LIVE NOW
Published : Mar 24, 2026, 05:16 AM ISTUpdated : Mar 24, 2026, 07:59 AM IST

India Latest News Live: 121 ಜನರಿದ್ದ ಸೇನಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನ! 60ಕ್ಕೂ ಅಧಿಕ ಸಾವು

ಸಾರಾಂಶ

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ನಡುವೆ ಜಾಗತಿಕವಾಗಿ ಚಿನ್ನ ಮತ್ತು ಬೆಳ್ಳಿಯ ದರಗಳು ಸೋಮವಾರ ಭಾರಿ ಕುಸಿದಿವೆ. ಬೆಂಗಳೂರಿನಲ್ಲಿ ಭಾನುವಾರ 1,45,970 ರು. ಇದ್ದ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10,320 ರು. ಇಳಿಕೆಯಾಗಿದ್ದು, 1,35,650 ರು. ಆಗಿದೆ.

ಅತ್ತ ಇದೇ ಪ್ರಮಾಣದ 22 ಕ್ಯಾರಟ್‌ ಹೊನ್ನಿನ ದರದಲ್ಲಿ 9,450 ರು. ಕುಸಿದು 1,24,350 ರು.ಗೆ ನಿಂತಿದೆ. 1 ಕೆ.ಜಿ. ಬೆಳ್ಳಿ ಬೆಲೆಯಲ್ಲೂ 15 ಸಾವಿರ ರು. ಇಳಿಕೆ ಆಗಿದ್ದು, 2.3 ಲಕ್ಷ ರು. ಆಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1.43 ಲಕ್ಷ ರು. ಇದ್ದರೆ, ಕೆ.ಜಿ. ಬೆಳ್ಳಿಗೆ 2.30 ಲಕ್ಷ ರು. ಆಗಿದೆ.

ಫ್ಯೂಚರ್‌ ಮಾರುಕಟ್ಟೆಯಲ್ಲೂ ಇದೇ ಟ್ರೆಂಡ್‌ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.10ರಷ್ಟು ಕುಸಿತವಾಗಿ 1.29 ಲಕ್ಷ ರು. ಆಗಿದೆ.

07:59 AM (IST) Mar 24

121 ಜನರಿದ್ದ ಸೇನಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನ! 60ಕ್ಕೂ ಅಧಿಕ ಸಾವು

ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನಗೊಂಡು 60ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ C-130 ವಿಮಾನ ಪತನವಾಗಿದ್ದು, ತಾಂತ್ರಿಕ ದೋಷದ ಶಂಕೆ ವ್ಯಕ್ತವಾಗಿದೆ. ಇಂಜಿನ್ ವೈಫಲ್ಯವೇ ಅಥವಾ ಬೇರೆ ಕಾರಣವಿದೆಯೇ? ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
Read Full Story

07:42 AM (IST) Mar 24

19 ಕೋಟಿ ನೀಡಿ ಹೋರ್ಮುಜ್‌ ಮೂಲಕ ಹೋಗಿ; ಅಮೆರಿಕದ 48 ಗಂಟೆಗಳ ಬೆದರಿಕೆ ಬೆನ್ನಲ್ಲೇ ಈ ಕ್ರಮ

ಯುದ್ಧಪೀಡಿತ ಹೋರ್ಮುಜ್‌ ಜಲಸಂಧಿ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಂದ 18.8 ಕೋಟಿ ರು. ಶುಲ್ಕ ವಸೂಲಿ ಮಾಡಲು ಇರಾನ್‌ ನಿರ್ಧರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆದರಿಕೆಯ ಬೆನ್ನಲ್ಲೇ ಈ ಕ್ರಮಕ್ಕೆ ಮುಂದಾಗಿದೆ.

