ಪುಣೆ: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಿಸಿಎಸ್ ಕಚೇರಿಯಲ್ಲಿ ವರ್ಷಗಳಿಂದ ನಡೆದಿದ್ದ ಕಾರ್ಪೊರೆಟ್ ಜಿಹಾದ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಪುಣೆಯಲ್ಲಿರುವ ಇನ್ಫೋಸಿಸ್ನ ಕಚೇರಿಯಲ್ಲೂ ಇಂತಹ ಘಟನೆಗಳು ನಡೆದಿವೆ ಎಂಬ ಆರೋಪಗಳು ಮುನ್ನೆಲೆಗೆ ಬಂದಿವೆ. ಇಂತಹ ಆರೋಪವಿದ್ದ ಒಂದು ಪೋಸ್ಟ್ಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೀಶ್ ರಾಣೆ, ‘ಗುರುತಿಸಿಕೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕೂಡಲೇ ಎಚ್ಚೆತ್ತ ಇನ್ಫೋಸಿಸ್, ‘ಯಾವುದೇ ರೀತಿಯ ಕಿರುಕುಳ, ತಾರತಮ್ಯದ ವಿರುದ್ಧ ನಮ್ಮ ಕಂಪನಿ ಶೂನ್ಯ ಸಹಿಷ್ಣುವಾಗಿದೆ. ಉದ್ಯೋಗಿಗಳಿಗೆ ಎಲ್ಲರನ್ನು ಒಳಗೊಂಡ, ಸುರಕ್ಷಿತ, ಸಕಾರಾತ್ಮಕ ಮತ್ತು ಗೌರವಯುತ ವಾತಾವರಣವನ್ನು ಖಚಿತಪಡಿಸಲು ಶ್ರಮಿಸುತ್ತದೆ’ ಎಂದು ಸ್ಪಷ್ಟನೆ ನೀಡಿದೆ.
08:29 PM (IST) Apr 20
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರೂಪದ ಆರೋಗ್ಯ ಸಮಸ್ಯೆಯೊಂದು ಕ್ರಿಕೆಟಿಗನ ಕಾಡುತ್ತಿದೆ.
07:55 PM (IST) Apr 20
07:29 PM (IST) Apr 20
07:14 PM (IST) Apr 20
ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ, ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭ ಮುಂದೂಡಿಕೆ, ರಾಜಸ್ಥಾನದ ಅತೀ ದೊಡ್ಡ ರಿಫೈನರಿ ಘಟಕದಲ್ಲಿನ ಅಗ್ನಿ ಅವಘಡ ನಿಯಂತ್ರಣಕ್ಕೆ ತರಲು 20 ಅಗ್ನಿಶಾಮಕ ದಳ ಹರಹಾಸ ಪಟ್ಟಿದೆ.
06:49 PM (IST) Apr 20
ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಜೂನ್ 15ಕ್ಕೆ ಮುಂದೂಡಿದ್ದು, ಇಬ್ಬರೂ ಹಾಜರಾಗಲು ಸೂಚಿಸಿದೆ.
06:48 PM (IST) Apr 20
ದರ್ಶನ್ ಅಭಿನಯದ ಗಜ ಸಿನಿಮಾದ ನಟಿ ನವ್ಯಾ ನಾಯರ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್. ಅವರು ಹಂಚಿಕೊಳ್ಳುವ ಪೋಸ್ಟ್ಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಅವರ ಹೊಸ ಪೋಸ್ಟ್ ಒಂದು ವೈರಲ್ ಆಗಿದೆ.
06:10 PM (IST) Apr 20
ಇದೀಗ ಬಹುಭಾಷಾ ನಟಿ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಅವರು ಸಾರ್ವಜನಿಕ ಸ್ಥಳದಲ್ಲಿ ಪಾಪರಾಜಿ ಒಬ್ಬನ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
06:02 PM (IST) Apr 20
'ಜವಾನ್' ಚಿತ್ರದ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿ ಪ್ರಿಯಾ ಅಟ್ಲಿ ಸೋಮವಾರ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಈ ಖುಷಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
05:44 PM (IST) Apr 20
ಉತ್ತರ ಪ್ರದೇಶದ ಫತೇಪುರದಲ್ಲಿ ಶಾಲಾ ಬಾಲಕಿಯರಿಗೆ ಬೈಕ್ನಲ್ಲಿ ಬಂದು ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ 'ನಂತರದ' ಸ್ಥಿತಿಯ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
05:38 PM (IST) Apr 20
04:57 PM (IST) Apr 20
ಇತ್ತೀಚೆಗಷ್ಟೇ ಬಿಡುಗಡೆಯಾದ 'ಧುರಂಧರ್: ದ ರಿವೆಂಜ್' ಸಿನಿಮಾದ ಭರ್ಜರಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದಲ್ಲಿ ಐಬಿ ಡೈರೆಕ್ಟರ್ ಅಜಯ್ ಸಾನ್ಯಾಲ್ ಪಾತ್ರದಲ್ಲಿ ಮಾಧವನ್ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಈಗ ಮ್ಯಾಡಿ ಸುದ್ದಿಯಲ್ಲಿರುವುದು ಸಿನಿಮಾದಿಂದ ಮಾತ್ರವಲ್ಲ, ಅವರು ಹಂಚಿಕೊಂಡಿರುವ ಒಂದು ಸಣ್ಣ ವಿಡಿಯೋದಿಂದ!
