖತ್ ವೈರಲ್ ಆಗಿದ್ದವು.
06:39 PM (IST) Jun 06
ನಟಿ ಹಾಗೂ ಸಂಸದೆ ಕಂಗನಾ ರನೌತ್ ಅವರ ಮುಂಬರುವ 'ಭಾರತ್ ಭಾಗ್ಯ ವಿಧಾತ' ಚಿತ್ರದ ವಿಶೇಷ ಪ್ರದರ್ಶನವನ್ನು ಭುವನೇಶ್ವರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್..
05:24 PM (IST) Jun 06
ಬೆಂಗಳೂರು: ಇದೇ ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಇದರ ಜತೆಗೆ ಆರು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.
05:19 PM (IST) Jun 06
'ಕಭಿ ಹಾಂ ಕಭಿ ನಾ' ಚಿತ್ರವು ಕೇವಲ ಒಂದು ಸಿನಿಮಾ ಆಗಿರದೆ, ಅನೇಕ ಕಲಾವಿದರ ಬದುಕಿನ ಅವಿಸ್ಮರಣೀಯ ಭಾಗವಾಗಿ ಇಂದಿಗೂ ಉಳಿದುಕೊಂಡಿದೆ. ಸುಚಿತ್ರಾ ಅವರ ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿನಿಮಾ ಪ್ರೇಮಿಗಳು ಹಳೆಯ ನೆನಪುಗಳಿಗೆ ಜಾರುವಂತೆ ಮಾಡಿದೆ.
05:09 PM (IST) Jun 06
05:00 PM (IST) Jun 06
ಟೀಂ ಇಂಡಿಯಾ ಟಿ20 ನಾಯಕತ್ವ ಹಾಗೂ ಟಿ20 ತಂಡದಿಂದಲೂ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಶ್ರೇಯಸ್ ಅಯ್ಯರ್ಗೆ ಕ್ಯಾಪ್ಟೆನ್ಸಿ ನೀಡಲಾಗಿದೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಮೊದಲ ಪೋಸ್ಟ್ ಮೂಲಕ ಮನದಾಳ ಹೇಳಿಕೊಂಡಿದ್ದಾರೆ.
04:51 PM (IST) Jun 06
2026ನೇ ಸೀಸನ್ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಗುಜರಾತ್ ಟೈಟಾನ್ಸ್ ತಂಡವು ಫೈನಲ್ನಲ್ಲಿ ಆರ್ಸಿಬಿ ಎದುರು ಸೋತು ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಮೂವರಿಗೆ ಗೇಟ್ಪಾಸ್ ನೀಡಲು ಗುಜರಾತ್ ಫ್ರಾಂಚೈಸಿ ರೆಡಿಯಾಗಿದೆ.
04:43 PM (IST) Jun 06
ಡಿಜಿಟಲ್ ಯುಗದಲ್ಲಿ ಅನಿವಾರ್ಯವಾಗಿರುವ ಆಧಾರ್ ಕಾರ್ಡ್, ದುರುಪಯೋಗದ ಅಪಾಯವನ್ನೂ ಹೊಂದಿದೆ. ನಿಮ್ಮ ಅನುಮತಿಯಿಲ್ಲದೆ ಬೇರೆಯವರು ನಿಮ್ಮ ಆಧಾರ್ ಬಳಸುತ್ತಿದ್ದಾರೆಯೇ ಎಂದು ತಿಳಿಯಲು, ಅದರ ಬಳಕೆಯ ಇತಿಹಾಸವನ್ನು (Authentication History) ಸುಲಭವಾಗಿ ಪರಿಶೀಲಿಸಬಹುದು.
04:38 PM (IST) Jun 06
ಸಿಎಂ ವಿಜಯ್ ಮಾತಿನಂತೆ ನಿರ್ಮಾಣಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಿನಿಮಾ ರಿಲೀಸ್ಗೆ ಇರುವ ಅಡಚಣೆಗಳು ಕೊನೆಗೊಂಡ ಬಳಿಕ ಕೆವಿಎನ್ ಪ್ರೊಡಕ್ಷನ್ ಸ್ವತಂತ್ರವಾಗಿ ಚಿತ್ರದ ವಿತರಣೆ ಮಾಡಲಿದೆ.
