ಪುಣೆ: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಿಸಿಎಸ್ ಕಚೇರಿಯಲ್ಲಿ ವರ್ಷಗಳಿಂದ ನಡೆದಿದ್ದ ಕಾರ್ಪೊರೆಟ್ ಜಿಹಾದ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಪುಣೆಯಲ್ಲಿರುವ ಇನ್ಫೋಸಿಸ್ನ ಕಚೇರಿಯಲ್ಲೂ ಇಂತಹ ಘಟನೆಗಳು ನಡೆದಿವೆ ಎಂಬ ಆರೋಪಗಳು ಮುನ್ನೆಲೆಗೆ ಬಂದಿವೆ. ಇಂತಹ ಆರೋಪವಿದ್ದ ಒಂದು ಪೋಸ್ಟ್ಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೀಶ್ ರಾಣೆ, ‘ಗುರುತಿಸಿಕೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕೂಡಲೇ ಎಚ್ಚೆತ್ತ ಇನ್ಫೋಸಿಸ್, ‘ಯಾವುದೇ ರೀತಿಯ ಕಿರುಕುಳ, ತಾರತಮ್ಯದ ವಿರುದ್ಧ ನಮ್ಮ ಕಂಪನಿ ಶೂನ್ಯ ಸಹಿಷ್ಣುವಾಗಿದೆ. ಉದ್ಯೋಗಿಗಳಿಗೆ ಎಲ್ಲರನ್ನು ಒಳಗೊಂಡ, ಸುರಕ್ಷಿತ, ಸಕಾರಾತ್ಮಕ ಮತ್ತು ಗೌರವಯುತ ವಾತಾವರಣವನ್ನು ಖಚಿತಪಡಿಸಲು ಶ್ರಮಿಸುತ್ತದೆ’ ಎಂದು ಸ್ಪಷ್ಟನೆ ನೀಡಿದೆ.
10:12 AM (IST) Apr 20
ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ, ಮೇಕೆಗಳನ್ನು ಕೊಂದ ಸೇಡಿಗಾಗಿ ಗ್ರಾಮಸ್ಥರು ಬೀದಿ ನಾಯಿಗಳಿಗೆ ವಿಷವಿಟ್ಟಿದ್ದಾರೆ. ಈ ವಿಷಾಹಾರ ಸೇವಿಸಿ ಸತ್ತ ನಾಯಿಗಳ ಶವವನ್ನು ತಿಂದ 25ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಹಿಮಾಲಯನ್ ಗ್ರೀಫನ್ ರಣಹದ್ದುಗಳು ಸಾವನ್ನಪ್ಪಿವೆ.
09:55 AM (IST) Apr 20
08:52 AM (IST) Apr 20
08:48 AM (IST) Apr 20
ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಮುಂದಾಗಿದ್ದಾರೆ. ಆದರೆ, ಮುನೀರ್ಗೆ ಇರಾನ್ನ ಅರೆಸೇನಾಪಡೆ ಐಆರ್ಜಿಸಿ ಜೊತೆ ನಂಟಿದ್ದು, ಆತ 'ರೆಡ್ ಫ್ಲ್ಯಾಗ್' ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಅಧ್ಯಕ್ಷ ಟ್ರಂಪ್ಗೆ ಎಚ್ಚರಿಕೆ ನೀಡಿದೆ.
08:27 AM (IST) Apr 20
ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪ್ರಧಾನಿ ಮೋದಿಯವರು ಸಂವಿಧಾನವನ್ನು ಅಪಹರಿಸಲು ಯತ್ನಿಸುತ್ತಿದ್ದಾರೆ ಎಂದು ಮಾರೀಚನಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.