LIVE NOW
Published : Aug 30, 2026, 07:09 AM ISTUpdated : Aug 30, 2026, 09:43 AM IST

India Latest News Live: ಇಂದಿನಿಂದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿ; ಸಿಂಗಲ್ಸ್‌ನಲ್ಲಿ ಗೆದ್ದರೆ ಸಿಗುತ್ತೆ ₹52.6 ಕೋಟಿ!

ಸಾರಾಂಶ

ಈ ವರ್ಷ 10 ಮತ್ತು 12ನೇ ತರಗತಿಯ ಪರೀಕ್ಷೆ ಬರೆಯಲಿರುವ ಬಿಹಾರದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಪಾಸ್‌ ಆದರೂ ಅವರ ಅಂಕಪಟ್ಟಿಯಲ್ಲಿ ‘ಫೇಲ್‌’ ಎಂದು ಬರೆಯುವುದಿಲ್ಲ. ಅದರ ಬದಲು ‘ಕೌಶಲ್ಯ ತರಬೇತಿಗೆ ಅರ್ಹ’ ಎಂದು ಬರೆಯಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಕಾರಾತ್ಮಕ ರೀತಿಯಲ್ಲಿ ನೈತಿಕ ಬಲ ತುಂಬಲು ಈ ಕ್ರಮ ಅನುಸರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಶಿಕ್ಷಣ ಸಚಿವ ಮಿಥಿಲೇಶ್‌ ತಿವಾರಿ, ‘ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಪಡೆಯಲು ವಿಫಲರಾದ ಮಾತ್ರಕ್ಕೆ ವಿದ್ಯಾರ್ಥಿಗಳ ಪ್ರತಿಭೆ ಮಾಯವಾಗುವುದಿಲ್ಲ. 10ನೇ ತರಗತಿಯ ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 1 ತಿಂಗಳ ಕಾಲ ವಿಶೇಷ ತರಗತಿ ನಡೆಸಲಾಗುವುದು. ಅನುತ್ತೀರ್ಣರಾದವರ ಪ್ರಮಾಣಪತ್ರಗಳಲ್ಲಿ ‘ಕೌಶಲ್ಯ ಅಭಿವೃದ್ಧಿಗೆ ಅರ್ಹ’ ಎಂದು ನಮೂದಿಸುವ ಬಗ್ಗೆ ಶೀಘ್ರ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಲಾಗುವುದು’ ಎಂದು ತಿಳಿಸಿದರು.

ಪಠ್ಯವನ್ನು ಹೊರತುಪಡಿಸಿದ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬಿಹಾರ ಸರ್ಕಾರ ಈಗಾಗಲೇ 1 ದಿನ ಪಾಟಿಚೀಲ ಇಲ್ಲದೆ ಶಾಲೆಗೆ ಬರುವ ಪರಿಪಾಠ ಆರಂಭಿಸಿದೆ.

09:43 AM (IST) Aug 30

ಇಂದಿನಿಂದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿ; ಸಿಂಗಲ್ಸ್‌ನಲ್ಲಿ ಗೆದ್ದರೆ ಸಿಗುತ್ತೆ ₹52.6 ಕೋಟಿ!

ವರ್ಷದ ಕೊನೆಯ ಗ್ರ್ಯಾನ್ ಸ್ಲಾಂ ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಚಾಲನೆ ದೊರೆತಿದೆ. ಜೋಕೋವಿಚ್, ಆಲ್ಕರಜ್, ಸಬಲೆಂಕಾ, ಸ್ವಿಯಾಟೆಕ್ ಸೇರಿದಂತೆ ವಿಶ್ವದ ಅಗ್ರ ಆಟಗಾರರು ಕಣದಲ್ಲಿದ್ದು, ಈ ಬಾರಿ ದಾಖಲೆಯ ₹52.6 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಲಾಗಿದೆ. ಆದರೆ, ಸಿಂಗಲ್ಸ್ ವಿಭಾಗದಲ್ಲಿ ಯಾವುದೇ ಭಾರತೀಯ ಆಟಗಾರರು ಸ್ಪರ್ಧಿಸುತ್ತಿಲ್ಲ.
Read Full Story

07:40 AM (IST) Aug 30

ಎವರೆಸ್ಟ್‌ ಎಗ್ ಕರಿ, ಚಿಕನ್, ಗರಂ ಮಸಾಲಾ & ಲಾಲ್ಜೀ ಇಂಗು ಮಾರಾಟದ ಮೇಲೆ ನಿರ್ಬಂಧ

ಕಳಪೆ ಗುಣಮಟ್ಟದ ಕಾರಣ ನೀಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎವರೆಸ್ಟ್‌ ಮತ್ತು ಲಾಲ್ಜೀ ಗೋಧೂ ಕಂಪನಿಗಳ ಇಂಗು ಮಾರಾಟವನ್ನು ನಿಷೇಧಿಸಿದೆ. ಈ ಕ್ರಮ ತಕ್ಷಣದಿಂದ ಜಾರಿಗೆ ಬಂದಿದ್ದು, ಎವರೆಸ್ಟ್‌ನ ಇತರ ಮೂರು ಮಸಾಲಾ ಉತ್ಪನ್ನಗಳಲ್ಲೂ ನಿಯಮ ಉಲ್ಲಂಘನೆ ಪತ್ತೆಯಾಗಿದೆ.
Read Full Story

More Trending News