LIVE NOW
Published : Apr 24, 2026, 07:04 AM ISTUpdated : Apr 24, 2026, 10:30 AM IST

India Latest News Live: Upendra Dwivedi - ಅಮೆರಿಕದ ಹಾಲ್ ಆಫ್ ಫೇಮ್‌ಗೆ ಭಾರತೀಯ ಸೇನಾ ಮುಖ್ಯಸ್ಥ! ಮೂರನೇ ಭಾರತೀಯ ಎಂಬ ಹೆಗ್ಗಳಿಕೆ

ಸಾರಾಂಶ

ನವದೆಹಲಿ: ಅಮೆರಿಕಕ್ಕೆ ಹೋಗಿ ನೆಲಸಬೇಕು ಎನ್ನುವ ಭಾರತೀಯರ ಕನಸು ಕ್ರಮೇಣ ಕಮರುತ್ತಿದೆ. ಮಾತ್ರವಲ್ಲ ಈಗಾಗಲೇ ಅಲ್ಲಿರುವ ಶೇ.40ರಷ್ಟು ಭಾರತೀಯರು ಅಮೆರಿಕ ತೊರೆಯುವ ಯೋಚನೆಯಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಕಾರ್ನೆಗೀ ಎಂಡೋಮೆಂಟ್ ನಡೆಸಿದ ಸಮೀಕ್ಷೆ ಅನ್ವಯ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಆ ದೇಶ ಬಿಡುವ ಚಿಂತನೆ ನಡೆಸಿದ್ದಾರೆ.ಶೇ.40 ರಷ್ಟು ಅನಿವಾಸಿ ಭಾರತೀಯರು ಈ ಬಗ್ಗೆ ಮಾತನಾಡಿದ್ದಾರೆ.ಭಾರತಕ್ಕೆ ಮರಳು ವುದಾಗಿ ಹೇಳಿರುವ ಪೈಕಿ ಶೇ.58ರಷ್ಟು ಜನರು ರಾಜಕೀಯ ವಿದ್ಯಮಾನದ ಕಾರಣ ನೀಡಿದ್ದರೆ, ಉಳಿದವರು ವೆಚ್ಚ, ಜನರು ಸುರಕ್ಷತೆಗೆ ಉಂಟಾಗಿರುವ ಕಳವಳ ಕಾರಣ ಎಂದು ಹೇಳಿದಿದ್ದಾರೆ. ಜತೆಗೆ ಬಹುತೇಕರು ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅವರು ಕೈಗೊಂಡಿರುವ ನೀತಿಗಳು ಕಾರಣ ಎಂದಿದ್ದಾರೆ.ಅಮೆರಿಕದಲ್ಲಿ 52 ಲಕ್ಷ ಭಾರತೀಯರಿದ್ದಾರೆ.

 

10:30 AM (IST) Apr 24

Upendra Dwivedi - ಅಮೆರಿಕದ ಹಾಲ್ ಆಫ್ ಫೇಮ್‌ಗೆ ಭಾರತೀಯ ಸೇನಾ ಮುಖ್ಯಸ್ಥ! ಮೂರನೇ ಭಾರತೀಯ ಎಂಬ ಹೆಗ್ಗಳಿಕೆ

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಅಮೆರಿಕದ ಕಾರ್ಲೈಲ್‌ನಲ್ಲಿರುವ ಯುಎಸ್ ಆರ್ಮಿ ವಾರ್ ಕಾಲೇಜಿನ ಇಂಟರ್‌ನ್ಯಾಷನಲ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಮಾಡಲಾಗಿದೆ. ಈ ಪ್ರತಿಷ್ಠಿತ ಗೌರವ ಪಡೆದ ಮೂರನೇ ಭಾರತೀಯ ಸೇನಾ ಮುಖ್ಯಸ್ಥ ಇವರು. 

Read Full Story

09:36 AM (IST) Apr 24

Birth Date - ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಇಡೀ ಕುಟುಂಬವನ್ನು ತಮ್ಮ ಹೆಗಲ ಮೇಲೆ ಹೊರುತ್ತಾರೆ!

