Published : Mar 24, 2026, 05:16 AM ISTUpdated : Mar 24, 2026, 10:40 PM IST

India Latest News Live: ರಾಜಸ್ಥಾನ ರಾಯಲ್ಸ್‌ ಮಾಜಿ ಆಟಗಾರ ಈಗ RCB ಹೊಸ ಬಾಸ್‌ - ಯಾರು ಈ ಆರ್ಯಮಾನ್‌ ಬಿರ್ಲಾ?

ಸಾರಾಂಶ

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ನಡುವೆ ಜಾಗತಿಕವಾಗಿ ಚಿನ್ನ ಮತ್ತು ಬೆಳ್ಳಿಯ ದರಗಳು ಸೋಮವಾರ ಭಾರಿ ಕುಸಿದಿವೆ. ಬೆಂಗಳೂರಿನಲ್ಲಿ ಭಾನುವಾರ 1,45,970 ರು. ಇದ್ದ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10,320 ರು. ಇಳಿಕೆಯಾಗಿದ್ದು, 1,35,650 ರು. ಆಗಿದೆ.

ಅತ್ತ ಇದೇ ಪ್ರಮಾಣದ 22 ಕ್ಯಾರಟ್‌ ಹೊನ್ನಿನ ದರದಲ್ಲಿ 9,450 ರು. ಕುಸಿದು 1,24,350 ರು.ಗೆ ನಿಂತಿದೆ. 1 ಕೆ.ಜಿ. ಬೆಳ್ಳಿ ಬೆಲೆಯಲ್ಲೂ 15 ಸಾವಿರ ರು. ಇಳಿಕೆ ಆಗಿದ್ದು, 2.3 ಲಕ್ಷ ರು. ಆಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1.43 ಲಕ್ಷ ರು. ಇದ್ದರೆ, ಕೆ.ಜಿ. ಬೆಳ್ಳಿಗೆ 2.30 ಲಕ್ಷ ರು. ಆಗಿದೆ.

ಫ್ಯೂಚರ್‌ ಮಾರುಕಟ್ಟೆಯಲ್ಲೂ ಇದೇ ಟ್ರೆಂಡ್‌ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.10ರಷ್ಟು ಕುಸಿತವಾಗಿ 1.29 ಲಕ್ಷ ರು. ಆಗಿದೆ.

10:41 PM (IST) Mar 24

ರಾಜಸ್ಥಾನ ರಾಯಲ್ಸ್‌ ಮಾಜಿ ಆಟಗಾರ ಈಗ RCB ಹೊಸ ಬಾಸ್‌ - ಯಾರು ಈ ಆರ್ಯಮಾನ್‌ ಬಿರ್ಲಾ?

ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತಕ್ಕೆ ಆರ್‌ಸಿಬಿ ತಂಡ ಮಾರಾಟವಾಗಿದ್ದು, ಆದಿತ್ಯ ಬಿರ್ಲಾ ಗ್ರೂಪ್‌ ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಒಕ್ಕೂಟ ಇದನ್ನು ಖರೀದಿಸಿದೆ.   ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮಾನ್‌ ವಿಕ್ರಮ್‌ ಬಿರ್ಲಾ ಆರ್‌ಸಿಬಿಯ ನೂತನ ಚೇರ್ಮನ್‌ ಆಗಿ ನೇಮಕಗೊಂಡಿದ್ದಾರೆ.

Read Full Story

10:02 PM (IST) Mar 24

Breaking - 16,706 ಕೋಟಿ ರೂಪಾಯಿಗೆ ಮಾರಾಟವಾದ RCB - ಆದಿತ್ಯ ಬಿರ್ಲಾ-ಟೈಮ್ಸ್‌ ಗ್ರೂಪ್‌ ಹೊಸ ಮಾಲೀಕರು!

ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು 1.78 ಬಿಲಿಯನ್ ಡಾಲರ್‌ಗೆ ಖರೀದಿಸಿದೆ. ಈ ಒಪ್ಪಂದದ ಅಡಿಯಲ್ಲಿ, ಆದಿತ್ಯ ಬಿರ್ಲಾ ಗ್ರೂಪ್‌ನ ಆರ್ಯಮಾನ್‌ ವಿಕ್ರಮ್‌ ಬಿರ್ಲಾ ಆರ್‌ಸಿಬಿಯ ಹೊಸ ಚೇರ್ಮನ್‌ ಆಗಿ ನೇಮಕಗೊಂಡಿದ್ದಾರೆ.

Read Full Story

08:32 PM (IST) Mar 24

ಬಿಯರ್‌, ಸಾಫ್ಟ್‌ಡ್ರಿಂಕ್‌ಗೆ ತಟ್ಟಿದ ಇರಾನ್‌ ಯುದ್ಧದ ಎಫೆಕ್ಟ್‌, ಬೇಸಿಗೆಯಲ್ಲೇ ಭಾರೀ ಬೆಲೆ ಏರಿಕೆ!

ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾದ ಅನಿಲ ಕೊರತೆಯು ಪ್ಯಾಕೇಜಿಂಗ್ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ, ಭಾರತದಲ್ಲಿನ ಪ್ರಮುಖ ಮದ್ಯ ತಯಾರಿಕಾ ಕಂಪನಿಗಳು ಬಿಯರ್ ಬೆಲೆಯಲ್ಲಿ ಶೇ. 12-15ರಷ್ಟು ಏರಿಕೆ ಮಾಡಲು ಸರ್ಕಾರದ ಅನುಮತಿ ಕೋರುತ್ತಿವೆ. 

