ಇಂಫಾಲ: ಮಣಿಪುರದಲ್ಲಿ ನಾಗಾ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಕಾಂಗೋಕ್ಪಿ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಕುಳಿತಿದ್ದು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.
ಕುಕಿಗಳೇ ಹೆಚ್ಚಿರುವ ಜಿಲ್ಲೆಯಲ್ಲಿ ಕಳೆದ ತಿಂಗಳು ಮೂವರು ಪಾದ್ರಿಗಳನ್ನು ಹತ್ಯೆಗೈದ ಬಳಿಕ ಜಿಲ್ಲೆಯ ಮೇಲೆ ನಾಗಾಗಳು ಆರ್ಥಿಕ ದಿಗ್ಬಂಧನ ಹೇರಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ 1700 ರು.ಗೆ ಲಭ್ಯವಾಗುತ್ತಿದ್ದ 50 ಕೆಜಿ ಅಕ್ಕಿ ಚೀಲದ ಬೆಲೆ 5000 ರು.ಗೆ ತಲುಪಿದೆ. ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ 5000 ರು.ಗೆ ಮಾರಾಟ ಮಾಡಲಾಗುತ್ತಿದೆ, 1.ಲೀ ಪೆಟ್ರೋಲ್ ಬೆಲೆ 250 ರು.ನಿಂದ 280 ರು.ಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ದಿಗ್ಬಂಧನ ಅದೆಷ್ಟು ಪರಿಣಾಮಕಾರಿಯಾಗಿದೆ ಎಂದರೆ ಇತ್ತೀಚೆಗೆ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ನೇಮ್ಚ ಕಿಪ್ಗೆನ್, ಕಳೆದ 4 ತಿಂಗಳಿನಿಂದ ತಮ್ಮ ಜಿಲ್ಲೆಯನ್ನು ಬಿಟ್ಟು ಹೊರಬರಲಾಗದೆ ಆನ್ಲೈನ್ ಮೂಲಕವೇ ಸಂಪುಟ ಸಭೆಗೆ ಹಾಜರಾಗುತ್ತಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ರಾಜ್ಯದ ಮೇಲೆ ಹೇರಿದ್ದ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗಿತ್ತು. ಬಳಿಕ ನಡೆದ ಹಿಂಸಾಚಾರದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ.
09:29 PM (IST) Jun 28
Baahubali Facts: ಇಂದು ಭಾರತೀಯ ಚಿತ್ರರಂಗದ ಐತಿಹಾಸಿಕ ಯಶಸ್ವಿ ಸಿನಿಮಾ ಅಂತಾ ಕರೆಸಿಕೊಳ್ಳುವ 'ಬಾಹುಬಲಿ', ರಿಲೀಸ್ ಆದ ಮೊದಲ ದಿನವೇ ಭಾರೀ ನಷ್ಟ ಅನುಭವಿಸಿತ್ತಂತೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಅವರೇ ಮನಬಿಚ್ಚಿ ಮಾತನಾಡಿದ್ದಾರೆ.
08:31 PM (IST) Jun 28
Charu Asopa: ಖ್ಯಾತ ಟಿವಿ ನಟಿ ಚಾರು ಅಸೋಪಾ ಅವರು 'ಬಿಗ್ ಬಾಸ್ 20' ಶೋನ ದೊಡ್ಡ ಆಫರ್ ಅನ್ನು ತಿರಸ್ಕರಿಸಿದ್ದಾರೆ. ತನ್ನ ಮಗಳನ್ನು ಬಿಟ್ಟು ಇರಲು ಸಾಧ್ಯವಿಲ್ಲ, ಹಾಗಾಗಿ ಕೆರಿಯರ್ಗಿಂತ ಕುಟುಂಬವೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
08:19 PM (IST) Jun 28
ವೆನಿಜುವೆಲಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇತ್ತ ಸಾವಿನ ಸಂಖ್ಯೆ 1400 ದಾಟಿದರೆ, ನಾಪತ್ತೆಯಾದವರ ಸಂಖ್ಯೆ ಬರೋಬ್ಬರಿ 68,000.