Read Full Story

07:18 AM (IST) Mar 24

ಟ್ರಂಪ್‌ ಏನು ಮಾಡ್ತಾರೋ ಅದನ್ನೇ ನಾವೂ ಮಾಡ್ತೇವೆ - ಅಮೆರಿಕಾ ಜೊತೆ ಮಾತುಕತೆ ನಡೆದಿಲ್ಲ ಎಂದ ಇರಾನ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ 48 ಗಂಟೆಗಳ ಗಡುವಿಗೆ ಇರಾನ್‌ ಬಗ್ಗಿಲ್ಲ. ನಮ್ಮ ವಿದ್ಯುತ್‌ ಘಟಕಗಳ ಮೇಲೆ ದಾಳಿ ನಡೆಸಿದರೆ, ನಾವೂ ಅದನ್ನೇ ಮಾಡುತ್ತೇವೆ ಮತ್ತು ಕೊಲ್ಲಿಯಲ್ಲಿ ಸಮುದ್ರ ಸ್ಫೋಟಕಗಳನ್ನು ಅಳವಡಿಸುತ್ತೇವೆ ಎಂದು ಇರಾನ್‌ ಪ್ರತಿಬೆದರಿಕೆ ಒಡ್ಡಿದೆ. 

Read Full Story

06:42 AM (IST) Mar 24

ದೇಶದ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತಾ ಮೋದಿ ಸರ್ಕಾರ? ವಿತ್ತ ಸಚಿವರ ಸ್ಪಷ್ಟನೆ

ಕೇಂದ್ರ ಸರ್ಕಾರದ ಮುಂದೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ. ಬದಲಾಗಿ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು.

Read Full Story

06:05 AM (IST) Mar 24

ಒಂದೇ ದಿನ ಸೆನ್ಸೆಕ್ಸ್1836, ನಿಫ್ಟಿ 601 ಅಂಕ ಇಳಿಕೆ; ಹೂಡಿಕೆದಾರರಿಗೆ 15 ಲಕ್ಷ ಕೋಟಿ ನಷ್ಟ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಷೇರುಪೇಟೆ ಸೂಚ್ಯಂಕಗಳು ತೀವ್ರವಾಗಿ ಕುಸಿದು, ಹೂಡಿಕೆದಾರರು ಒಂದೇ ದಿನದಲ್ಲಿ 15 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದರೊಂದಿಗೆ, ಚಿನ್ನ ಮತ್ತು ಬೆಳ್ಳಿಯ ದರಗಳು ಕುಸಿದಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.
Read Full Story

05:59 AM (IST) Mar 24

ಮಧ್ಯಪ್ರಾಚ್ಯದ ಕಿಡಿ, ದೇಶದಲ್ಲಿ LPG ಬಿಕ್ಕಟ್ಟು - ಭಾರತಕ್ಕೆ ಮೋದಿ ನೀಡಿದ ಸಂದೇಶವೇನು?

ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಭಾರತದ ಮೇಲೆ ದೀರ್ಘಕಾಲೀನ ಪರಿಣಾಮಗಳಾಗುವ ಸಾಧ್ಯತೆಯಿದೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಕೋವಿಡ್‌ ಸಮಯದಂತೆ ದೇಶ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದ್ದಾರೆ.

Read Full Story

05:48 AM (IST) Mar 24

ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿರುವುದು ನಮಗೆ; ಖರ್ಗೆ ಮಾತಿಗೆ ಕೆಂಡಾಮಂಡಲರಾದ HD ದೇವೇಗೌಡ

ತಮ್ಮ ಮತ್ತು ಮೋದಿ ಮೈತ್ರಿ ಕುರಿತು ಮಲ್ಲಿಕಾರ್ಜುನ ಖರ್ಗೆಯವರ 'ಪ್ರೀತಿ-ಮದುವೆ' ಟೀಕೆಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 2014ರಿಂದಲೇ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯವಿದೆ ಎಂದು ಹೇಳಿದ್ದಾರೆ.

Read Full Story

05:36 AM (IST) Mar 24

Israel Iran Conflict - ಇದ್ದಕ್ಕಿದ್ದಂತೇ 5 ದಿನ ಕದನವಿರಾಮ ಘೋಷಿಸಿ ಡೊನಾಲ್ಡ್ ಟ್ರಂಪ್ ನಿಗೂಢ ನಡೆ

ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ಕಾಲ ಮುಂದೂಡಿದ್ದಾರೆ. ಮಧ್ಯ ಏಷ್ಯಾ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್‌ನ ಉನ್ನತ ನಾಯಕರೊಂದಿಗೆ ರಚನಾತ್ಮಕ ಮಾತುಕತೆ ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. 

Read Full Story

More Trending News