Read Full Story

08:22 PM (IST) Mar 24

Yami Gautam - ಮದುವೆಯಲ್ಲಿ ಅಮ್ಮನ ಸೀರೆ ಯಾಕೆ ಉಟ್ಟಿದ್ರು ಯಾಮಿ? ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟಿ!

ಯಾಮಿ ಗೌತಮ್ ಅವರ ಪತಿ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Read Full Story

08:16 PM (IST) Mar 24

ಇದು ಡಿಸೇಲ್‌ನಿಂದ ಚಾಲಿತವಾಗುವ ಇಲೆಕ್ಟ್ರಿಕ್ ಬಸ್ - ಹೇಗೆ ಅಂತೀರಾ ವೀಡಿಯೋ ನೋಡಿ

ಇಲೆಕ್ಟ್ರಿಕ್ ಬಸ್‌ ಒಂದನ್ನು ಚಾರ್ಜ್ ಮಾಡಲು ಡೀಸೆಲ್ ಜನರೇಟರ್ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಇಲೆಕ್ಟ್ರಿಕ್ ವಾಹನಗಳ ಮೂಲ ಉದ್ದೇಶ ಮತ್ತು ದೇಶದಲ್ಲಿನ ಚಾರ್ಜಿಂಗ್ ಮೂಲಸೌಕರ್ಯದ ಕೊರತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

07:30 PM (IST) Mar 24

'ಹೆಂಗಸ್ರಿಗೆ ಫ್ರೀ ಫ್ರಿಜ್‌, ಶಿಕ್ಷಣ ಸಾಲ ಸಂಪೂರ್ಣ ಮನ್ನಾ..' ಚುನಾವಣೆಗೆ ಜಯಮ್ಮನ ಪಕ್ಷದಿಂದ ಭರ್ಜರಿ ಪ್ರಣಾಳಿಕೆ!

ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಗೃಹಿಣಿಯರಿಗೆ ಉಚಿತ ಫ್ರಿಡ್ಜ್ ಮತ್ತು ಯುವಕರಿಗೆ ಶೈಕ್ಷಣಿಕ ಸಾಲ ಮನ್ನಾದಂತಹ ಪ್ರಮುಖ ಭರವಸೆಗಳನ್ನು ನೀಡಿದೆ. 

Read Full Story

06:51 PM (IST) Mar 24

ರೈಲ್ವೆ ಚಾಲನಾ ಸಿಬ್ಬಂದಿ ಭತ್ಯೆ ಪರಿಷ್ಕರಣೆ - ಸರ್ಕಾರದ ಹೊಸ ಆದೇಶ, ರಾಮನವಮಿಗೆ ಬಿಗ್ ಗಿಫ್ಟ್

ಕೇಂದ್ರ ಸರ್ಕಾರವು ಭಾರತೀಯ ರೈಲ್ವೆಯ ಚಾಲನಾ ಸಿಬ್ಬಂದಿಗೆ ಜನವರಿ 1, 2024 ರಿಂದ ಅನ್ವಯವಾಗುವಂತೆ ಕಿಲೋಮೀಟರ್ ಭತ್ಯೆ ಮತ್ತು ALK ದರಗಳನ್ನು ಪರಿಷ್ಕರಿಸಿದೆ. 8ನೇ ವೇತನ ಆಯೋಗ ಜಾರಿಗೆ ಬರುವ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದು, ಇದು ಸಿಬ್ಬಂದಿಯ ದೀರ್ಘಕಾಲದ ಬೇಡಿಕೆಗೆ ಸ್ಪಂದನೆಯಾಗಿದೆ. ಈ ಪರಿಷ್ಕರಣೆಯಿಂದ ಲೊಕೋಪೈಲಟ್‌ಗಳು, ಗಾರ್ಡ್‌ಗಳು ಸೇರಿದಂತೆ ಚಾಲನಾ ಸಿಬ್ಬಂದಿಗೆ ಆರ್ಥಿಕವಾಗಿ ಗಣನೀಯ ಲಾಭವಾಗಲಿದೆ.
Read Full Story

06:42 PM (IST) Mar 24

ಐದು ದಿನಗಳ ಕದನ ವಿರಾಮ ಘೋಷಣೆ ಬೆನ್ನಲ್ಲಿಯೇ ಪ್ರಧಾನಿ ಮೋದಿ ಜೊತೆ ಮಾತನಾಡಿದ ಡೊನಾಲ್ಡ್‌ ಟ್ರಂಪ್‌!

ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾರೆ. ಇರಾನ್ ಜೊತೆ ಅಮೆರಿಕಾದ ಸಂಧಾನದ ವರದಿಗಳ ನಡುವೆಯೂ, ಇರಾನ್ ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Read Full Story

06:18 PM (IST) Mar 24

3 ಲಕ್ಷ ಕೋಟಿ ಒಡೆಯ ಅಜೀಂ ಪ್ರೇಮ್​ಜಿ ಬೆಂಗಳೂರಿನ ಮನೆಗೆ ಹಳ್ಳಿಯ ಸ್ಪರ್ಶ - ಸಿಂಪಲ್​ ಮನೆ ಹೀಗಿದೆ ನೋಡಿ

ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ ಅವರ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿರುವ 350 ಕೋಟಿ ಮೌಲ್ಯದ ಬಂಗಲೆಯು ಸರಳತೆ ಮತ್ತು ಪರಿಸರ ಸ್ನೇಹಿ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. 6 ಸಾವಿರ ಚದರ ಅಡಿ ವಿಸ್ತೀರ್ಣದ ಈ ಫಾರ್ಮ್‌ಹೌಸ್ ಶೈಲಿಯ ನಿವಾಸವು ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪ ಹೊಂದಿದೆ.

Read Full Story

06:14 PM (IST) Mar 24

ಅಂತಿಮ ಕ್ಷಣದಲ್ಲಿ ಜೊತೆಗಿದ್ದ ತಾಯಿ, ನರಕ ಯಾತನೆ ಅಂತ್ಯಗೊಳಿಸಿ ನೋವಿಲ್ಲದ ಸಾವು ಕಂಡ ಹರೀಶ್ ರಾಣಾ

ಅಂತಿಮ ಕ್ಷಣದಲ್ಲಿ ಜೊತೆಗಿದ್ದ ತಾಯಿ, ನರಕ ಯಾತನೆ ಅಂತ್ಯಗೊಳಿಸಿ ನೋವಿಲ್ಲದ ಸಾವು ಕಂಡ ಹರೀಶ್ ರಾಣಾ , ಅಂತಿಮ ಕ್ಷಣಗಳಲ್ಲಿ ತಾಯಿಗೆ ಮಾತ್ರ ಜೊತೆಯಲ್ಲಿರಲು ಅವಕಾಶ ನೀಡಲಾಗಿತ್ತು. 2013ರಿಂದ ಕೋಮಾದಲ್ಲಿದ್ದ ಹರೀಶ್ ನೋವಿಲ್ಲದ ಲೋಕಕ್ಕೆ ಪಯಣ.

 

Read Full Story

06:02 PM (IST) Mar 24

ಚಿನ್ನದ ಹಾಲ್‌ಮಾರ್ಕ್‌ ರಹಸ್ಯ - 24 ಕ್ಯಾರೆಟ್ ನಿಂದ ಹಿಡಿದು 6 ಕ್ಯಾರೆಟ್ ವರೆಗೆ, ಬಂಗಾರದ ಈ ಸತ್ಯ ನಿಮಗೆ ಗೊತ್ತಾ?

ಚಿನ್ನದ ಶುದ್ಧತೆಯನ್ನು ಕ್ಯಾರೆಟ್ (K) ಮೂಲಕ ಅಳೆಯಲಾಗುತ್ತದೆ. ಈ ಲೇಖನವು 24K, 22K, 18K, ಮತ್ತು 14K ಚಿನ್ನದ ನಡುವಿನ ವ್ಯತ್ಯಾಸ, ಅವುಗಳ ಬಳಕೆ, ಮತ್ತು ನಿಮ್ಮ ಹೂಡಿಕೆ, ಆಭರಣ ಅಥವಾ ದೈನಂದಿನ ಬಳಕೆಗೆ ಯಾವುದು ಸೂಕ್ತ ಎಂಬುದನ್ನು ವಿವರಿಸುತ್ತದೆ.
Read Full Story

05:57 PM (IST) Mar 24

ರೈಲ್ವೆ ಪ್ರಯಾಣದ ಮಧ್ಯೆ ಅಸ್ವಸ್ಥಗೊಂಡ ಮಗು - ಆಮೇಲಾಗಿದ್ದೇನು? ಅಮ್ಮನ ವೀಡಿಯೋ ಭಾರಿ ವೈರಲ್

ಇಲ್ಲೊಂದು ಕಡೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾತು ಆಡಲು ಬಾರದ ಪುಟ್ಟ ಮಗುವೊಂದು ಅಸ್ವಸ್ಥಗೊಂಡಿದ್ದು, ಈ ವೇಳೆ ರೈಲ್ವೆ ಇಲಾಖೆಯ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಮಗುವಿನ ತಾಯಿಯೊಬ್ಬರು ಧನ್ಯವಾದ ಹೇಳಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

05:27 PM (IST) Mar 24

Nagarjuna Dream Role - ನಾಗಾರ್ಜುನ ಅವರ ಡ್ರೀಮ್ ರೋಲ್ ಯಾವುದು ಗೊತ್ತಾ? ರಾಜಮೌಳಿಗೇ ಹಿಂಟ್ ಕೊಟ್ಟ 'ಕಿಂಗ್'!

ಕಮರ್ಷಿಯಲ್ ಹೀರೋ ಆಗಿ ಮಿಂಚಿದ್ದ ನಾಗಾರ್ಜುನ, ಭಕ್ತಿ ಪ್ರಧಾನ ಚಿತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ಈ ನಟನ ಡ್ರೀಮ್ ರೋಲ್ ಯಾವುದು ಗೊತ್ತಾ? ಸ್ವತಃ ನಾಗ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.

Read Full Story

05:12 PM (IST) Mar 24

ಇಳಯರಾಜಾ ಬೇಡಿಕೊಂಡರೂ ಹಾಡಲು ಒಪ್ಪದ ಯೇಸುದಾಸ್ - ಇಲ್ಲಿದೆ ಆ ಮಾಸ್ಟರ್‌ಪೀಸ್ ಹಾಡು ಹುಟ್ಟಿದ ಕಥೆ!

ಇಸೈಜ್ಞಾನಿ ಇಳಯರಾಜಾ ಅವರ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಹಾಡಲು ಯೇಸುದಾಸ್ ಅವರಿಗೆ ಕರೆ ಬಂದಿತ್ತು. ಆದರೆ, ರೆಕಾರ್ಡಿಂಗ್‌ಗೆ ತಡವಾಗಿ ಬಂದ ಯೇಸುದಾಸ್, ಆ ಹಾಡನ್ನು ಹಾಡಲು ನಿರಾಕರಿಸಿ ವಾಪಸಾದರು. ಆ ಘಟನೆಯ ಬಗ್ಗೆ ಇಲ್ಲಿ ನೋಡೋಣ.

Read Full Story

05:04 PM (IST) Mar 24

ಸಂಸತ್ತಿನಲ್ಲಿ ರಾಘವ್‌ ಚಡ್ಡಾ ಗುಡುಗು, 28 ದಿನಗಳ ರಿಚಾರ್ಜ್‌ ಪ್ಲ್ಯಾನ್‌ಗೆ ಬ್ರೇಕ್‌, ಇನ್ನು ಮಾಸಿಕ 30 ದಿನಗಳ ರಿಚಾರ್ಜ್‌!

ಟೆಲಿಕಾಂ ಕಂಪನಿಗಳು ನೀಡುವ 28 ದಿನಗಳ 'ಮಾಸಿಕ' ರಿಚಾರ್ಜ್ ಪ್ಲ್ಯಾನ್‌ಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ, 30 ದಿನಗಳ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಗ್ರಾಹಕರ ಹಿತಾಸಕ್ತಿ ಕಾಪಾಡಲು ಟ್ರಾಯ್ ಈ ನಿಯಮಗಳನ್ನು ಮರುಪರಿಶೀಲಿಸುತ್ತಿದೆ.
Read Full Story

04:47 PM (IST) Mar 24

ಚೀನಾ AI ಯುಗಕ್ಕೆ ಸರಿಯಾಗಿ ಶಿಕ್ಷಣ ನೀಡುತ್ತಿದೆ, ಭಾರತ ಇನ್ನೂ ಟಾಪರ್‌ಗಳ ಆಯ್ಕೆ, ಅಂಕಗಳನ್ನೇ ಕೇಳುತ್ತಿದೆ!

ಚೀನಾದ 'ಡಬಲ್ ರಿಡಕ್ಷನ್' ನೀತಿಯು ಶಿಕ್ಷಣವನ್ನು ಕಂಠಪಾಠದಿಂದ ಅನ್ವಯಿಕ ಕಲಿಕೆಯತ್ತ ಬದಲಿಸುತ್ತಿದೆ. ಇದಕ್ಕೆ ವಿರುದ್ಧವಾಗಿ, ಭಾರತದ ಶಿಕ್ಷಣ ವ್ಯವಸ್ಥೆಯು ಇನ್ನೂ ಪರೀಕ್ಷಾ-ಕೇಂದ್ರಿತವಾಗಿದ್ದು, ಪದವೀಧರರಲ್ಲಿ ಉದ್ಯೋಗಾರ್ಹತೆಯ ಕೊರತೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುತ್ತಿದೆ. ಈ ಲೇಖನವು ಎರಡೂ ದೇಶಗಳ ಶಿಕ್ಷಣದ ದಿಕ್ಕನ್ನು ವಿಶ್ಲೇಷಿಸುತ್ತದೆ.
Read Full Story

04:45 PM (IST) Mar 24

ಅಮೆರಿಕನ್ ಉದ್ಯಮಿ ಕಲ್ ಸೋಮಾನಿಗೆ ರಾಜಸ್ಥಾನ ರಾಯಲ್ಸ್ ಮಾರಾಟ, 15 ಸಾವಿರ ಕೋಟಿ ಡೀಲ್

ಅಮೆರಿಕನ್ ಉದ್ಯಮಿ ಕಲ್ ಸೋಮಾನಿಗೆ ರಾಜಸ್ಥಾನ ರಾಯಲ್ಸ್ ಮಾರಾಟ, 15 ಸಾವಿರ ಕೋಟಿ ಡೀಲ್,  ವಿಶೇಷ ಅಂದರೆ ಸೋಮಾನಿ ಜೊತೆ ಫ್ಲಿಪ್‌ಕಾರ್ಟ್ ಮಾಲೀಕ ಕೂಡ ಸೇರಿಕೊಂಡು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದ್ದಾರೆ. 

Read Full Story

04:15 PM (IST) Mar 24

ದಂತವೈದ್ಯನ ಎಡವಟ್ಟಿಗೆ ಮಹಿಳೆ ಬಲಿ - ಹಲ್ಲು ಕೀಳಿಸಲು ಹೋಗಿ ಪ್ರಾಣನೇ ಹೋಯ್ತು

tooth extraction gone wrong: ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ನಂತರ ಆರೋಪಿ ವೈದ್ಯ ಪರಾರಿಯಾಗಿದ್ದು, ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Read Full Story

03:40 PM (IST) Mar 24

ಜೂನ್​ ತಿಂಗಳಲ್ಲಿ ಟಾಕ್ಸಿಕ್ Vs ಧುರಂಧರ್-3? ಮತ್ತೆ ರಾಕಿಗೆ ಕಾಟ ಕೊಡಲು ಬರ್ತಾರಾ ರಣವೀರ್..?

ಧುರಂಧರ್-2 ಚಿತ್ರದ ಅಬ್ಬರದ ಯಶಸ್ಸಿನಿಂದಾಗಿ, ಅದೇ ದಿನ ಬಿಡುಗಡೆಯಾಗಬೇಕಿದ್ದ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವನ್ನು ಮುಂದೂಡಿದ್ದು ಉತ್ತಮ ನಿರ್ಧಾರವಾಯಿತು. ಈಗ 'ಟಾಕ್ಸಿಕ್' ಚಿತ್ರಕ್ಕೆ ಎದುರಾಗಿ 'ಧುರಂಧರ್-3' ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದರ ಹಿಂದಿನ ಸತ್ಯಾಸತ್ಯತೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

03:21 PM (IST) Mar 24

ಅಮೆರಿಕಾ ಹೇಳಿಕೆ ಬೆನ್ನಲೇ ತನ್ನ ಭೂಗತ ಕ್ಷಿಪಣಿ ಶಸ್ತ್ರಾಗಾರದ ವೀಡಿಯೋ ಹರಿಬಿಟ್ಟ ಇರಾನ್

ಅಮೆರಿಕ-ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ, ಇರಾನ್ ತನ್ನ ಬೃಹತ್ ಭೂಗತ ಮಿಲಿಟರಿ ಸಂಕೀರ್ಣದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸುಧಾರಿತ ಕ್ಷಿಪಣಿಗಳನ್ನು ಪ್ರದರ್ಶಿಸಲಾಗಿದ್ದು ಈ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯ ಕುಗ್ಗಿಲ್ಲ ಎಂದು ಇರಾನ್ ಜಗತ್ತಿಗೆ ಸಾರಿದೆ.

Read Full Story

03:10 PM (IST) Mar 24

ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಅಲ್ಪ ಮೊತ್ತ ಹೂಡಿಕೆ ಮಾಡಿ ಗಳಿಸಿ 25 ಲಕ್ಷ ರೂ ರಿಟರ್ನ್ಸ್

ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಅಲ್ಪ ಮೊತ್ತ ಹೂಡಿಕೆ ಮಾಡಿ ಗಳಿಸಿ 25 ಲಕ್ಷ ರೂ ರಿಟರ್ನ್ಸ್, ಕೇಂದ್ರ ಸರ್ಕಾರ ಬೆಂಬಲಿತ ಸ್ಕೀಮ್ ಇದಾಗಿದ್ದು, ಸುರಕ್ಷಿತ ಹೂಡಿಕೆ ಪ್ಲಾನ್ ಆಗಿದೆ. ಮಾರುಕಟ್ಟೆಗಳ ಏರಿಳಿತ ಈ ಸ್ಕೀಮ್‌ಗೆ ಯಾವುದೇ ಸಮಸ್ಯೆ ಸೃಷ್ಟಿಸುವುದಿಲ್ಲ.

 

Read Full Story

02:17 PM (IST) Mar 24

ಮತಾಂತರವಾದ ವ್ಯಕ್ತಿ ಪರಿಶಿಷ್ಟ ಜಾತಿಯಿಂದ ಹೊರಕ್ಕೆ - ಮಹತ್ವದ ತೀರ್ಪಿನಲ್ಲಿ ಸುಪ್ರೀಂಕೋರ್ಟ್​ ಹೇಳಿದ್ದೇನು?

ಕ್ರಿಶ್ಚಿಯನ್ ಸೇರಿದಂತೆ ಇತರೆ ಧರ್ಮಕ್ಕೆ ಮತಾಂತರಗೊಳ್ಳುವ ಪರಿಶಿಷ್ಟ ಜಾತಿ ಸಮುದಾಯದ ವ್ಯಕ್ತಿಗಳು, ಆ ಸಮುದಾಯಕ್ಕೆ ಸಿಗುವ ಪ್ರಯೋಜನಗಳನ್ನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದವರನ್ನು ಮಾತ್ರ ಪರಿಶಿಷ್ಟ ಜಾತಿ ಎಂದು ಪರಿಗಣಿಸಬಹುದು ಎಂಬ ಆಂಧ್ರಪ್ರದೇಶ ಹೈಕೋರ್ಟ್ ತೀರ್ಪನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Read Full Story

02:06 PM (IST) Mar 24

ಕಾಲುವೆ ಬಳಿ ತಲೆ ಇಲ್ಲದ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ - 3 ಮಕ್ಕಳ ತಾಯಿಗೆ ಗೆಳೆಯನೇ ಮುಹೂರ್ತವಿಟ್ಟಿದ್ದೇಕೆ

boyfriend killed widow: ಕೆಲ ದಿನಗಳ ಹಿಂದೆ ಕಾಲುವೆಯೊಂದರ ಬಳಿ ಮಹಿಳೆಯೊಬ್ಬರ ತಲೆ ಇಲ್ಲದ ಶವ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮಹಿಳೆಯ ಬಾಯ್‌ಫ್ರೆಂಡ್ ಹಾಗೂ ಆತನ ಸಂಬಂಧಿಯನ್ನು ಬಂಧಿಸಿದ್ದಾರೆ. ಪ್ರಕರಣದ ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

01:53 PM (IST) Mar 24

ಸರ್ಕಾರಿ ನೌಕರಿ ಸಿಗ್ತಿದ್ದಂತೆ ನಿನ್ನ ಅಗತ್ಯವಿಲ್ಲ; ಪತ್ನಿ ಕಿರುಕುಳಕ್ಕೆ ಪ್ರಾಣ ಕಳೆದುಕೊಂಡ ಗಂಡ

ಪತ್ನಿಯ ಶಿಕ್ಷಣಕ್ಕೆ ಬೆಂಬಲ ನೀಡಿ ಆಕೆಗೆ ಸರ್ಕಾರಿ ನೌಕರಿ ಸಿಕ್ಕ ನಂತರ, ಆಕೆ ತನ್ನಿಂದ ದೂರವಾಗಿದ್ದರಿಂದ ಮನನೊಂದ ಪತಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮತ್ತು ಆಕೆಯ ಸಂಬಂಧಿಕರ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