06:34 PM (IST) Jun 28
Bollywood Reunion: ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಜೋಡಿ 'ವೆಲ್ಕಮ್ ಟು ದಿ ಜಂಗಲ್' ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದೆ. 90ರ ದಶಕದಲ್ಲಿ ಇವರಿಬ್ಬರು ಕೇವಲ ತೆರೆಯ ಮೇಲಿನ ಹಿಟ್ ಜೋಡಿಯಷ್ಟೇ ಆಗಿರಲಿಲ್ಲ.
06:03 PM (IST) Jun 28
ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ರಾಸ್ ತನುರಾದಲ್ಲಿ ಪತನಗೊಂಡಿದೆ. ಈ ಹೆಲಿಕಾಪ್ಟರ್ನಲ್ಲಿದ್ದ 14 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಹೆಲಿಕಾಪ್ಟರ್ ಪತನ ಹಲವು ಅನುಮಾನಕ್ಕೆ ಕಾರಣವಾಗಿದೆ.
05:36 PM (IST) Jun 28
Rajamouli: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುತ್ತಿದ್ದು, ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ.
05:17 PM (IST) Jun 28
Sunita Ahuja Interview: ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ ಗೋವಿಂದ ಪತ್ನಿ ಸುನಿತಾ ಅಹುಜಾ, ತಮ್ಮ ಪತಿಯ ಅಫೇರ್ಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
05:02 PM (IST) Jun 28
Samantha ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಈ ಚಿತ್ರದ ಗೆಲುವು ಸಮಂತಾಗೆ ಡಬಲ್ ಸಂಭ್ರಮ ತಂದುಕೊಟ್ಟಿದೆ. ಒಂದು ಕಡೆ ಸಿನಿಮಾ ಸೂಪರ್ ಹಿಟ್.
04:49 PM (IST) Jun 28
ಇತ್ತೀಚೆಗಷ್ಟೇ ನಿವಿನ್ ಪೌಲಿ ಅಭಿನಯದ 'ವರ್ಷಂಗಳ್ಕ್ಕು ಶೇಷಂ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಿಂಚಿತ್ತು. ಬಹಳ ಕಾಲದ ಬಳಿಕ ನಿವಿನ್ ಅವರಿಗೆ ಈ ಸಿನಿಮಾ ದೊಡ್ಡ ಗೆಲುವನ್ನು ತಂದುಕೊಟ್ಟಿತ್ತು. ಸದ್ಯ ಅದೇ ಹುಮ್ಮಸ್ಸಿನಲ್ಲಿರುವ ನಿವಿನ್, ತಮ್ಮ 50ನೇ ಸಿನಿಮಾವನ್ನು ಆಲ್ಫೋನ್ಸ್ ಪುತ್ರೇನ್ ಜೊತೆ ಮಾಡಲಿದ್ದಾರೆ.
04:43 PM (IST) Jun 28
Eetha Biopic: ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಚರಿತ್ರೆ ಆಧಾರಿತ, ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ವಿವಾದ ಹುಟ್ಟುಹಾಕಿದೆ.
04:31 PM (IST) Jun 28
Kriti Sanon: ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಬೀರ್ ಬೇರೊಬ್ಬ ಯುವತಿ ಜೊತೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆ ಚರ್ಚೆ ಶುರುಮಾಡಿದರು.
04:18 PM (IST) Jun 28
04:14 PM (IST) Jun 28
Anant Ambani News: ಅನಂತ್ ಅಂಬಾನಿ ಅವರು ಭಾನುವಾರ ತಿರುಪತಿಯ ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಸಾಂಪ್ರದಾಯಿಕವಾಗಿ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.
