ನವದೆಹಲಿ: ಪರೇಶ್ ರಾವಲ್ ನಿರ್ಮಾಣದ ಮುಂದಿನ ಸಿನಿಮಾ ‘ ದಿ ತಾಜ್ ಸ್ಟೋರಿ ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಅದರಲ್ಲಿ ಅದರಲ್ಲಿ ತಾಜ್ ಮಹಲ್ ಗುಮ್ಮಟದಿಂದ ಶಿವನ ವಿಗ್ರಹ ಹೊರಗೆ ಬರುತ್ತಿರುವುದು ಚಿತ್ರಿತವಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಹಿಂದೂ ದೇವಾಲಯವಿದ್ದ ಸ್ಥಳದಲ್ಲಿ ತಾಜ್ ನಿರ್ಮಿಸಲಾಗಿದೆ ಎನ್ನುವ ವಾದ ಹಲವು ಸಮಯಗಳಿಂದಲೂ ಇದೆ. ಇದರ ನಡುವೆಯೇ ಪರೇಶ್ ಸಿನಿಮಾ ಹೊಸ ವಿವಾದ ಹುಟ್ಟುಹಾಕಿದೆ. ಟೀಕೆಗಳ ಬೆನ್ನಲ್ಲೇ ನಿರ್ಮಾಪಕ ಪರೇಶ್ ಸಿನಿಮಾದ ಮೂಲ ಪೋಸ್ಟರ್ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಮುಂದುವರೆದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ‘ಸಿನಿಮಾ ಯಾವುದೇ ಧಾರ್ಮಿಕ ವಿಷಯಗಳನ್ನು ಬಿಂಬಿಸುವುದಿಲ್ಲ. ತಾಜ್ ಮಹಲ್ ಒಳಗೆ ಶಿವ ದೇವಾಲಯವಿದೆ ಎಂದು ಹೇಳುವುದಿಲ್ಲ. ಕೇವಲ ಐತಿಹಾಸಿಕ ಸಂಗತಿಗಳ ಮೇಲೆ ಕೇಂದ್ರೀಕರಿಸುತ್ತದೆ’ ಎಂದಿದ್ದಾರೆ.

10:59 PM (IST) Oct 01
ವಂದೇ ಮಾತರಂ ಗೀತೆಗೆ 150ರ ಸಂಭ್ರಮ, ದೇಶಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಲಾಗಿದೆ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದೇ ರಾಷ್ಟ್ರಗೀತೆಯಾಗಿತ್ತು. ಇದೀಗ ಈ ಹಾಡಿನ ಸಂಭ್ರಮಾಚರಣೆ ಇಡೀ ದೇಶದಲ್ಲಿ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
09:00 PM (IST) Oct 01
Rajasthan Cup Syrup Tragedy: ರಾಜಸ್ಥಾನದಲ್ಲಿ ಕಪ್ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 11 ಮಕ್ಕಳು ಅಸ್ವಸ್ಥರಾಗಿದ್ದಾರೆ. ಈ ಸಿರಪ್ ಸುರಕ್ಷಿತವೆಂದು ಸಾಬೀತುಪಡಿಸಲು ಅದನ್ನು ಸೇವಿಸಿದ ವೈದ್ಯರೊಬ್ಬರು ಸಹ ಗಂಟೆಗಳ ಕಾಲ ಪ್ರಜ್ಞೆ ತಪ್ಪಿ ಬಿದ್ದ ಆಘಾತಕಾರಿ ಘಟನೆ ನಡೆದಿದೆ.
08:14 PM (IST) Oct 01
Big Boss Contestant Farhana Bhat Fears Marriage ಬಿಗ್ ಬಾಸ್ ಮನೆಯಲ್ಲಿ ಕುನಿಕಾ ಸದಾನಂದ್ ಮತ್ತು ಫರ್ಹಾನಾ ಭಟ್ ಪರಸ್ಪರ ಹರಟೆ ಹೊಡೆಯುತ್ತಿರುವುದು ಕಂಡುಬಂದಿತು. ಈ ಬಾರಿ ಫರ್ಹಾನಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
07:20 PM (IST) Oct 01
Sonam Kapoor Reportedly Pregnant with Second Child ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಪತಿ ಆನಂದ್ ಅಹುಜಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
07:13 PM (IST) Oct 01
ಓರಾಯನ್ ಮಾಲ್ಲ್ಲಿ ಕಾಂತಾರಾ 1 ಪ್ರೀಮಿಯರ್ ಶೋ, ಮೂವಿ ವೀಕ್ಷಣೆಗೆ ಫ್ಯಾನ್ಸ್ ಜೊತೆ ಬಂದ ರಿಷಬ್, ಮಾಲ್ನ 7 ಸ್ಕ್ರೀನ್ ಕೂಡ ಹೌಸ್ ಫುಲ್ ಆಗಿದೆ. ಪತ್ನಿ ಸಮೇತ ರಿಷಬ್ ಶೆಟ್ಟಿ ಮಾಲ್ಗೆ ಆಗಮಿಸಿದ್ದು, ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ.
07:12 PM (IST) Oct 01
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಅಂಗವಾಗಿ ಬಿಡುಗಡೆ ಮಾಡಿರುವ ಅಂಚೆಚೀಟಿ ಮತ್ತು ವಾಜಪೇಯಿ ಅವಧಿಯಲ್ಲಿ ಬಿಡುಗಡೆಯಾದ ಅಂಚೆಚೀಟಿಗಳ ಕುತೂಹಲದ ಸ್ಟೋರಿ ಇಲ್ಲಿದೆ…
06:42 PM (IST) Oct 01
ಅಕ್ಟೋಬರ್ 2ರ ವಿಜಯದಶಮಿ ದಿನ ಈ ಶುಭ ಮುಹೂರ್ತದಲ್ಲಿ ವಾಹನ ಖರೀದಿಸಿ, ಕಾರು ಬೈಕ್, ಸ್ಕೂಟರ್ ಸೇರಿದಂತೆ ವಾಹನ ಖರೀದಿಸಲು ಉತ್ತಮ ಸಮಯ ಮಿಸ್ ಮಾಡಿಕೊಳ್ಳಬೇಡಿ. ಈ ಸಮಯದಲ್ಲಿ ವಾಹನ ಖರೀದಿಸಿದರೆ ಜೀವನದಲ್ಲಿ ಎಲ್ಲವೂ ಶುಭವಾಗಲಿದೆ ಅನ್ನೋ ನಂಬಿಕೆ ಇದೆ.
06:36 PM (IST) Oct 01
Allu Sirish Engaged to Nayanika ನಟ ಅಲ್ಲು ಸಿರೀಶ್ ಅವರು ತಮ್ಮ ಅಜ್ಜ, ದಿವಂಗತ ಅಲ್ಲು ರಾಮಲಿಂಗಯ್ಯ ಅವರ ಜನ್ಮದಿನದಂದೇ ನಯನಿಕಾ ಅವರೊಂದಿಗೆ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ.
06:35 PM (IST) Oct 01
ದಸರಾ ಅಥವಾ ವಿಜಯದಶಮಿಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. 2025ರ ದಸರಾ ಹಬ್ಬದ ನಿಖರವಾದ ಪೂಜಾ ಮುಹೂರ್ತದ ಜೊತೆಗೆ, ಶ್ರೀರಾಮ, ಹನುಮಂತ, ಶನಿ ಮತ್ತು ಭೈರವ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಜೀವನದ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ವಿಧಾನ ವಿವರಿಸಲಾಗಿದೆ.
06:27 PM (IST) Oct 01
06:16 PM (IST) Oct 01
Anusha Dandekar dating app story: ಗಾಯಕಿ ಹಾಗೂ ನಟಿ ಅನುಷಾ ದಂಡೇಕರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರಚಾರ ಮಾಡುತ್ತಿದ್ದ ಡೇಟಿಂಗ್ ಆಪ್ ಅನ್ನೇ ಬಳಸಿ ತಮ್ಮ ಮಾಜಿ ಗೆಳೆಯ ತಮಗೆ ಹೇಗೆ ಮೋಸ ಮಾಡಿದರು ಎಂಬುದನ್ನು ಅವರು ವಿವರಿಸಿದ್ದಾರೆ.
05:43 PM (IST) Oct 01
GV Prakash and Saindhavi Divorce After 12 Years of Marriage ತಮಿಳು ಸಂಗೀತ ಲೋಕದ ಖ್ಯಾತ ಜೋಡಿ ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಸೈಂಧವಿ, 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ. ಚೆನ್ನೈ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ಅಂತಿಮಗೊಳಿಸಿದೆ.
05:32 PM (IST) Oct 01
ಅದಾನಿ ಹಿಂದಿಕ್ಕಿದ ಅಂಬಾನಿ ಈಗ ನಂ.1 ಶ್ರೀಮಂತ, ಮಹಿಳೆಯರ ಪೈಕಿ ರೋಶನಿ ನಾಡರ್ಗೆ ಪಟ್ಟ, ಹುರನ್ ಇಂಡಿಯಾ ಬಿಡುಗಡೆ ಮಾಡಿದ ನೂತನ ಪಟ್ಟಿಯಲ್ಲಿ ಹಲವು ಬದಲಾವಣೆಯಾಗಿದೆ. ಭಾರತದ ಶ್ರೀಮಂತರ ಸ್ಥಾನ ಪಲ್ಲಟವಾಗಿದೆ.
04:23 PM (IST) Oct 01
Dimple Hayati housemaid case: ಟಾಲಿವುಡ್ ನಟಿ ಡಿಂಪಲ್ ಹಯಾತಿ ಹಾಗೂ ಆಕೆಯ ಪತಿ ವಿಕ್ಟರ್ ಡೇವಿಡ್ ವಿರುದ್ಧ ಮನೆಕೆಲಸದಾಕೆಗೆ ಕಿರುಕುಳ ನೀಡಿದ ಆರೋ ಕೇಳಿ ಬಂದಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹೈದರಾಬಾದ್ನ ಫಿಲ್ಮ್ನಗರ ಪೊಲೀಸ್ ಠಾಣೆಯಲ್ಲಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
04:18 PM (IST) Oct 01
ಭಾರತದ ಗೂಗಲ್ ಕ್ರೋಮ್ ಬಳಕೆದಾರರಿಗೆ ವಾರ್ನಿಂಗ್, ತಕ್ಷಣ ಅಪ್ಡೇಟ್ಗೆ ಸೂಚನೆ ನೀಡಲಾಗಿದೆ. ಕ್ರೋಮ್ ಬಳಕೆದಾರರಿಗೆ ಗೂಗಲ್ ಕೊಟ್ಟ ಸೂಚನೆಗೆ ಕಾರಣವೇನು? ಕ್ರೋಮ್ ಬಳಸುತ್ತಿರುವವರಿಗೆ ಅಪಾಯವಿದೆಯಾ?
03:36 PM (IST) Oct 01
ಅಕ್ಟೋಬರ್ 3ರ ಭಾರತ್ ಬಂದ್ ಮುಂದೂಡಿದ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ , ವಕ್ಫ್ ತಿದ್ದುಪಡಿ ವಿರೋಧಿಸಿ ನಡೆಯಬೇಕಿದ್ದ ಭಾರತ್ ಬಂದ್ ಇದೀಗ ಹೊಸ ದಿನಾಂಕದಲ್ಲಿ ನಡೆಯಲಿದೆ. ಯಾವ ದಿನ ಭಾರತ್ ಬಂದ್ ನಡೆಯಲಿದೆ.
03:00 PM (IST) Oct 01
Central Govt Announces 3% DA/DR Hike for Employees Pensioners ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ (ಡಿಎ) ಶೇ.3 ರಷ್ಟು ಹೆಚ್ಚಳವನ್ನು ಅನುಮೋದಿಸಿದೆ.
02:41 PM (IST) Oct 01
ದುಬೈ: 2025ರ ಏಷ್ಯಾಕಪ್ ಟೂರ್ನಿ ಮುಗಿದು ಎರಡು ದಿನ ಕಳೆದಿದೆ. ಹೀಗಿದ್ದೂ ಏಷ್ಯಾಕಪ್ ಚಾಂಪಿಯನ್ ಭಾರತಕ್ಕೆ ಟ್ರೋಫಿ ಸಿಕ್ಕಿಲ್ಲ. ಇದೆಲ್ಲದರ ನಡುವೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ, ಬಿಸಿಸಿಐ ಕ್ಷಮೆ ಕೋರಿದ್ದಾರೆ. ಆದ್ರೆ ಟ್ರೋಫಿ ನೀಡಲು ಮತ್ತೊಂದು ಕಂಡೀಷನ್ ಹಾಕಿದ್ದಾರೆ.
02:37 PM (IST) Oct 01
Teacher Spelling Mistakes: ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರು ಚೆಕ್ನಲ್ಲಿ ಮೊತ್ತವನ್ನು ಪದಗಳಲ್ಲಿ ಬರೆಯುವಾಗ ಹಲವಾರು ಕಾಗುಣಿತ ತಪ್ಪು ಮಾಡಿದ್ದಾರೆ. ಈ ಚೆಕ್ ಅನ್ನು ಬ್ಯಾಂಕ್ ತಿರಸ್ಕರಿಸಿದ್ದು, ಈ ಚೆಕ್ ಫೋಟೋ ವೈರಲ್ ಆಗಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.
01:33 PM (IST) Oct 01
Moradabad Bajrang Dal worker death: ಉತ್ತರ ಪ್ರದೇಶದಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಸಂಬಂಧಿಸಿದಂತೆ 20 ವರ್ಷದ ಭಜರಂಗದಳದ ಕಾರ್ಯಕರ್ತ ಶೋಭಿತ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯಿಂದಾಗಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
01:12 PM (IST) Oct 01
Bride dupes groom on wedding night: ಅದ್ದೂರಿ ಮದುವೆಯ ನಂತರ ವಧುವೊಬ್ಬಳು ವಿಚಿತ್ರ ಸಂಪ್ರದಾಯದ ನೆಪ ಹೇಳಿ ಗಂಡನಿಂದ ದೂರ ಮಲಗಿದ್ದಾಳೆ. ಮಧ್ಯರಾತ್ರಿ, ಆಕೆ ಚಿನ್ನಾಭರಣ ಮತ್ತು ಹಣದೊಂದಿಗೆ ಬ್ರೋಕರ್ ಜೊತೆ ಪರಾರಿಯಾಗಿದ್ದು, ವಂಚನೆಗೊಳಗಾದ ವರ ಪೊಲೀಸರಿಗೆ ದೂರು ನೀಡಿದ್ದಾನೆ.
01:08 PM (IST) Oct 01
PM Modi Releases ₹100 Coin with Bharat Mata for RSS Centenary ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ 100 ರೂಪಾಯಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
12:52 PM (IST) Oct 01
ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವಲ್ಲಿ ಯುವ ಬ್ಯಾಟರ್ ತಿಲಕ್ ವರ್ಮಾ ಪ್ರಮುಖ ಪಾತ್ರವಹಿಸಿದ್ದರು. ಅವರ ಕ್ರಿಕೆಟ್ ಪಯಣ ಮತ್ತು ಕುಟುಂಬದ ಹಿನ್ನೆಲೆಯ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ.
12:42 PM (IST) Oct 01
BJP Jamal Siddiqui Demands Bharat Ratna for RSS Founder ಏಪ್ರಿಲ್ 1, 1889 ರಂದು ನಾಗ್ಪುರದಲ್ಲಿ ಜನಿಸಿದ ಕೆ.ಬಿ. ಹೆಡ್ಗೆವಾರ್ ಅವರು 1925 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅನ್ನು ಸ್ಥಾಪಿಸಿದರು, ಇದು ಅಕ್ಟೋಬರ್ 2, ವಿಜಯದಶಮಿಯಂದು ತನ್ನ ನೂರು ವರ್ಷಗಳನ್ನು ಆಚರಿಸಲಿದೆ.
12:11 PM (IST) Oct 01
ಢಾಕಾ: ಬಾಂಗ್ಲಾದೇಶ ಪರ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದ ಅನುಭವಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಕ್ರಿಕೆಟ್ ವೃತ್ತಿ ಬದುಕು ದುರಂತ ಅಂತ್ಯ ಕಂಡಿದೆ. ಶಕೀಬ್ ಮಾಡಿದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್, ಅವರು ಇನ್ನು ಯಾವತ್ತೂ ಬಾಂಗ್ಲಾದೇಶ ಜೆರ್ಸಿ ತೊಡದಂತೆ ಮಾಡಿದೆ.
12:08 PM (IST) Oct 01
Tiruvannamalai police rape case: ತಮಿಳುನಾಡಿನ ತಿರುವಣಮಲೈನಲ್ಲಿ ಹಣ್ಣು ಮಾರುತ್ತಿದ್ದ ಯುವತಿಯ ಮೇಲೆ ಇಬ್ಬರು ಪೊಲೀಸರು ಅತ್ಯಾ*ಚಾರ ಎಸಗಿದ ಆರೋಪ ಕೇಳಿ ಬಂದಿದೆ. ಆರೋಪಿ ಪೊಲೀಸರನ್ನು ಬಂಧಿಸಿ ಅಮಾನತುಗೊಳಿಸಲಾಗಿದ್ದು, ಈ ಘಟನೆಯು ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
11:37 AM (IST) Oct 01
Global tech layoffs: ವೆಚ್ಚಕಡಿತ ಮತ್ತು ಎಐ ಅಳವಡಿಕೆಯ ಕಾರಣಗಳಿಂದ ಟಿಸಿಎಸ್, ಆ್ಯಕ್ಸೆಂಚರ್, ಗೂಗಲ್ನಂತಹ ಐಟಿ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ.
11:19 AM (IST) Oct 01
New rules from October 1 2025: ಅಕ್ಟೋಬರ್ 1 ರಿಂದ ದೇಶದ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇವು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿವೆ.
09:10 AM (IST) Oct 01
ದುಬೈನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ, ಏಷ್ಯಾಕಪ್ ಗೆದ್ದ ಭಾರತವನ್ನು ಅಭಿನಂದಿಸದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಸಿಸಿಐ ಒತ್ತಡಕ್ಕೆ ಮಣಿದ ನಖ್ವಿ ನಂತರ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
08:27 AM (IST) Oct 01
Bihar final voter list details: ಚುನಾವಣಾ ಆಯೋಗವು ಬಿಹಾರದ ಅಂತಿಮ ಮತಪಟ್ಟಿ ಪರಿಷ್ಕರಣೆಯನ್ನು ಪ್ರಕಟಿಸಿದ್ದು, ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಸಾವು, ಸ್ಥಳಾಂತರ ಮತ್ತು ನಕಲಿ ಹೆಸರುಗಳ ಕಾರಣದಿಂದಾಗಿ ಮತದಾರರ ಸಂಖ್ಯೆ 7.42 ಕೋಟಿಗೆ ಇಳಿದಿದೆ.
08:07 AM (IST) Oct 01
H1B visa fee increase impact: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್1ಬಿ ವೀಸಾ ಶುಲ್ಕವನ್ನು ಏರಿಸಿದ್ದರಿಂದ, ಅಮೆರಿಕದ ಕಂಪನಿಗಳಿಗೆ ಭಾರತೀಯರನ್ನು ನೇಮಿಸಿಕೊಳ್ಳುವುದು ದುಬಾರಿಯಾಗಿದೆ.
08:02 AM (IST) Oct 01
ಏಷ್ಯಾಕಪ್ ಗೆಲುವಿನ ಬಳಿಕ ಭಾರತ ತಂಡವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ತವರಿನ ಅಭಿಯಾನವನ್ನು ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯೊಂದಿಗೆ ಆರಂಭಿಸಲಿದೆ. ಶುಭಮನ್ ಗಿಲ್ ನಾಯಕತ್ವದ ತಂಡವು ಅಹಮದಾಬಾದ್ನಲ್ಲಿ ಮೊದಲ ಪಂದ್ಯವನ್ನಾಡಲಿದೆ.
07:48 AM (IST) Oct 01
Thalapathy Vijay challenges MK Stalin: ಕರೂರು ರ್ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಸಿಎಂ ಸ್ಟಾಲಿನ್ಗೆ ನೇರ ಸವಾಲೆಸೆದಿರುವ ದಳಪತಿ ವಿಜಯ್, ಇದು ರಾಜಕೀಯ ಸಂಚು ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
07:32 AM (IST) Oct 01
LPG Price Toda: ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್ಪಿಜಿ ದರವನ್ನು ಪರಿಷ್ಕರಿಸಿದ್ದು, ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದ್ದರೆ, ವಾಣಿಜ್ಯ ಬಳಕೆ ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ.