ನವದೆಹಲಿ: ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 8 ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 2400 ವಿಮಾನಗಳಲ್ಲಿ ತಾಂತ್ರಿಕ ದೋಷದ ಸಮಸ್ಯೆ ಉಂಟಾಗಿದೆ. ಈ ಪೈಕಿ 2025ರಲ್ಲೇ ಅತಿ ಕಡಿಮೆ ಘಟನೆ ವರದಿಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಕಳೆದ ವಾರ ಸಚಿವಾಲಯ ಲೋಕಸಭೆಗೆ ಸಲ್ಲಿಸಿರುವ ಅಂಕಿಅಂಶಗಳ ಪ್ರಕಾರ, 2022ರಲ್ಲಿ ಅತ್ಯಧಿಕ 524 ಪ್ರಕರಣಗಳು ದಾಖಲಾಗಿದೆ. ಆ ಬಳಿಕ ನಿಧಾನಕ್ಕೆ ಕುಸಿತ ಕಂಡಿದೆ. 2025ರಲ್ಲಿ ಅತಿ ಕನಿಷ್ಠ ಪ್ರಕರಣಗಳು ವರದಿಯಾಗಿದ್ದು, ನವೆಂಬರ್ ತನಕದ ಅಂಕಿ ಅಂಶದಲ್ಲಿ 382 ಘಟನೆಗಳು ನಡೆದಿದೆ.

11:35 PM (IST) Dec 23
ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ ಮಾಡಲಾಗಿದೆ. ಕೆಲಸ ಬಿಟ್ಟ ಬಳಿಕ ಹಣ ಪಡೆಯಲು ಇದ್ದ ನಿಯಮಗಳಲ್ಲಿ ಸಡಿಲಿಕೆ, ಹಣ ಪಡೆಯುವ ವಿಧಾನ ಸರಳೀಕೃತ ಸೇರಿದಂತೆ ಮಹತ್ವದ ಬದಲಾವಣೆ ಮಾಡಲಾಗಿದೆ.
10:55 PM (IST) Dec 23
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?, ಕ್ರಿಸ್ಮಸ್ ರಜಾ ದಿನ ಹಬ್ಬದ ರಜಾ ದಿನ ಸವಿ ಅನುಭವಿಸಲು ಪ್ಲಾನ್ ಮಾಡಿದ್ದರೆ, ನಿಮ್ಮ ನಗರದಲ್ಲಿ ಡ್ರೇ ಡೇನಾ ಎಂದು ಚೆಕ್ ಮಾಡಿಕೊಳ್ಳಿ.
10:23 PM (IST) Dec 23
ಅತೀ ದೊಡ್ಡ ಪರಾರಿಗಳು ನಾವೇ, ಮಲ್ಯ ಜೊತೆಗೆ ವಿಡಿಯೋ ಮೂಲಕ ಭಾರತ ಅಣಕಿಸಿದ ಲಲಿತ್ ಮೋದಿ, ಇತ್ತೀಚೆಗೆ ವಿಜಯ್ ಮಲ್ಯ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.
09:31 PM (IST) Dec 23
ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?, ಭಾರತದ ರೈಲಿನಲ್ಲಿ ಇಷ್ಟೊಂದು ಮಂದಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಾರಾ? ದಂಡದ ಮೊತ್ತ ಅಚ್ಚರಿ ಹುಟ್ಟಿಸುವುದು ಸತ್ಯ
08:29 PM (IST) Dec 23
2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಲೆಕ್ಕಾಚಾರಕ್ಕೆ ಬೆಚ್ಚಿದ ಜನ, ಕಾರಣ ಡೇವಿಡ್ ಟೈಟ್ ಹೊಸ ವರ್ಷದಲ್ಲಿ ಚಿನ್ನದ ಬೆಲೆಯ ಏರಿಕೆ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಬೆಲೆ ಜನಸಾಮಾನ್ಯರು ಚಿನ್ನ ಕನಸಿನಲ್ಲೂ ಯೋಚನೆ ಮಾಡುವುದು ಬಿಡುತ್ತಾರೆ.
07:50 PM (IST) Dec 23
ಬೆಂಗಳೂರು: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಟೂರ್ನಿಗೆ ಈಗಾಗಲೇ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಈ ಟೂರ್ನಿಯಲ್ಲಿ ಭಾರತ ತಂಡವು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾಗಿದೆ. ಏನದು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.
07:47 PM (IST) Dec 23
ನಮ್ಮ ಮಿಸೈಲ್ಗೆ ಭಾರತ ದೂರವಲ್ಲ, ಬಾಂಗ್ಲಾ ದೊಂಬಿಗೆ ಮೋದಿ ಸರ್ಕಾರಕ್ಕೆ ಪಾಕ್ ನಾಯಕ ವಾರ್ನಿಂಗ್, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕಲಹಕ್ಕೆ ಭಾರತ ಕಾರಣ ಎಂದು ಆರೋಪಿಸಿರುವ ಷರೀಫ್ ಸರ್ಕಾರದ ನಾಯಕ ಬೆದರಿಕೆ ಹಾಕಿದ್ದಾನೆ.
07:37 PM (IST) Dec 23
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಸರ್ಕಾರವು ತನ್ನ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA) ಅನ್ನು ಹರಾಜಿನಲ್ಲಿ ಮಾರಾಟ ಮಾಡಿದೆ. ಆರಿಫ್ ಹಬೀಬ್ ಗ್ರೂಪ್ ₹4,320 ಕೋಟಿಗೆ ಬಿಡ್ ಮಾಡಿ, ಪಿಐಎಯ 75% ಪಾಲನ್ನು ಖರೀದಿಸಿದೆ.
07:28 PM (IST) Dec 23
ಅನೇಕರು ತಮ್ಮ ಹಳೆಯ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿರುತ್ತಾರೆ. ಇಂತಹ 10 ವರ್ಷಕ್ಕೂ ಹೆಚ್ಚು ಕಾಲದ ಕ್ಲೇಮ್ ಮಾಡದ ಠೇವಣಿಗಳನ್ನು ಮರಳಿ ಪಡೆಯಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) UDGAM ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಪೋರ್ಟಲ್ ಮೂಲಕ ನಿಮ್ಮ ಹಣವನ್ನು ಪತ್ತೆಹಚ್ಚbhudu.
07:15 PM (IST) Dec 23
ವಿಚ್ಛೇದನದ ನಂತರ ಮಕ್ಕಳ ಕಸ್ಟಡಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯ ನಂತರ ಗಂಡ ಹಾಗೂ ಆತನ ತಾಯಿ ಇಬ್ಬರು ಮುದ್ದಾದ ಪುಟ್ಟ ಮಕ್ಕಳಿಗೆ ವಿಷವುಣಿಸಿ ಕೊಲೆ ಮಾಡಿ ಬಳಿಕ ತಾವೂ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.
07:06 PM (IST) Dec 23
ಮಧ್ಯಪ್ರದೇಶದ ಮಾಜಿ ಸಚಿವ ದೀಪಕ್ ಜೋಶಿ ಅವರು 63ನೇ ವಯಸ್ಸಿನಲ್ಲಿ ಕಾಂಗ್ರೆಸ್ ನಾಯಕಿ ಪಲ್ಲವಿ ರಾಜ್ ಸಕ್ಸೇನಾ ಅವರನ್ನು ವಿವಾಹವಾಗಿದ್ದಾರೆ. ಅವರ ವಿವಾದಾತ್ಮಕ ವೈವಾಹಿಕ ಜೀವನ, ಬಿಜೆಪಿಯಿಂದ ಕಾಂಗ್ರೆಸ್ಗೆ ಮತ್ತು ಮತ್ತೆ ಬಿಜೆಪಿಗೆ ಮರಳಿದ ಅವರ ರಾಜಕೀಯ ಪಯಣದ ಮಾಹಿತಿ ಇಲ್ಲಿದೆ.
06:48 PM (IST) Dec 23
World Record: Gede Priandana Takes 5 Wickets in One Over in T20I ಮಂಗಳವಾರ ಬಾಲಿಯಲ್ಲಿ ಕಾಂಬೋಡಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಲಗೈ ವೇಗಿ ಗೆಡೆ ಪ್ರಿಯಂದನ ಈ ಸಾಧನೆ ಮಾಡಿದ್ದಾರೆ.
06:48 PM (IST) Dec 23
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಿಂದ ಹೊರಬಿದ್ದ ಶುಭ್ಮನ್ ಗಿಲ್ಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆಯಿದೆ. ಗಿಲ್ಗೆ ಏಕದಿನ ತಂಡದ ನಾಯಕತ್ವವೂ ಕೈತಪ್ಪುವ ಸಾಧ್ಯತೆಯಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.