03:41 PM (IST) Jun 28
03:41 PM (IST) Jun 28
100 ಪರ್ಸೆಂಟ್ ಲಿಟ್ರಸಿ ಸಾರ್ ಎಂದರೆ ತಕ್ಷಣ ಕೇರಳ ನೆನಪಾಗುತ್ತದೆ. ಆದರೆ ಕೇರಳ ಭಾರತದ ಗರಿಷ್ಠ ಸಾಕ್ಷರತೆ ರಾಜ್ಯಗಳ ಪೈಕಿ 5ನೇ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಕೇರಳದಲ್ಲಿ ಶೇ.100ರಷ್ಟು ಸಾಕ್ಷರತೆ ಇಲ್ಲ. ಹಾಗಾದರೆ ಮೊದಲ ನಾಲ್ಕು ಸ್ಥಾನದಲ್ಲಿ ಯಾರಿದ್ದಾರೆ?
03:26 PM (IST) Jun 28
Range extender hybrid cars in India: ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಮಾರುತಿ ಸುಜುಕಿ ಸ್ವಿಫ್ಟ್ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಖರೀದಿ ಮತ್ತು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.
03:22 PM (IST) Jun 28
02:57 PM (IST) Jun 28
ಸರಂಕ್ಷಿತ ಅರಣ್ಯ, ವನ್ಯಜೀವಿಗಳ ತಾಣ, ಸಂರಕ್ಷಿತ ಕೆರೆ, ನದಿ ಸೇರಿದಂತೆ ಕೆಲ ಪ್ರದೇಶಗಳಿಗೆ ಟ್ರಿಪ್ ಹೋಗುವ ಮಂದಿ ಎಚ್ಚರವಹಿಸುವುದು ಅಗತ್ಯ. ಇದೀಗ ಹೀಗೆ ಪ್ಯಾಂಗಾಂಗ್ ಲೇಕ್ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
01:33 PM (IST) Jun 28
Electric Scooter: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಆದರೂ, ಇವುಗಳ ಬಗ್ಗೆ ಜನರಲ್ಲಿ ಇನ್ನೂ ಕೆಲವು ತಪ್ಪು ಕಲ್ಪನೆಗಳಿವೆ. ಅಂತಹ ಕೆಲವು ಪ್ರಮುಖ ತಪ್ಪುಗ್ರಹಿಕೆಗಳು ಯಾವುವು? ಮತ್ತು ನಿಜವಾದ ಸತ್ಯಾಂಶಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.
01:23 PM (IST) Jun 28
12:28 PM (IST) Jun 28
ಕೇರಳದ ಕೋಝಿಕ್ಕೋಡ್ನಲ್ಲಿ, ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಬಾಲಕರೊಂದಿಗೆ ಕಾಡಿಗೆ ಹೋಗಿ ನಾಪತ್ತೆಯಾಗಿದ್ದಾಳೆ. ಸ್ಮಾರ್ಟ್ಫೋನ್ ಮಾರಿ, ಬದುಕಲು ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಕಾಡಿನಲ್ಲಿ ಅಡಗಿಕೊಂಡಿದ್ದ ಈ ಮೂವರನ್ನು ಪೊಲೀಸರು ಮತ್ತು ಸ್ಥಳೀಯರು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
11:59 AM (IST) Jun 28
11:22 AM (IST) Jun 28
10:34 AM (IST) Jun 28
10:30 AM (IST) Jun 28
Actor Gaurav Khanna Akanksha Chamola Divorce: ಮದುವೆಯಾಗಿ 10 ವರ್ಷಗಳ ಬಳಿಕ ನಟ ಗೌರವ್ ಖನ್ನಾ, ಆಕಾಂಕ್ಷಾ ಛಮೋಲ ಅವರು ಡಿವೋರ್ಸ್ ಪಡೆಯಲಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ Lock UPP Season 2 ಶೋನಲ್ಲಿ ಆಕಾಂಕ್ಷಾ ಸ್ಪರ್ಧಿ. ಆ ವೇಳೆ ಅವರು ಡಿವೋರ್ಸ್ ವಿಷಯ ರಿವೀಲ್ ಮಾಡಿದ್ದಾರೆ.