04:26 PM (IST) Jun 06
ಜಾನ್ವಿ ಕಪೂರ್ಗೆ ಮಾತ್ರ ಸೌತ್ ಸಿನಿಮಾ ಯಶಸ್ಸಿನ ಬಾಗಿಲು ತೆರೆಯುತ್ತಿಲ್ಲ. ದೊಡ್ಡ ಸ್ಟಾರ್ ನಟರು, ಬಹು ಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ದಕ್ಷಿಣಕ್ಕೆ ಬಂದರೂ ಜಾನ್ವಿ ಕಪೂರ್ಗೆ ಯಶಸ್ಸು ಸಿಗುತ್ತಿಲ್ಲ.
01:39 PM (IST) Jun 06
01:19 PM (IST) Jun 06
Medical Shop in Indian Railway Station: ನೀವು ರೈಲ್ವೆ ಪ್ರಯಾಣಿಕರಾಗಿದ್ರೆ ಪ್ಲಾಟ್ಫಾರಂಗಳಲ್ಲಿ ಮೆಡಿಕಲ್ ಶಾಪ್ಗಳಿಲ್ಲದಿರೋದು ನಿಮ್ಮ ಗಮನಕ್ಕೂ ಬಂದಿರುತ್ತದೆ. ರೈಲ್ವೆ ನಿಯಮಗಳಲ್ಲಿನ ಬದಲಾವಣೆಯಿಂದ ಔಷಧಿ ಮಳಿಗೆಗಳು ಕಾಣಿಸಲ್ಲ.
12:31 PM (IST) Jun 06
ಭಾರತದಲ್ಲಿ ಫಿಫಾ ವಿಶ್ವಕಪ್ 2026 ರ ಪ್ರಸಾರ ಹಕ್ಕನ್ನು ಜೀ ಎಂಟರ್ಟೈನ್ಮೆಂಟ್ ಪಡೆದುಕೊಂಡಿದೆ. ಆನ್ಲೈನ್ನಲ್ಲಿ ವೀಕ್ಷಿಸಲು ಜೀ5 ಪ್ರೀಮಿಯಂ ಚಂದಾದಾರಿಕೆ (ಕನಿಷ್ಠ ₹299) ಕಡ್ಡಾಯವಾಗಿದ್ದು, ಟಿವಿಯಲ್ಲಿ ಯುನೈಟ್8 ಸ್ಪೋರ್ಟ್ಸ್ ಚಾನೆಲ್ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ.
12:10 PM (IST) Jun 06
ಕೇಂದ್ರ ಸರ್ಕಾರವು ಎಲ್ಪಿಜಿಗೆ ಪರ್ಯಾಯವಾಗಿ ಕಡಿಮೆ ವೆಚ್ಚದ, ಪರಿಸರಸ್ನೇಹಿ 'ಎಥನಾಲ್ ಆಧಾರಿತ ಅಡುಗೆ ಸ್ಟವ್' ಅನ್ನು ಪರಿಚಯಿಸಿದೆ. ಕೃಷಿ ಉತ್ಪನ್ನಗಳಿಂದ ತಯಾರಿಸಿದ ಎಥನಾಲ್ ಬಳಸಿ ಕಾರ್ಯನಿರ್ವಹಿಸುವ ಈ ಸ್ಟವ್, ಅಡುಗೆ ವೆಚ್ಚವನ್ನು ಕಡಿಮೆ ಮಾಡಲಿದೆ.
12:07 PM (IST) Jun 06
Indian Railways Free Travel Policy: ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ ಕೆಲವರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಹಾಗೆಯೇ ಈ ನಿಯಮಗಳಲ್ಲಿ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಹಾಗಾಗಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.
11:39 AM (IST) Jun 06
Gold Rate Today: ಕಳೆದ ಕೆಲದಿನಗಳಿಂದ ಸ್ವಲ್ಪ ಸ್ವಲ್ಪವೇ ಇಳಿಕೆಯತ್ತ ಮುಖಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಕುಸಿತ ಕಂಡಿದೆ. ಅಂದ ಹಾಗೆ ಜೂನ್ 06ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
11:15 AM (IST) Jun 06
10:43 AM (IST) Jun 06
Virat Kohli Injury Update ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದು ಮತ್ತಷ್ಟು ತಡವಾಗುವ ಸಾಧ್ಯತೆಯಿದೆ. ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಯಿಂದ ಹೊರಗುಳಿದಿರುವ ಕೊಹ್ಲಿ, ಮತ್ತೊಂದು ಮಹತ್ವದ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
10:28 AM (IST) Jun 06
09:56 AM (IST) Jun 06
08:39 AM (IST) Jun 06
08:26 AM (IST) Jun 06
08:26 AM (IST) Jun 06
08:14 AM (IST) Jun 06
07:25 AM (IST) Jun 06
07:15 AM (IST) Jun 06
05:37 AM (IST) Jun 06
05:30 AM (IST) Jun 06