06:30 PM (IST) Dec 23
Most Silver Reserves On Earth: ವಿಶ್ವದ ಈ ದೇಶಗಳು ಬೆಳ್ಳಿ ಸ್ಪರ್ಧೆಯಲ್ಲಿ ಅಗ್ರಸ್ಥಾನದಲ್ಲಿವೆ. ನಾವು ನಿರೀಕ್ಷೆಯೇ ಮಾಡದಂಥ ದೇಶಗಳು ಈ ಪಟ್ಟಿಯಲ್ಲಿವೆ. ಈ ಟಾಪ್ -5 ಪಟ್ಟಿಯಲ್ಲಿ ಭಾರತ ಎಲ್ಲಿದೆ ಅನ್ನೋದು ನಿಮಗೆ ಗೊತ್ತಾ?
06:22 PM (IST) Dec 23
ಕೆಲ ದಿನಗಳ ಹಿಂದೆ ದೆಹಲಿ ಏರ್ಪೋರ್ಟ್ನಲ್ಲಿ ಕ್ಯೂ ವಿಚಾರಕ್ಕೆ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಏರ್ ಇಂಡಿಯಾ ಪೈಲಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲ್ಲೆಯಿಂದ ಪ್ರಯಾಣಿಕನ ಮೂಗಿನ ಮೂಳೆ ಮುರಿದಿದ್ದು, ಪೈಲಟ್ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
06:12 PM (IST) Dec 23
ಕ್ರಿಸ್ಮಸ್ಗೆ ಭರ್ಜರಿ ಆಫರ್ ಘೋಷಿಸಿದ ಟ್ರಂಪ್, 2.7 ಲಕ್ಷ ರೂ ನಗದು, ಉಚಿತ ವಿಮಾನ ಟಿಕೆಟ್, ಮಾರಾಟ ಹೆಚ್ಚಾಗಲು, ಬ್ರ್ಯಾಂಡ್ ಪ್ರಮೋಶನ್ಗೆ ಆಫರ್ ನೀಡುವುದು ನೋಡಿದ್ದೀರಿ. ಆದರೆ ಇಲ್ಲಿ ಅಮೆರಿಕ ಅಧ್ಯಕ್ಷರೇ ಕ್ರಿಸ್ಮಸ್ಗೆ ಆಫರ್ ಕೊಟ್ಟಿದ್ದಾರೆ. ಒಂದು ಕಂಡೀಷನ್ ಹಾಕಿದ್ದಾರೆ.
05:51 PM (IST) Dec 23
ಬಹಳ ವರ್ಷಗಳ ಕಾಲ ಜನರ ಮನೆಮಾತಾಗಿ ಉಳಿದಿದ್ದ ಎಸಿಸಿ ಸಿಮೆಂಟ್ ಇನ್ನು ನೆನಪು ಮಾತ್ರ. ಒಂದು ಸಿಮೆಂಟ್ ಫ್ಲಾಟ್ಫಾರ್ಮ್ ಯೋಜನೆ ಭಾಗವಾಗಿ ಎಸಿಸಿ ಸಿಮೆಂಟ್, ಅಂಬುಜಾ ಸಿಮೆಂಟ್ ಜೊತೆ ವಿಲೀನವಾಗಲಿದೆ.
05:25 PM (IST) Dec 23
2024-25ರಲ್ಲಿ ಕಾಂಗ್ರೆಸ್ಗಿಂತ 12 ಪಟ್ಟು ಹೆಚ್ಚು ದೇಣಿಗೆ ಸಂಗ್ರಹಿಸಿದ ಬಿಜೆಪಿ, ಫಂಡ್ ಪಟ್ಟಿ ಪ್ರಕಟ, ವಿವಾದಿತ ಎಲೆಕ್ಟೋರಲ್ ಬಾಂಡ್ ರದ್ದುಗೊಳಿಸಿದ ಬಳಿಕ ಒಂದು ವರ್ಷ ಅವಧಿಯಲ್ಲಿ ಪಕ್ಷಗಳು ಸಂಗ್ರಹಿಸಿದ ದೇಣಿಗೆ ಮೊತ್ತ ಅಚ್ಚರಿಗೆ ಕಾರಣವಾಗಿದೆ.