01:38 PM (IST) Mar 24

ಪತ್ನಿ ಅದು ಮಾಡಿಲ್ಲ, ಇದು ಮಾಡಿಲ್ಲ ಅನ್ನೋದಲ್ಲ, ನೀವೂ ಸಹಾಯ ಮಾಡಿ - ಪುರುಷರಿಗೆ 'ಸುಪ್ರೀಂ' ಚಾಟಿ

ಪತ್ನಿ ಚೆನ್ನಾಗಿ ಅಡುಗೆ ಮಾಡುವುದಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ಮಾನ್ಯ ಮಾಡಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪತ್ನಿ ಸೇವಕಿಯಲ್ಲ, ಜೀವನ ಸಂಗಾತಿ ಎಂದು ಹೇಳಿದ್ದು, ಮನೆಗೆಲಸಗಳಲ್ಲಿ ಪತಿಯೂ ಸಮಾನವಾಗಿ ಪಾಲ್ಗೊಳ್ಳಬೇಕು ಎಂದು ಮಹತ್ವದ ಆದೇಶ ನೀಡಿದೆ.
Read Full Story

01:23 PM (IST) Mar 24

ಯುದ್ಧ ನಡುವೆ ಪಾಕಿಸ್ತಾನದ ಮಹತ್ವದ ನಡೆ, ಅಮೆರಿಕ ಇರಾನ್ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆ?

ಯುದ್ಧ ನಡುವೆ ಪಾಕಿಸ್ತಾನದ ಮಹತ್ವದ ನಡೆ, ಅಮೆರಿಕ ಇರಾನ್ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆ?ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳು ಈ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Read Full Story

01:10 PM (IST) Mar 24

ಎಲ್ಲಾ ಇದೆ, ಆದ್ರೆ ಖುಷಿ ಇಲ್ಲ - ಮನದ ನೋವು ತೋಡಿಕೊಂಡ ನಟಿ ಶ್ರೀವಿದ್ಯಾ, ಕೊರಗೇನು?

ಮಲೆಯಾಳಂ ನಟಿ ಶ್ರೀವಿದ್ಯಾ ಮುಲ್ಲಚೇರಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೈಯಕ್ತಿಕ ನೋವನ್ನು ಹಂಚಿಕೊಂಡಿದ್ದಾರೆ. ಮನೆ ಕಟ್ಟುವುದು, ಹೊಸ ಶೋ ಸಿಗುವುದು ಸೇರಿದಂತೆ ಬಯಸಿದ್ದೆಲ್ಲಾ ಸಿಕ್ಕರೂ, ಮನಸ್ಸಿನಿಂದ ಖುಷಿ ಪಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅವರ ಪತಿ ರಾಹುಲ್ ರಾಮಚಂದ್ರನ್ ಸೇರಿದಂತೆ ಹಲವರು ಅವರಿಗೆ ಧೈರ್ಯ ತುಂಬಿದ್ದಾರೆ.
Read Full Story

01:09 PM (IST) Mar 24

LPG, ಇಂಡಕ್ಷನ್​, PNG, ಎಲೆಕ್ಟ್ರಿಕ್​ ಸ್ಟವ್​ - ಕಡಿಮೆ ಖರ್ಚಿನ ಅಡುಗೆಗೆ ಯಾವುದು ಬೆಸ್ಟ್​? ಡಿಟೇಲ್ಸ್​ ಇಲ್ಲಿದೆ ನೋಡಿ

ವಿಶ್ವದ ಯುದ್ಧದ ಪರಿಸ್ಥಿತಿಯಿಂದ ಗ್ಯಾಸ್ ಸಮಸ್ಯೆಯಾಗಿದ್ದು, ಪರ್ಯಾಯ ಅಡುಗೆ ವಿಧಾನಗಳತ್ತ ಗಮನ ಹರಿಸಲಾಗುತ್ತಿದೆ. ಈ ಲೇಖನದಲ್ಲಿ ಎಲ್‌ಪಿಜಿ, ಇಂಡಕ್ಷನ್, ಎಲೆಕ್ಟ್ರಿಕ್ ಸ್ಟವ್ ಮತ್ತು ಪಿಎನ್‌ಜಿ ಬಳಸಿ ಒಂದು ಗಂಟೆ ಅಡುಗೆ ಮಾಡಲು ತಗಲುವ ವೆಚ್ಚವನ್ನು ಹೋಲಿಕೆ ಮಾಡಲಾಗಿದೆ. ಯಾವುದು ಹೆಚ್ಚು ಅಗ್ಗ ಮತ್ತು ನಿಮ್ಮ ಬಳಕೆಗೆ ಯಾವುದು ಸೂಕ್ತ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Read Full Story

01:08 PM (IST) Mar 24

ಜಿಮ್, ಬ್ಯೂಟಿ ಸಲೂನ್‌ನಲ್ಲಿ ಕೆಲಸ, ತೆರೆಮರೆಯಲ್ಲಿ ಡ್ರಗ್ಸ್ ದಂಧೆ! ಚಾಲಾಕಿ ಯುವತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

ತ್ರಿಶೂರ್‌ನ ವಲಪಾಡ್‌ನಲ್ಲಿ ಜಿಮ್ ಮತ್ತು ಬ್ಯೂಟಿ ಸಲೂನ್ ಹೆಸರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಶ್ರೀಲಕ್ಷ್ಮಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಳಿಯಿಂದ 2.270 ಕಿಲೋಗ್ರಾಂ ಹ್ಯಾಶಿಶ್ ಆಯಿಲ್, ನಗದು ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಖಾಲಿ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. 

Read Full Story

12:20 PM (IST) Mar 24

ಮತಾಂತರಿಗಳಿಗೆ ಸುಪ್ರೀಂ ಶಾಕ್, ಕ್ರಿಶ್ಚಿಯನ್ ಸೇರಿ ಬೇರೆ ಧರ್ಮಕ್ಕೆ ಕನ್ವರ್ಟ್ ಆದ್ರೆ ದಲಿತ ಸ್ಥಾನಮಾನ ಇಲ್ಲ

ಮತಾಂತರಿಗಳಿಗೆ ಸುಪ್ರೀಂ ಶಾಕ್, ಕ್ರಿಶ್ಚಿಯನ್ ಸೇರಿ ಬೇರೆ ಧರ್ಮಕ್ಕೆ ಕನ್ವರ್ಟ್ ಆದ್ರೆ ದಲಿತ ಸ್ಥಾನಮಾನ ಇಲ್ಲ, ವಿದೇಶಿ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೆ ಸ್ಥಾನಮಾನ ಹಾಗೂ ರಕ್ಷಣೆಕೂಡ ಸಿಗಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

 

Read Full Story

12:00 PM (IST) Mar 24

ನಿಮ್ಮ ಹೆಸರು 'A' ಅಕ್ಷರದಿಂದ ಶುರುವಾಗುತ್ತಾ? ಹಾಗಿದ್ರೆ ಯಾವ ವಯಸ್ಸಲ್ಲಿ ಹೆಚ್ಚು ಹಣ ಗಳಿಸ್ತೀರಾ ನೋಡಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಸರಿನ ಜ್ಯೋತಿಷ್ಯಕ್ಕೆ (Name Astrology) ವಿಶೇಷ ಪ್ರಾಮುಖ್ಯತೆ ಇದೆ. ಇಂಗ್ಲಿಷ್‌ನ 'A' ಅಕ್ಷರದಿಂದ ಹೆಸರು ಆರಂಭವಾಗುವವರ ಜೀವನ ಹೇಗಿರುತ್ತೆ? ಇಂಗ್ಲಿಷ್‌ನಲ್ಲಿ 'A' ಅಕ್ಷರದಿಂದ ಶುರುವಾಗುವ ಹೆಸರುಗಳು ಕನ್ನಡದಲ್ಲಿ 'ಅ, ಆ' ಅಕ್ಷರಗಳಿಂದ ಆರಂಭವಾಗುತ್ತವೆ.

Read Full Story

12:00 PM (IST) Mar 24

ಕಳ್ಳರ ಟ್ರಕ್‌ನಿಂದ ತಪ್ಪಿಸಿಕೊಂಡು 17 ಕಿ.ಮಿ ನಡೆದು ಮರಳಿ ಮನೆ ಸೇರಿದ 7 ನಾಯಿಗಳ ಸಾಹಸಗಾಥೆ

ಕಳ್ಳರ ಟ್ರಕ್‌ನಿಂದ ತಪ್ಪಿಸಿಕೊಂಡು 17 ಕಿ.ಮಿ ನಡೆದು ಮರಳಿ ಮನೆ ಸೇರಿದ 7 ನಾಯಿಗಳ ಸಾಹಸಗಾಥೆ, 7 ನಾಯಿಗಳು ದಾರಿ ಮೂಲಕ ನಡೆದುಕೊಂಡು ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ಪುಟ್ಟ ಕಾರ್ಗಿ ತಳಿಯ ನಾಯಿ ಇತರ ನಾಯಿಗಳಿಗೆ ದಾರಿ ತೋರಿಸಿದೆ.

 

Read Full Story

11:36 AM (IST) Mar 24

ವಯಸ್ಸು 30 ಆದ್ರೂ ಮದ್ವೆಯಾಗದೇ ಸಿಂಗಲ್ ಆಗಿ ಉಳಿದವರಿಗೆ ಇದೇ ಗತಿ! ರೈಲಿನ ವಿಡಿಯೋ ವೈರಲ್

ರೈಲಿನಲ್ಲಿ ಯುವಕನೋರ್ವನಿಗೆ ಮಂಗಳಮುಖಿಯೊಬ್ಬರು ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಾಗದ ಸಿಂಗಲ್ ಹುಡುಗರಿಗೆ ಇದೇ ಗತಿ ಎಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

11:16 AM (IST) Mar 24

Jr NTR Love Story - ಪ್ರೀತಿಸಿದ ಹುಡುಗಿಯನ್ನೇ ಜೂ.ಎನ್‌ಟಿಆರ್‌ ಮದುವೆಯಾಗಲಿಲ್ಲವೇಕೆ? ಆಮೇಲೆ ಏನಾಯ್ತು?

ಯಂಗ್ ಟೈಗರ್ ಎನ್‌ಟಿಆರ್ ತಮ್ಮ ಜೀವನದ ಲವ್ ಸ್ಟೋರಿ ಬಗ್ಗೆ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದು ಪ್ರೀತಿನೋ ಅಥವಾ ಕೇವಲ ಆಕರ್ಷಣೆಯೋ ಎಂದು ತಿಳಿಯದಿದ್ದಾಗ ತನಗೆ ಸತ್ಯದ ಅರಿವಾಯಿತು ಎಂದು ಎನ್‌ಟಿಆರ್ ಹೇಳಿದ್ದಾರೆ.
Read Full Story

11:16 AM (IST) Mar 24

ಮಕ್ಕಳಿಗೆ ದಾರಿ ತೋರಬೇಕಾದ ಶಿಕ್ಷಕಿಯೇ ದಾರಿ ತಪ್ಪಿದಳು - ಗೆಳೆಯನ ಜೊತೆ ಸೇರಿ ಗಂಡನ ಮುಗಿಸಿದ ಸರ್ಕಾರಿ ಶಾಲೆ ಟೀಚರ್

wife kills husband in rajasthan: ಮಕ್ಕಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕಿಯೇ ಇಲ್ಲಿ ದಾರಿತಪ್ಪಿದ್ದಾಳೆ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈಕೆಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು

Read Full Story

11:03 AM (IST) Mar 24

ಸೋಶಿಯಲ್ ಮೀಡಿಯಾ ಬ್ಲಾಕ್ಔಟ್ ಚಾಲೆಂಜ್‌ಗೆ ಬಾಲಕಿ ಬಲಿ, ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

ಸೋಶಿಯಲ್ ಮೀಡಿಯಾ ಬ್ಲಾಕ್ಔಟ್ ಚಾಲೆಂಜ್‌ಗೆ ಬಾಲಕಿ ಬಲಿ, ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ, ಈ ಚಾಲೆಂಜ್ ಗೇಮ್ ಅತ್ಯಂತ ಅಪಾಯಕಾರಿಯಾಗಿದೆ. ಎನೂ ಅರಿವಿಲ್ಲದ ಮಕ್ಕಳು ರೀಲ್ಸ್ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದರೆ ಎಚ್ಚರವಹಿಸುವುದು ಸೂಕ್ತ.

Read Full Story

09:45 AM (IST) Mar 24

ಐಪಿಎಲ್ ಸಮರಕ್ಕೆ ತಂಡಗಳು ಸಜ್ಜು! ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದ ಬಲ ಹಾಗೂ ದೌರ್ಬಲ್ಯಗಳೇನು?

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ತಂಡಗಳು ಸಜ್ಜಾಗಿವೆ. ಈ ಲೇಖನವು ಈ ಮೂರು ತಂಡಗಳ ಬಲಾಬಲ, ದೌರ್ಬಲ್ಯಗಳು, ಹೊಸ ಆಟಗಾರರ ಸೇರ್ಪಡೆ, ಮತ್ತು ಸಂಭಾವ್ಯ ಆಡುವ ಬಳಗದ ಕುರಿತು ಆಳವಾದ ವಿಶ್ಲೇಷಣೆಯನ್ನು ಒದಗಿಸುತ್ತದೆ.
Read Full Story

09:07 AM (IST) Mar 24

20 ವರ್ಷ ಗೊತ್ತೇ ಆಗ್ಲಿಲ್ಲ ಗಂಡನ ಸೀಕ್ರೆಟ್! ಸತ್ಯ ಬಯಲಾಗ್ತಿದ್ದಂತೆ ಸೋಡಾಚೀಟಿ ಕೊಟ್ಟ ಪತ್ನಿ

20 ವರ್ಷಗಳ ದಾಂಪತ್ಯದ ನಂತರ ಮಹಿಳೆಯೊಬ್ಬಳಿಗೆ ತನ್ನ ಪತಿಯ ಸತ್ಯ ಗೊತ್ತಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಈ ರಹಸ್ಯ ಬಯಲಾಗಿದ್ದು, ಪತಿಯ ಈ ನಂಬಿಕೆ ದ್ರೋಹದಿಂದ ಆಘಾತಕ್ಕೊಳಗಾದ ಆಕೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

Read Full Story

08:53 AM (IST) Mar 24

ಪ್ರಧಾನಿ ಜೊತೆಗೆ ಸೆಲ್ಫಿ ತಗೊಂಡು ವೋಟ್ ಹಾಕಲ್ಲ ಎಂದ ಯುವಕನಿಗೆ ಮೆಲೋನಿ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ!

Giorgia Meloni video : ತಮ್ಮ ಬಗೆಗಿನ ಪಾಸಿಟಿವ್ ವಿಚಾರ ಕೇಳುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ನೆಗೆಟಿವ್ ವಿಚಾರವನ್ನು ಹೇಳಿದಾಗ ಅನೇಕರು ಅದನ್ನು ಸ್ವೀಕರಿಸುವುದಕ್ಕಿಂತ ಹೇಳಿದವರ ಮೇಲೆ ಮುಗಿಬೀಳೋದೇ ಹೆಚ್ಚು. ಬಹುತೇಕರು ವಾದಕ್ಕಿಳಿಯುತ್ತಾರೆ. ಆದರೆ ಇಟಲಿ ಪ್ರಧಾನಿ ಏನ್ ಮಾಡಿದ್ರು ನೋಡಿ..

Read Full Story

08:26 AM (IST) Mar 24

5 ಕ್ರೆಡಿಟ್‌ ಕಾರ್ಡ್‌ ವಂಚನೆ ಬಗ್ಗೆ ಎಚ್ಚರದಿಂದಿರಿ!

common credit card scams ಇಮೇಲ್, ಫೋನ್ ಕರೆ, ಎಟಿಎಂ, ಮತ್ತು ರಿವಾರ್ಡ್ ಪಾಯಿಂಟ್‌ಗಳ ಆಮಿಷದಂತಹ ಹಲವು ವಿಧಾನಗಳ ಮೂಲಕ ವಂಚಕರು ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದು ಹಣ ದೋಚುತ್ತಾರೆ. 

Read Full Story

More Trending News