ಹುಟ್ಟಿದ ದಿನಾಂಕ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ನೀವು ಇತರರೊಂದಿಗೆ ಹೇಗೆ ಬೆರೆಯುತ್ತೀರಿ ಎಂಬುದನ್ನೂ ಹೇಳುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಕುಟುಂಬದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊರುತ್ತಾರೆ. ಆ ದಿನಾಂಕಗಳು ಬಗ್ಗೆ ತಿಳಿಯೋಣ 

Read Full Story

09:10 AM (IST) Apr 24

ಮುಂಬೈ ಎದುರು ಶತಕ ಚಚ್ಚಿ ಸಿಎಸ್‌ಕೆ ಪರ ಯಾರೂ ಮಾಡಿರದ ಅಪರೂಪದ ದಾಖಲೆ ಬರೆದ ಸಂಜು ಸ್ಯಾಮ್ಸನ್!

ಮುಂಬೈ ಇಂಡಿಯನ್ಸ್ ವಿರುದ್ಧದ 'ಎಲ್ ಕ್ಲಾಸಿಕೋ' ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಜೇಯ ಶತಕ ಸಿಡಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ ತಂದುಕೊಟ್ಟರು. ಈ ಶತಕದ ಮೂಲಕ, ಮುಂಬೈ ವಿರುದ್ಧ ಶತಕ ಬಾರಿಸಿದ ಮೊದಲ ಸಿಎಸ್‌ಕೆ ಆಟಗಾರ ಎಂಬ ಐತಿಹಾಸಿಕ ದಾಖಲೆ ಸೇರಿದಂತೆ ಹಲವು ಮೈಲಿಗಲ್ಲುಗಳನ್ನು ಅವರು ಸ್ಥಾಪಿಸಿದರು.
Read Full Story

08:18 AM (IST) Apr 24

IPL 2026 - ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ; ಬೆಂಗಳೂರಿಗಿಂದು ಗುಜರಾತ್ ಸವಾಲು

ಹಾಲಿ ಚಾಂಪಿಯನ್‌ ಆರ್‌ಸಿಬಿ, ತನ್ನ ತವರು ಕ್ರೀಡಾಂಗಣವಾದ ಚಿನ್ನಸ್ವಾಮಿಯಲ್ಲಿ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಗುರಿ ಆರ್‌ಸಿಬಿಯದ್ದಾದರೆ, ಗುಜರಾತ್ ಸ್ಥಿರ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳ ಬಲಾಬಲ ಮತ್ತು ಸಂಭಾವ್ಯ ಆಟಗಾರರ ಬಗ್ಗೆ ವಿವರಿಸಲಾಗಿದೆ.
Read Full Story

07:35 AM (IST) Apr 24

IPL 2026 - ನಿನ್ನೆ ನಡೆದ ಮುಂಬೈ ಇಂಡಿಯನ್ಸ್‌ - ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ, ಸಂಜು ಸ್ಯಾಮ್ಸನ್ ಅವರ ಅಜೇಯ ಶತಕ (101*) ಮತ್ತು ಅಕೇಲ್‌ ಹೊಸೈನ್‌ ಅವರ ಮಾರಕ ಬೌಲಿಂಗ್ (4/17) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸಿಎಸ್‌ಕೆ 7 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿತು.
Read Full Story

07:28 AM (IST) Apr 24

ಹಾಲಿವುಡ್‌ ಸ್ಟೈಲಲ್ಲಿ ಭಾರತದ ನೌಕೆ ವಶಕ್ಕೆ ಪಡೆದ ಇರಾನ್ - ವೀಡಿಯೋ ಬಿಡುಗಡೆ - ಟ್ರಂಪ್‌ಗೆ ಪರೋಕ್ಷ ಟಾಂಗ್‌?

ಹೋರ್ಮುಜ್ ಜಲಸಂಧಿಯಲ್ಲಿ ಭಾರತದತ್ತ ಸಾಗುತ್ತಿದ್ದ ನೌಕೆಯನ್ನು ಇರಾನ್ ಸೇನೆ ವಶಪಡಿಸಿಕೊಂಡಿದ್ದು, ಈ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದು ಹೋರ್ಮುಜ್ ಮೇಲಿನ ತಮ್ಮ ಹಿಡಿತವನ್ನು ಸಾಬೀತುಪಡಿಸುವ ಇರಾನ್‌ನ ಪ್ರಯತ್ನವೆಂದು ವಿಶ್ಲೇಷಿಸಲಾಗಿದೆ.

Read Full Story

More Trending News