05:12 PM (IST) Dec 23
ಪ್ರಾಚೀನ ಹಿಂದೂ ಶಿವ ದೇವಾಲಯದ ಮೇಲಿನ ಹಕ್ಕಿಗಾಗಿ ಎರಡು ನೆರಹೊರೆಯ ದೇಶಗಳಾದ ಕಾಂಬೋಡಿಯಾ ಹಾಗೂ ಥೈಲ್ಯಾಂಡ್ ನಡುವಣ ಯುದ್ಧ ಭುಗಿಲೆದ್ದಿದ್ದು, 11ನೇ ಶತಮಾನದೆನ್ನಲಾದ ಶಿವ ದೇವಾಲಯವನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ.
04:45 PM (IST) Dec 23
ಒಂದು ವೈರಸ್ ಎಂಟ್ರಿ, 14 ಕೋಟಿ ರೂ ಕಳೆದುಕೊಂಡು ರ್ಯಾಪಿಡೋ ಚಾಲಕನಾದ ಉದ್ಯಮಿ ಕಣ್ಣೀರ ಕತೆ ಅನಾವರಣಗೊಂಡಿದೆ. ಇದೇ ರ್ಯಾಪಿಡೋ ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಈ ಉದ್ಯಮಿ ಕತೆ ಹೇಳಿದ್ದಾರೆ. ಕುಟುಂಬದ ಉದ್ಯಮ, ಸ್ಟಾರ್ಟ್ಅಪ್ ಎಲ್ಲವೂ ನಷ್ಟವಾಗಿದ್ದು ಹೇಗೆ?
04:42 PM (IST) Dec 23
ಕ್ವಿಕ್ ಡೆಲಿವರಿ ಪ್ಲಾಟ್ಫಾರ್ಮ್ಇನ್ಸ್ಟಾಮಾರ್ಟ್, ವರ್ಷವಿಡೀ ಭಾರತೀಯರು ಆ್ಯಪ್ ಮೂಲಕ ಹೇಗೆ ಶಾಪಿಂಗ್ ಮಾಡಿದರು ಎಂಬುದನ್ನು ಬಹಿರಂಗಪಡಿಸಿದೆ. ಚೆನ್ನೈನ ವ್ಯಕ್ತಿಯೊಬ್ಬರು ವರ್ಷವಿಡೀ ಕಾಂಡೋಮ್ಗಳನ್ನು ಖರೀದಿಸುವುದರಲ್ಲಿ ನಿರತರಾಗಿದ್ದರು.
04:19 PM (IST) Dec 23
ವಿಶ್ವದ ಅತ್ಯಂತ ದೊಡ್ಡ ದೇಶಗಳಲ್ಲಿ ಒಂದೆನಿಸಿರುವ ರಷ್ಯಾವೂ ತೀವ್ರವಾದ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಈ ಕಾರ್ಮಿಕರ ಕೊರತೆ ಈಗ ಭಾರತದ, ಕೆಲಸ ಯಾವುದಾದರೇನು ದುಡಿದು ತಿನ್ನಬೇಕು ಎಂದು ಬಯಸುವ ಯುವಕರಿಗೆ ಭಾಗ್ಯದ ಬಾಗಿಲನ್ನು ತೆರೆದಿದೆ. ಈ ಬಗ್ಗೆ ಡಿಟೇಲ್ ಸ್ಟೋರಿ.
03:45 PM (IST) Dec 23
ಗೇಮಿಂಗ್ ಕ್ರಿಯೇಟರ್ ಫೆರಾರಿ ಕಾರು ಅಪಘಾತದಲ್ಲಿ ಸಾವು, ಮೊಬೈಲ್ನಲ್ಲಿ ಭೀಕರ ದೃಶ್ಯ ಸೆರೆ, ಖ್ಯಾತ ಕ್ರಿಯೇಟರ್ ಆಗಮನದ ನಿರೀಕ್ಷೆಯಲ್ಲಿ ಹಲವರು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ದುರಂತ ನಡೆದು ಹೋಗಿದೆ.
03:10 PM (IST) Dec 23
Karnataka Govt Holidays 2026ರಲ್ಲಿ ಕೇವಲ ಕೆಲವು ದಿನಗಳ ಹೆಚ್ಚುವರಿ ರಜೆ (Optional/Sick Leave) ಬಳಸುವ ಮೂಲಕ ಹೇಗೆ ಹತ್ತಾರು ದಿನಗಳ ಕಾಲ ಕುಟುಂಬದೊಂದಿಗೆ ಸಮಯ ಕಳೆಯಬಹುದು ಎಂಬ ಟಿಪ್ಸ್ ಇಲ್ಲಿದೆ.
03:07 PM (IST) Dec 23
ಅಂತರರಾಷ್ಟ್ರೀಯ ಸೂಪರ್ ಮಾಡೆಲ್ ಅನೋಕ್ ಯಾಯ್, ತಮಗಿದ್ದ ಜನ್ಮಜಾತ ಶ್ವಾಸಕೋಶದ ದೋಷದ ಬಗ್ಗೆ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ವರ್ಷಗಳ ಕಾಲ ಆರೋಗ್ಯ ಸಮಸ್ಯೆಯೊಂದಿಗೆ ಹೋರಾಡಿ, ತುರ್ತು ರೊಬೊಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
02:54 PM (IST) Dec 23
ತುರ್ತು ಚಿಕಿತ್ಸೆಗೆ 2 ವರ್ಷದ ಮಗು ಸೇರಿ 9 ಮಂದಿ ಪ್ರಯಾಣಿಸುತ್ತಿದ್ದ ನೌಕಾ ವಿಮಾನ ಪತನ, ಐವರು ಸಾವು, ನೌಕಾ ಪಡೆ ಸಿಬ್ಬಂದಿ ಸೇರಿದಂತೆ 9 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಈ ಪೈಕಿ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
02:44 PM (IST) Dec 23
ಮಗಳು ತಾನು ಪ್ರೀತಿಸಿದ ಹುಡುಗನ ಜೊತೆಗೆ ಓಡಿ ಹೋದ ನಂತರ ಕುಟುಂಬದವರು ಆಕೆ ನಮ್ಮ ಪಾಲಿಗೆ ಸತ್ತು ಹೋದಳು ಎಂದು ಘೋಷಣೆ ಮಾಡಿ ಆಕೆಯ ಪ್ರತಿಕೃತಿಯನ್ನು ತಯಾರಿಸಿ ಊರಿನ ರಸ್ತೆಗಳಲೆಲ್ಲಾ ನಕಲಿ ಶವಯಾತ್ರೆ ನಡೆಸಿ ಅಂತಿಮವಾಗಿ ಅಂತ್ಯಸಂಸ್ಕಾರ ನಡೆಸಿದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.
01:25 PM (IST) Dec 23
ತಾನು ಹೋಗಬೇಕಾದ ಹೊಟೇಲ್ ರೂಮ್ ಬಿಟ್ಟು ತಪ್ಪಾಗಿ ಬೇರೆ ಕೋಣೆಯ ಬಾಗಿಲು ಬಡಿದ ಮಹಿಳೆಯೊಬ್ಬಳನ್ನು ಅಲ್ಲಿ ಒಳಗೆ ಬೀರ್ ಕುಡಿಯುತ್ತಾ ಕುಳಿತಿದ್ದ ಕಾಮುಕರು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರವೆಸಗಿದ್ದಾರೆ.
01:21 PM (IST) Dec 23
ISRO BlueBird Block-2 Mission: LVM3-M6 ಲಾಂಚ್, ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಮತ್ತು ಬಾಹ್ಯಾಕಾಶ ಆಧಾರಿತ ಮೊಬೈಲ್ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಸಕ್ರಿಯಗೊಳಿಸುವಲ್ಲಿ ಅದರ ಪಾತ್ರದ ಬಗ್ಗೆ ವಿವರ ಇಲ್ಲಿದೆ.
01:05 PM (IST) Dec 23
ಕೇಂದ್ರ ಬಜೆಟ್ ಬಳಿಕ ಪಾತಾಳಕ್ಕೆ ಕುಸಿದಿದ್ದ ರೈಲ್ವೇ ಷೇರುಗಳು, ವರ್ಷದ ಕೊನೆಯಲ್ಲಿ ಮತ್ತೆ ಚೇತರಿಕೆ ಕಂಡಿವೆ. ರೈಲ್ವೆ ಟಿಕೆಟ್ ದರ ಏರಿಕೆಯ ನಂತರ IRCON, RVNL, ಮತ್ತು IRFC ನಂತಹ ಷೇರುಗಳು ಸತತ ಮೂರನೇ ದಿನವೂ ಲಾಭ ಗಳಿಸಿ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿವೆ.