04:55 PM (IST) Apr 20
ನಾರಾಯಣಪುರ ಕಾಡು ಪ್ರದೇಶದಲ್ಲಿ ವಿಮಾನ ಪತನ, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು, ಹೈದರಾಬಾದ್ ಹುಬ್ಬಳ್ಳಿ ವಿಮಾನ ಆತಂಕ ಪರಿಸ್ಥಿತಿ ಬೆನ್ನಲ್ಲೇ ಇದೀಗ ಖಾಸಗಿ ವಿಮಾನ ಪತನಗೊಂಡ ಮಾಹಿತಿ ಲಭ್ಯವಾಗಿದೆ.
04:52 PM (IST) Apr 20
ಸೂಪರ್ಸ್ಟಾರ್ ಆರ್ಯ, ಮಂಜು ವಾರಿಯರ್ ನಟನೆಯ 'ಮಿಸ್ಟರ್ ಎಕ್ಸ್' ಸಿನಿಮಾ ಏಪ್ರಿಲ್ 17ಕ್ಕೆ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಕಲೆಕ್ಷನ್ ಮಾತ್ರ ನಿರೀಕ್ಷೆ ತಲುಪಿಲ್ಲ. ಸೋಮವಾರದ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ.
04:41 PM (IST) Apr 20
ರಜನಿಕಾಂತ್ ನಟನೆಯ 'ಜೈಲರ್ 2' ಸಿನಿಮಾದ ಒಟಿಟಿ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಹಕ್ಕುಗಳನ್ನು ಪಡೆದುಕೊಂಡಿದ್ದು, ಇದು ತಮಿಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
04:38 PM (IST) Apr 20
ನಾಸಿಕ್ನ ಟಿಸಿಎಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ. ಟೀಮ್ ಲೀಡರ್ ರಾಝಾ ಮೆನನ್ ಮತ್ತು ತರಬೇತುದಾರ ಶಾರುಖ್ ಖುರೇಷಿ ಅಸಭ್ಯವಾಗಿ ವರ್ತಿಸಿದ್ದು, ಸೀರೆ ಎಳೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
04:23 PM (IST) Apr 20
ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಅತ್ಯಂತ ನಿಬಿಡವಾದ, ತೈಲ ಸಾಗಾಣಿಕೆಗೆ ಅತಿ ಮುಖ್ಯ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಈಗ ಮತ್ತೆ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಘೋಷಿಸಿದರು.
04:19 PM (IST) Apr 20
ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ, ದೇವಸ್ಥಾನದಲ್ಲಿ ಹಾರ ಬದಲಿಸಿ ಮದುವೆಯಾಗಿದ್ದಾರೆ. ಈ ಮದುವೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
04:16 PM (IST) Apr 20
ಸೌತ್ ಇಂಡಿಯನ್ ಸಿನಿಮಾಗಳು ಮಾತ್ರವಲ್ಲ, ಬಾಲಿವುಡ್ ಸಿನಿಮಾಗಳ ಮೂಲಕವೂ ಕೂಡ ಸ್ಟಾರ್ ನಟಿಯಾಗಿ ಮಿಂಚಿರುವ ರಶ್ಮಿಕಾ ಮಂದಣ್ಣ ಅವರು, ಇತ್ತೀಚೆಗಷ್ಟೇ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಸೆಕೆಂಡ್ ಮದರ್’ ಅಂದಿದ್ಯಾಕೆ ನೋಡಿ..
04:12 PM (IST) Apr 20
03:47 PM (IST) Apr 20
ನಾಳೆ ಮೋದಿ ಉದ್ಘಾಟಿಸಬೇಕಿದ್ದ ರಿಫೈನರಿಯಲ್ಲಿ ಬೆಂಕಿ ಅವಘಡ, 20 ಅಗ್ನಿಶಾಮಕ ವಾಹನ ದೌಡು, ಬರೋಬ್ಬರಿ 79 ಸಾವಿರ ಕೋಟಿ ರೂಪಾಯಿ ಹೂಡಿಕೆಯ ರಿಫೈನರಿ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
02:53 PM (IST) Apr 20
ರಾಮಾಯಣ ಸಿನಿಮಾ ತೆರೆಗೆ ಬರಲು ಕಾಲಾವಕಾಶವಿದ್ದರೂ, ಅಮೆರಿಕದ ಸಿನಿಮಾಕಾನ್ನಲ್ಲಿ ನಡೆದ ಒಂದು ಖಾಸಗಿ ಪ್ರದರ್ಶನ ಈಗ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ವೇಳೆ ಮಾತನ್ನಾಡಿರೋ ಯಶ್, ರಾಮಾಯಣ ಸಿನಿಮಾ ಹಾಗೂ ತಮ್ಮ ರಾಮಾಯಣ ಪಾತ್ರದ ಬಗ್ಗೆ ಹೇಳಿದ್ದಾರೆ. ಅದೇನು ಅಂತ ಇಲ್ಲಿದೆ ನೋಡಿ..
02:51 PM (IST) Apr 20
02:31 PM (IST) Apr 20
ಒಂದು ಟೀ ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿಗೆ ಸಾಮಾನ್ಯವಾಗಿ ಎಷ್ಟು ಸಂಬಳ ಇರಬಹುದು? 5,000 ಅಥವಾ 10,000 ರೂಪಾಯಿ. ಹೆಚ್ಚೆಂದರೆ 20,000. ಕೆಫೆಯ ಉದ್ಯೋಗಿಯೊಬ್ಬರು ತಿಂಗಳಿಗೆ 5 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ! ಆ ಹೋಟೆಲ್ ಯಾವುದು ಗೊತ್ತಾ?
01:31 PM (IST) Apr 20
01:05 PM (IST) Apr 20
8 ವರ್ಷದ ಬಾಲಕನ ಸಾವಿಗೆ ವಿಷಕಾರಿ ಕಟ್ಟಾವು ಹಾವು ಕಡಿತವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಫುಡ್ ಪಾಯ್ಸನಿಂಗ್ ಎಂದು ಶಂಕಿಸಲಾಗಿದ್ದ ಈ ಪ್ರಕರಣದಲ್ಲಿ, ಮಕ್ಕಳ ಮಲಗುವ ಕೋಣೆಯಲ್ಲೇ ಹಾವು ಪತ್ತೆಯಾಗಿದೆ. ಮೃತ ಬಾಲಕನ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ.
12:56 PM (IST) Apr 20
ಕಡಿಮೆ ಖರ್ಚಿನಲ್ಲಿ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕಾ? 1 ಲಕ್ಷ ರೂಪಾಯಿಗಿಂತ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಲಾಭದಾಯಕ ಬ್ಯುಸಿನೆಸ್ ಐಡಿಯಾಗಳ ಬಗ್ಗೆ ಇಲ್ಲಿ ತಿಳಿಯೋಣ.
12:54 PM (IST) Apr 20
ಸದ್ಯ 'ರಾಮಾಯಣ' ಸಿನಿಮಾ ಮೂಲಕ ಸುದ್ದಿಯಲ್ಲಿರುವ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಅವರು ಹಳೆಯ ಶಾಕಿಂಗ್ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ನಡೆದ ಈ ಕೆಟ್ಟ ಘಟನೆಯನ್ನು ನಟಿ ಸಾಯಿ ಪಲ್ಲವಿ ಹೀಗೆ ಹೇಳಿದ್ದಾರೆ. ಅದೇನು ನೋಡಿ..
12:43 PM (IST) Apr 20
ಕರ್ನಾಟಕ ಸರ್ಕಾರವು ಹಳೆಯ ಮದ್ಯ ತೆರಿಗೆ ನೀತಿಯನ್ನು ತಿದ್ದುಪಡಿ ಮಾಡಿ, 'ಆಲ್ಕೋಹಾಲ್-ಇನ್-ಬೆವರೇಜ್' (AIB) ಆಧಾರಿತ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ಬದಲಾವಣೆಯಿಂದಾಗಿ ಯುನೈಟೆಡ್ ಬ್ರೂವರೀಸ್ನಂತಹ ಕಂಪನಿಗಳ ಷೇರುಗಳು ಏರಿಕೆ ಕಂಡಿದೆ.
12:05 PM (IST) Apr 20
ಮುಂಬೈನ 90 ವರ್ಷದ ನಿವೃತ್ತ ವೈದ್ಯರೊಬ್ಬರು, ತಮ್ಮನ್ನು ದೀರ್ಘಕಾಲದಿಂದ ಪಾಲನೆ ಮಾಡುತ್ತಿದ್ದ 43 ವರ್ಷದ ವ್ಯಕ್ತಿಯನ್ನು ದತ್ತು ಪಡೆಯಲು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ವಯಸ್ಕರ ದತ್ತು ಸ್ವೀಕಾರಕ್ಕೆ ಸ್ಪಷ್ಟ ಕಾನೂನು ಇಲ್ಲದಿರುವುದರಿಂದ, ಈ ಪ್ರಕರಣವು ಹೊಸ ಕಾನೂನು ಚರ್ಚೆಗೆ ಕಾರಣವಾಗಿದೆ.
12:03 PM (IST) Apr 20
ನಿತೇಶ್ ತಿವಾರಿ ಅವರ ಈ 'ರಾಮಾಯಣ' ಕೇವಲ ಸಿನಿಮಾ ಆಗಿ ಉಳಿಯದೆ, ಭಾರತೀಯ ಚಿತ್ರರಂಗದ ಶಕ್ತಿಯನ್ನು ಜಗತ್ತಿಗೆ ತೋರಿಸುವ ಒಂದು ಭವ್ಯ ಕಿಟಕಿ ಆಗಲಿದೆ ಎಂಬುದರಲ್ಲಿ ಸಂಶಯವಿಲ್ಲ. ಆ 20 ನಿಮಿಷಗಳ ಝಲಕ್ ನೋಡಿದವರು ಕೊಟ್ಟಿರುವ ಪಾಸಿಟಿವ್ ರಿಯಾಕ್ಷನ್ ಈಗ ಹೊಸ ಟಾಕ್ ಸೃಷ್ಟಿಸಿದೆ.
11:47 AM (IST) Apr 20
11:40 AM (IST) Apr 20
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗಾಗಿ ಮೀಸಲಾಗಿದ್ದ ಐಪಿಎಲ್ ವಿಐಪಿ ಟಿಕೆಟ್ಗಳು ನಟಿ ಕುಶಿತಾ ಕಲ್ಲಪು ಅವರ ಕೈಸೇರಿವೆ. ನಟಿಯೇ ಈ ಟಿಕೆಟ್ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ತೆಲಂಗಾಣ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
11:21 AM (IST) Apr 20
10:12 AM (IST) Apr 20
ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ, ಮೇಕೆಗಳನ್ನು ಕೊಂದ ಸೇಡಿಗಾಗಿ ಗ್ರಾಮಸ್ಥರು ಬೀದಿ ನಾಯಿಗಳಿಗೆ ವಿಷವಿಟ್ಟಿದ್ದಾರೆ. ಈ ವಿಷಾಹಾರ ಸೇವಿಸಿ ಸತ್ತ ನಾಯಿಗಳ ಶವವನ್ನು ತಿಂದ 25ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಹಿಮಾಲಯನ್ ಗ್ರೀಫನ್ ರಣಹದ್ದುಗಳು ಸಾವನ್ನಪ್ಪಿವೆ.
09:55 AM (IST) Apr 20
08:52 AM (IST) Apr 20
08:48 AM (IST) Apr 20
ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಮುಂದಾಗಿದ್ದಾರೆ. ಆದರೆ, ಮುನೀರ್ಗೆ ಇರಾನ್ನ ಅರೆಸೇನಾಪಡೆ ಐಆರ್ಜಿಸಿ ಜೊತೆ ನಂಟಿದ್ದು, ಆತ 'ರೆಡ್ ಫ್ಲ್ಯಾಗ್' ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಅಧ್ಯಕ್ಷ ಟ್ರಂಪ್ಗೆ ಎಚ್ಚರಿಕೆ ನೀಡಿದೆ.
08:27 AM (IST) Apr 20
ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪ್ರಧಾನಿ ಮೋದಿಯವರು ಸಂವಿಧಾನವನ್ನು ಅಪಹರಿಸಲು ಯತ್ನಿಸುತ್ತಿದ್ದಾರೆ ಎಂದು ಮಾರೀಚನಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.