12:36 PM (IST) Dec 23
ಪ್ರೀತಿಯಿಂದ ಸಾಕಿದ ಶ್ವಾನಗಳ ಸಾವು ಅನೇಕರಿಗೆ ತಡೆದುಕೊಳ್ಳಲಾಗದ ನೋವು ನೀಡುತ್ತದೆ. ಅನೇಕರು ತಮ್ಮ ಪ್ರೀತಿಯ ಶ್ವಾನದ ಸಾವಿನ ನಂತರ ಖಿನ್ನತೆಗೆ ಜಾರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬಳು ತನ್ನ ಪ್ರೀತಿಯ ಶ್ವಾನದ ಸಾವಿನ ನಂತರ ತಾನು ಸಾವಿಗೆ ಶರಣಾಗಿದ್ದಾಳೆ.
12:33 PM (IST) Dec 23
2026ರ ಐಪಿಎಲ್ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಸ ನಾಯಕನ ನೇಮಕವಾಗುವ ಸಾಧ್ಯತೆಯಿದೆ. ಕಳೆದ ಸೀಸನ್ನಲ್ಲಿ ತಂಡದ ನೀರಸ ಪ್ರದರ್ಶನದ ಹಿನ್ನೆಲೆಯಲ್ಲಿ, ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ನಾಯಕನಾಗಿ ನೇಮಿಸುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
12:16 PM (IST) Dec 23
11:26 AM (IST) Dec 23
ಕೇವಲ 4 ವರ್ಷದ ಶ್ರೇಯಾ ಕೆ ಸಿಂಗ್ ಎಂಬ ಬಾಲಕಿ ತನ್ನ ಬಿರುಸಿನ ಬ್ಯಾಟಿಂಗ್ ಶೈಲಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಈಕೆಯ ವೈರಲ್ ವೀಡಿಯೋಗೆ ಎಂ.ಎಸ್. ಧೋನಿಯಂತಹ ದಿಗ್ಗಜರೂ ಮೆಚ್ಚುಗೆ ಸೂಚಿಸಿದ್ದು, ಅನೇಕರು ಈಕೆಯನ್ನು ಮಹಿಳಾ ಕ್ರಿಕೆಟ್ನ ಭವಿಷ್ಯದ ತಾರೆ ಎಂದು ಕರೆಯುತ್ತಿದ್ದಾರೆ.
10:07 AM (IST) Dec 23
2025ರಲ್ಲಿ ಹಲವು ಸಿನಿಮಾಗಳು ಗಳಿಕೆಯಿಂದ ನಿರ್ಮಾಪಕರನ್ನು ಶ್ರೀಮಂತರನ್ನಾಗಿ ಮಾಡಿವೆ. ಅತಿ ಹೆಚ್ಚು ಲಾಭ ತಂದುಕೊಟ್ಟ 10 ಚಿತ್ರಗಳಲ್ಲಿ 'ಧುರಂಧರ್' ಎಲ್ಲೂ ಇಲ್ಲ. ಬಾಕ್ಸ್ ಆಫೀಸ್ನಲ್ಲಿ ಲಾಭದ ವಿಷಯದಲ್ಲಿ ನಿಜವಾದ ಧುರಂಧರ ಎನಿಸಿಕೊಂಡ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
09:49 AM (IST) Dec 23
World Highest Railway Station: ಸಮುದ್ರ ಮಟ್ಟದಿಂದ 5,068 ಮೀಟರ್ ಎತ್ತರದಲ್ಲಿದೆ. ಇಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರೈಲುಗಳಲ್ಲಿ ಪ್ರಯಾಣಿಕರಿಗೆ ಆಕ್ಸಿಜನ್ ಮಾಸ್ಕ್ಗಳನ್ನು ಒದಗಿಸಲಾಗುತ್ತದೆ. ಈ ನಿಲ್ದಾಣದ ವಿಶೇಷತೆಯ ಮಾಹಿತಿ ಇಲ್ಲಿದೆ.
09:35 AM (IST) Dec 23
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳನ್ನು ನಡೆಸಲು ಕೆಎಸ್ಸಿಎ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಹಿಂದಿನ ಕಾಲ್ತುಳಿತದ ಘಟನೆ ಹಾಗೂ ವಿರಾಟ್ ಕೊಹ್ಲಿ ಆಡುವ ಸಾಧ್ಯತೆಯಿಂದಾಗಿ, ಸುರಕ್ಷತಾ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ.