Published : Jul 18, 2026, 07:10 AM ISTUpdated : Jul 18, 2026, 11:35 PM IST

India Latest News Live: ಆ ಭಯಕ್ಕೆ ಮಗನಿಗೆ ಹಾಲು ಕೊಡೋದನ್ನೇ ನಿಲ್ಲಿಸಿದೆ - ಮಗಧೀರ ನಟಿ ಕಾಜಲ್ ಶಾಕಿಂಗ್ ಹೇಳಿಕೆ

ಸಾರಾಂಶ

ನವದೆಹಲಿ: ಕಳೆದ 20 ದಿನಗಳಿಂದ ಸಿಜೆಪಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ನಡೆಸುತ್ತಿರುವ ಸೋನಂ ವಾಂಗ್ಚುಕ್‌ ಅವರಿಗೆ ರೈತರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರ ನೇತೃತ್ವದಲ್ಲಿ ಸುಮಾರು 500 ರೈತರು ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆರಳಿ ವಾಂಗ್ಚುಕ್‌, ಕಾಕ್ರೋಚ್‌ ಜನತಾ ಪಕ್ಷದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ವಾಂಗ್ಚುಕ್‌ ಮತ್ತೆ 350 ಗ್ರಾಂ ತೂಕ ಕಳೆದುಕೊಂಡಿದ್ದಾರೆ. 20 ದಿನದಲ್ಲಿ 9.5ಕೇಜಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನು ವಾಂಗ್ಚುಕ್‌ ಪ್ರತಿಭಟನೆ ಕಾಂಗ್ರೆಸ್‌ ಕೂಡ ಬೆಂಬಲಿಸಿದೆ. ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಪವನ್‌ ಖೇರಾ ಸೇರಿದಂತೆ ವಿವಿಧ ಪಕ್ಷದ ನಾಯಕರು ವಾಂಗ್ಚುಕ್‌ ಅವರನ್ನು ಭೇಟಿಯಾಗಿ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.

11:35 PM (IST) Jul 18

ಆ ಭಯಕ್ಕೆ ಮಗನಿಗೆ ಹಾಲು ಕೊಡೋದನ್ನೇ ನಿಲ್ಲಿಸಿದೆ - ಮಗಧೀರ ನಟಿ ಕಾಜಲ್ ಶಾಕಿಂಗ್ ಹೇಳಿಕೆ

ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿವೆ. ತಮ್ಮ 'ದಿ ಇಂಡಿಯಾ ಸ್ಟೋರಿ' ಸಿನಿಮಾದ ಪ್ರಚಾರದ ವೇಳೆ ಆಹಾರ ಕಲಬೆರಕೆ ಬಗ್ಗೆ ಕಾಜಲ್ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

Read Full Story

10:41 PM (IST) Jul 18

ನಟಿ ಮಂಚು ಲಕ್ಷ್ಮಿ ಪತಿ ಯಾರು? ಅವರ ಹಿನ್ನೆಲೆ ಏನು? ಎಲ್ಲಿದ್ದಾರೆ, ಏನ್ಮಾಡ್ತಾರೆ ಗೊತ್ತಾ?

ನಟಿ ಮಂಚು ಲಕ್ಷ್ಮಿ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರೇಕ್ಷಕರಿಗೆ ಯಾವಾಗಲೂ ಕುತೂಹಲ. ಅದರಲ್ಲೂ ಅವರ ಪತಿ ಯಾರು, ಎಲ್ಲಿದ್ದಾರೆ, ಏನು ಮಾಡುತ್ತಾರೆ ಎಂಬ ವಿಷಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹಾಗಿದ್ರೆ, ಮಂಚು ಲಕ್ಷ್ಮಿ ಪತಿ ಯಾರು?

Read Full Story

10:12 PM (IST) Jul 18

ಗಂಡ ಒಳ್ಳೇವ್ನೆ, ಸಂಸಾರನೂ ಚೆನ್ನಾಗಿದೆ... ಆದ್ರೂ ಈಕೆ ಯಾಕೆ ಡಿವೋರ್ಸ್ ಕೇಳಿದ್ಲು?

ಗಂಡನಿಂದ ಪ್ರೀತಿ ಸಿಕ್ಕಿದೆ, ಸಂಸಾರದಲ್ಲಿ ಯಾವ್ ಸಮಸ್ಯೆಯೂ ಇಲ್ಲ. ಆದ್ರೂ ಇಬ್ಬರು ಮಕ್ಕಳ ತಾಯಿ ಗಂಡನಿಂದ ವಿಚ್ಛೇದನ ಕೇಳಿದ್ದಾಳೆ. ಹೀಗೆ ಸಂಬಂಧ ಮುರಿದುಕೊಳ್ಳುವ ನಿರ್ಧಾರಕ್ಕೆ ಆಕೆ ಬರಲು ಕಾರಣವಾದರೂ ಏನು? ಇಲ್ಲಿದೆ ವಿವರ.

Read Full Story

09:55 PM (IST) Jul 18

Ramayana Event - ದೆಹಲಿ ನೆಲದಲ್ಲಿ ನಿಂತು ಕನ್ನಡದಲ್ಲೇ ಮಾತು ಆರಂಭಿಸಿದ ಯಶ್ 'ರಾಮಾಯಣ ಈವೆಂಟ್'ನಲ್ಲಿ ಹೇಳಿದ್ದೇನು?

ದೆಹಲಿಯ ರಾಮಾಯಣ (Pratham Sankalp) ಈವೆಂಟ್‌ನಲ್ಲಿ ಮಾತನ್ನಾಡಿದ ನಟ ಯಶ್, ಕನ್ನಡದಲ್ಲಿಯೇ ಮಾತು ಶುರು ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ; ಎಂದು ಕನ್ನಡದಲ್ಲೇ ಮಾತು ಆರಂಬಿಸಿ, ಬಳಿಕ ಉಳಿದ ಭಾಷೆಗಳಲ್ಲಿ ನಮಸ್ಕಾರ ಹೇಳಿ, ನಂತರ ಈವೆಂಟ್ ಹಾಗೂ ರಾಮಾಯಣದ ಬಗ್ಗೆ ಮಾತನ್ನಾಡಿದ್ದಾರೆ.

Read Full Story

09:35 PM (IST) Jul 18

ರಶ್ಮಿಕಾ ಮಂದಣ್ಣ ಸ್ಕ್ರೀನ್ ಲುಕ್‌ಗಳೇ ಟ್ರೆಂಡ್ - ಯಾವ ಸಿನಿಮಾ ಲುಕ್ ನಿಮಗೆ ಫೇವರಿಟ್?

ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಕಾಣಿಸಿಕೊಳ್ಳುವ ರೀತಿ ಪ್ರತಿ ಸಿನಿಮಾದಲ್ಲೂ ಬದಲಾಗುತ್ತಲೇ ಇರುತ್ತದೆ. 'ಪುಷ್ಪ'ದಿಂದ 'ಛಾವಾ'ದಂತಹ ಸಿನಿಮಾಗಳಲ್ಲಿನ ಅವರ ಬಹುಮುಖತೆ, ಅವರನ್ನು ಭಾರತೀಯ ಚಿತ್ರರಂಗದ ಟಾಪ್ ಫ್ಯಾಷನ್ ಐಕಾನ್ ಆಗಿ ಮಾಡಿದೆ.

Read Full Story

07:06 PM (IST) Jul 18

'ರಾಮಾಯಣ' ಟ್ರೇಲರ್‌ಗೂ ಮುನ್ನ ಯಶ್ ಜೊತೆ ಕಾಣಿಸಿಕೊಂಡ ರಿಷಬ್ - ಅಯೋಧ್ಯೆ ವಿಶೇಷ ವಾಚ್ ವೈರಲ್

ಭಾರತದ ದಿಗ್ಗಜ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ ಶಿಷ್ಯರಾಗಿರುವ ರಿಷಬ್ ಶರ್ಮಾ, ನಟ ರಣಬೀರ್ ಕಪೂರ್, ಯಶ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

Read Full Story

06:59 PM (IST) Jul 18

Military Vs Army - ಮಿಲಿಟರಿ, ಆರ್ಮಿ ಒಂದೇನಾ? ಎರಡರ ನಡುವಿನ ವ್ಯತ್ಯಾಸ ನಿಮಗೆ ಗೊತ್ತಾ?

ಇಂಡಿಯನ್ ಮಿಲಿಟರಿ ಮತ್ತು ಇಂಡಿಯನ್ ಆರ್ಮಿ ಎರಡೂ ಒಂದೇ ಎಂದು ನೀವು ಭಾವಿಸಿದ್ದೀರಾ? ಹಾಗಿದ್ದರೆ ನಿಮ್ಮ ಊಹೆ ತಪ್ಪು. ಮಿಲಿಟರಿ ಹಾಗೂ ಆರ್ಮಿ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
Read Full Story

06:44 PM (IST) Jul 18

SBI Bank ATM ಅನ್ನೇ ಬೆಡ್‌ರೂಮ್ ಮಾಡಿಕೊಂಡ ಭೂಪ! ಸೆಕ್ಯುರಿಟಿ ಎಲ್ಲಿ ಅಂತಿದ್ದಾರೆ ಜನ

ಉತ್ತರ ಪ್ರದೇಶದ ಎಸ್‌ಬಿಐ ಎಟಿಎಂ ಒಂದರಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮಲಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಭದ್ರತಾ ಲೋಪ ಮತ್ತು ಸಾಮಾನ್ಯರ ಕಷ್ಟಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಎಟಿಎಂ ಬಳಕೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಆರ್‌ಬಿಐ ನಿಯಮಗಳ ಬಗ್ಗೆಯೂ ಈ ಲೇಖನ ಮಾಹಿತಿ ನೀಡುತ್ತದೆ.
Read Full Story

06:37 PM (IST) Jul 18

'ಇಂತಹ ನಟಿಯನ್ನು ನಾನು ನೋಡಿಲ್ಲ' - ರಶ್ಮಿಕಾ ಕಠಿಣ ಪರಿಶ್ರಮಕ್ಕೆ ಫಿದಾ ಆದ ಬೃಂದಾ ಮಾಸ್ಟರ್

ಖ್ಯಾತ ನೃತ್ಯ ನಿರ್ದೇಶಕಿ ಬೃಂದಾ ಮಾಸ್ಟರ್ 'ಮೈಸಾ' ಚಿತ್ರಕ್ಕೆ ಕೊರಿಯೋಗ್ರಫಿ ಮಾಡುತ್ತಿದ್ದು, ಈ ವೇಳೆ ರಶ್ಮಿಕಾ ಮಂದಣ್ಣ ಅವರ ಶ್ರಮ, ಶಿಸ್ತು ಮತ್ತು ಸಮರ್ಪಣೆಯ ಬಗ್ಗೆ ಮನದಾಳದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Read Full Story

06:25 PM (IST) Jul 18

PhonePe, GPay ಬಳಸ್ತೀರಾ? 2000 ರೂಪಾಯಿಗಿಂದ ಹೆಚ್ಚು ಕಳಿಸಿದ್ರೆ ಟ್ಯಾಕ್ಸ್ ಬೀಳುತ್ತಾ? UPI Rules

UPI transaction new rules 2026: ನೀವು ಯುಪಿಐ ಮೂಲಕ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ. ₹2,000 ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ವಾಣಿಜ್ಯ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

Read Full Story

06:20 PM (IST) Jul 18

'ಅವನಾಗ ಮಗು, ಈಗ ಫೈನಲ್‌ನಲ್ಲಿ ಎದುರಾಳಿ' - ವೈರಲ್ ಫೋಟೋ ಬಗ್ಗೆ ಕೊನೆಗೂ ಮೌನ ಮುರಿದ ಲಿಯೋನೆಲ್ ಮೆಸ್ಸಿ!

ವಿಶ್ವಕಪ್ ಫೈನಲ್‌ಗೂ ಮುನ್ನ, ಸ್ಪೇನ್‌ನ ಲಮಿನ್ ಯಮಾಲ್ ಜೊತೆಗಿನ ತಮ್ಮ ವೈರಲ್ ಫೋಟೋ ಬಗ್ಗೆ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಮೌನ ಮುರಿದಿದ್ದಾರೆ. 2007ರಲ್ಲಿ ಯಮಾಲ್ ಮಗುವಾಗಿದ್ದಾಗ ತೆಗೆದ ಈ ಫೋಟೋ ಕುರಿತು ಮಾತನಾಡಿದ ಮೆಸ್ಸಿ, ಯಮಾಲ್‌ನನ್ನು ಹೊಗಳಿದರೂ ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read Full Story

06:07 PM (IST) Jul 18

ಐಶ್ವರ್ಯಾ ರೈ ಬಗ್ಗೆ ನನಗಿಷ್ಟವಿಲ್ಲದ ಒಂದೇ ಒಂದು ವಿಷಯ ಅಂದ್ರೆ... - ಅಭಿಷೇಕ್ ಹೇಳಿದ್ದೇನು?

ಒಮ್ಮೆ ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯಾ ರೈ ಅವರಲ್ಲಿ ತನಗಿಷ್ಟವಿಲ್ಲದ ಒಂದು ಗುಣದ ಬಗ್ಗೆ ಹೇಳಿಕೊಂಡಿದ್ದರು. ಅಷ್ಟಕ್ಕೂ ಅಭಿಷೇಕ್‌ಗೆ ಐಶ್ವರ್ಯಾ ಅವರ ಯಾವ ಅಭ್ಯಾಸ ಇಷ್ಟವಿಲ್ಲ? ಇಲ್ಲಿದೆ ಡೀಟೇಲ್ಸ್.

Read Full Story

05:37 PM (IST) Jul 18

'ನಕ್ಕಾಗ ಸೌಂದರ್ಯ, ನಗದಿದ್ದಾಗ ಬೆಂಕಿ' - 'ವಾರಣಾಸಿ'ಯಲ್ಲಿ ಪ್ರಿಯಾಂಕಾ ಚೋಪ್ರಾ ಹೊಸ ಅವತಾರ

Priyanka Chopra Birthday: ನಟಿ ಪ್ರಿಯಾಂಕಾ ಚೋಪ್ರಾ ಅವರ 44ನೇ ಹುಟ್ಟುಹಬ್ಬದಂದು, ಎಸ್.ಎಸ್. ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿನ ಅವರ 'ಮಂದಾಕಿನಿ' ಪಾತ್ರದ ಲುಕ್ ರಿವೀಲ್ ಆಗಿದೆ.

Read Full Story

05:35 PM (IST) Jul 18

ಹಠ ಬಿಡದ ಸೋನಮ್ ವಾಂಗ್ಚುಕ್ - ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ನಿರಾಕರಣೆ, ಭಾರೀ ಪ್ರಮಾಣದಲ್ಲಿ ಕುಸಿದ ಶುಗರ್‌ ಲೆವಲ್‌

ನೀಟ್ ಪೇಪರ್ ಸೋರಿಕೆ ಖಂಡಿಸಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ತೀವ್ರ ನಿಶ್ಯಕ್ತಿಯಿಂದಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

05:02 PM (IST) Jul 18

Naga Chaitanya - ಆಸ್ತಿ ಪಾಸ್ತಿ ಹೇಗೂ ಇದೆ, ಆದ್ರೆ ಹಾಗೆ ಮಾಡಿದ್ರೆ ನಕಲಿ ಆಗ್ತಾನೆ - ನಟ ಬಾಲಯ್ಯ!

Actor Balakrishna: ನಾಗ ಚೈತನ್ಯ ಬಗ್ಗೆ ನಂದಮೂರಿ ಬಾಲಕೃಷ್ಣ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದೆ. ನಾಗ ಚೈತನ್ಯರ ಭವಿಷ್ಯ ಹಾಗೂ ಅಕ್ಕಿನೇನಿ ಕುಟುಂಬದ ಬಗ್ಗೆ ಬಾಲಯ್ಯ ಮಾಡಿದ ಕಾಮೆಂಟ್‌ಗಳು ಕುತೂಹಲ ಮೂಡಿಸಿವೆ.

Read Full Story

04:46 PM (IST) Jul 18

ಆಮೀರ್​ ಖಾನ್​ಗೆ 3ನೇ ಮದುವೆ ಕಂಟಕ! ಫತ್ವಾ ಆಯ್ತು, ಈಗ ಜೀವಕ್ಕೇ ಕುತ್ತು - ಪ್ರಾಣ ಬೆದರಿಕೆ

ನಟ ಆಮೀರ್ ಖಾನ್ ತಮ್ಮ ಮೂರನೇ ಮದುವೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಸ್ಲಿಂ ಧರ್ಮಗುರುಗಳಿಂದ ಫತ್ವಾ ಎದುರಿಸಿದ ಬೆನ್ನಲ್ಲೇ, ಇದೀಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ 'ಲವ್ ಜಿಹಾದ್' ಆರೋಪದ ಮೇಲೆ ನಟನಿಗೆ ಬೆದರಿಕೆ ಹಾಕಿದೆ.

Read Full Story

04:40 PM (IST) Jul 18

ಪತಿಯ ಆರೋಗ್ಯ ಸುಧಾರಿಸಲಿ- ರಷ್ಯಾದವರಾದ್ರೂ ತಿರುಪತಿ ಬೆಟ್ಟ ಹತ್ತಿದ Pawan Kalyan ಪತ್ನಿ ಅನ್ನಾ ಕೊನಿಡೆಲ

Pawan Kalyan Wife Anna: ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ, ಪತಿಯ ಆರೋಗ್ಯಕ್ಕಾಗಿ ತಿರುಪತಿಗೆ ನಡೆದುಕೊಂಡು ಹೋಗಿ ಹರಕೆ ತೀರಿಸಿದ್ದಾರೆ. ವಿದೇಶದಲ್ಲಿ ಬೆಳೆದರೂ ಭಾರತೀಯ ಸಂಪ್ರದಾಯಗಳನ್ನು ಪಾಲಿಸುತ್ತಿರುವ ಅವರ ನಡೆಗೆ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Read Full Story

04:00 PM (IST) Jul 18

ಹಸಿರು-ಕೆಂಪು ಮೆಣಸಿನಕಾಯಿಯಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ಇಲ್ಲಿದೆ ತಿಳಿಯಲೇಬೇಕಾದ ಮಾಹಿತಿ!

ಹೃದಯದ ಆರೋಗ್ಯ: ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಯಾವುದು ಬೆಸ್ಟ್? ಈ ಸ್ಟೋರಿ ನೋಡಿ..

Read Full Story

03:52 PM (IST) Jul 18

ಬುಲೆಟ್ ರೈಲು ವಿಳಂಬಕ್ಕೆ ಭಾರತದ ಸಚಿವರೇ ಕಾರಣ ಎಂದ ಜಪಾನ್! ಆರೋಪ ತಳ್ಳಿ ಹಾಕಿದ ಭಾರತ, 2027ಕ್ಕೆ ಆರಂಭ ಫಿಕ್ಸ್

ಭಾರತದ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತೀಯ ಅಧಿಕಾರಿಗಳೇ ಕಾರಣ ಎಂದು ಜಪಾನ್‌ನ ಮಾಜಿ ಸಚಿವರು ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ಭಾರತ ಸರ್ಕಾರ, ಯೋಜನೆ ಉತ್ತಮ ಪ್ರಗತಿಯಲ್ಲಿದೆ ಮತ್ತು 2027ರ ಆಗಸ್ಟ್ 15 ರಂದು ಮೊದಲ ಹಂತದ ರೈಲು ಸಂಚಾರ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ.
Read Full Story

03:12 PM (IST) Jul 18

ಕೋರ್ಟ್ ತೀರ್ಪು, ದೂರವಾದ ಮುದ್ದು ಮಗಳು; ತೀವ್ರ ಆಘಾತದಿಂದ ಪ್ರಾಣ ಕಳೆದುಕೊಂಡ ತಂದೆ

ಕೆಎಸ್‌ಆರ್‌ಟಿಸಿ ಕಂಡಕ್ಟರ್ ರಂಜೀಶ್, ಪತ್ನಿ ತೊರೆದುಹೋದ ನಂತರ ಮಗಳನ್ನು ಒಬ್ಬರೇ ಸಾಕಿದ್ದರು. ಆದರೆ, ನ್ಯಾಯಾಲಯವು ಮಗಳನ್ನು ತಾಯಿಯ ವಶಕ್ಕೆ ನೀಡಿದ ನಂತರ, ರಂಜೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಘಟನೆಯು ಮಕ್ಕಳ ಪಾಲನೆಯಲ್ಲಿ ತಂದೆಯ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

02:46 PM (IST) Jul 18

ಮದುವೆ ಖುಷಿಯಲ್ಲಿದ್ದ ಅಮೀರ್‌ ಖಾನ್‌ಗೆ 'ಲವ್ ಜಿಹಾದ್' ಬ್ರಾಂಡ್ ಅಂಬಾಸಿಡರ್ ಪಟ್ಟ; ಪ್ರಾಣ ಬೆದರಿಕೆ ಬೇರೆ!

ಅಮೀರ್​ಖಾನ್ ಗೆ ಈ ಬೆದರಿಕೆ ಬರೋದಕ್ಕೆ ಕಾರಣ ಮೂರು ಮೂರು ಮದುವೆ. ಈ ಹಿಂದೆ ರೀನಾ ದತ್ತಾ ಜೊತೆ ಹಸೆಮಣೆ ಏರಿದ್ದ ಅಮೀರ್ ಖಾನ್ ವಿಚ್ಛೇದನ ಕೊಟ್ಟು, ಕಿರಣ್ ರಾವ್​​ನ ಮದುವೆ ಆದ್ರು. ಈಗ ಅವರಿಗೂ ವಿಚ್ಛೇದನ ಕೊಟ್ಟು ಈಗ ಗೌರಿ ಸ್ಪ್ರ್ಯಾಟ್ ಜೀವನಕ್ಕೆ ಹೋಗಿದ್ದಾರೆ ಅಮೀರ್..

Read Full Story

01:43 PM (IST) Jul 18

Golden Boot - ಮೆಸ್ಸಿನಾ? ಎಂಬಾಪೆನಾ? ಗೋಲು, ಅಸಿಸ್ಟ್ ಎರಡೂ ಸಮವಾದ್ರೆ ಗೋಲ್ಡನ್ ಬೂಟ್ ಯಾರಿಗೆ? ಫಿಫಾ ರೂಲ್ಸ್ ಹೀಗಿದೆ

2026ರ ಫಿಫಾ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಕಿಲಿಯನ್ ಎಂಬಾಪೆ ತಲಾ 8 ಗೋಲು ಗಳಿಸಿದ್ದಾರೆ. ಗೋಲು, ಅಸಿಸ್ಟ್ ಮತ್ತು ನಿಮಿಷಗಳ ಆಧಾರದ ಮೇಲೆ ಫಿಫಾ ಗೋಲ್ಡನ್ ಬೂಟ್ ವಿಜೇತರನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

Read Full Story

01:40 PM (IST) Jul 18

'ಕಾಕ್ರೋಚ್'​ ಪಕ್ಷದ ನಾಯಕ ಅಭಿಜೀತ್ ದೀಪ್ಕೆ ಅನಿರ್ದಿಷ್ಟ ಉಪವಾಸ ಆರಂಭ - ಅವರು ಹೇಳಿದ್ದೇನು?

ನೀಟ್‌ ಯುಜಿ ಹಗರಣವನ್ನು ವಿರೋಧಿಸಿ 21 ದಿನಗಳಿಂದ ಉಪವಾಸ ನಿರತರಾಗಿದ್ದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಹೋರಾಟವನ್ನು 'ಕಾಕ್ರೋಚ್‌ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜೀತ್ ದೀಪ್ಕೆ ಮುಂದುವರೆಸಿದ್ದು, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
Read Full Story

01:06 PM (IST) Jul 18

ಜಾಕೆಟ್ ತೆಗೆಯಲ್ಲ, ಸ್ಟೇಡಿಯಂಗೆ ಹೋಗಲ್ಲ; ಅರ್ಜೆಂಟೀನಾ ಗೆಲುವಿಗಾಗಿ ಅಧ್ಯಕ್ಷರ ವಿಚಿತ್ರ ನಂಬಿಕೆ ವೈರಲ್

ತಂಡ ಗೆಲ್ಲುತ್ತದೆ ಎಂಬ ಮೂಢನಂಬಿಕೆಯಿಂದಾಗಿ ಅರ್ಜೆಂಟೀನಾದ ಅಧ್ಯಕ್ಷ ಹಾವಿಯರ್ ಮಿಲೈ, ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ನಿರಾಕರಿಸಿದ್ದಾರೆ. 1990ರಿಂದಲೂ ಅರ್ಜೆಂಟೀನಾದ ಅಧ್ಯಕ್ಷರು ಈ ಸಂಪ್ರದಾಯವನ್ನು ಪಾಲಿಸುತ್ತಿದ್ದು, ಲ್ಯಾಟಿನ್ ಅಮೆರಿಕದಲ್ಲಿ ಇಂತಹ ನಂಬಿಕೆಗಳು ಸಾಮಾನ್ಯವಾಗಿದೆ.
Read Full Story

12:52 PM (IST) Jul 18

'ನಾಯಕ ಕುಳ್ಳನಾಗಿದ್ದರೆ, ಅದು ಅವನ ಸಮಸ್ಯೆ, ನನ್ನ ತಪ್ಪಲ್ಲ'.. ಈ ನಟಿಯ ಸೆನ್ಸೇಷನಲ್ ಕಮೆಂಟ್ಸ್ ಯಾರ ಬಗ್ಗೆ?

ಸಿನಿಮಾ ಲೋಕ ಅಂದಮೇಲೆ ಅಲ್ಲಿ ಬಣ್ಣ, ಬೆಳಕು, ಗ್ಲಾಮರ್ ಎಲ್ಲವೂ ಅತಿಯಾಗಿಯೇ ಇರುತ್ತದೆ. ತೆರೆಯ ಮೇಲೆ ಮಿಂಚುವ ನಟಿಯರನ್ನು ನೋಡಿ ನಾವು "ಎಂತಹ ಸುಂದರ ಜೀವನ ಇವರದ್ದು" ಎಂದು ಅಂದುಕೊಳ್ಳುತ್ತೇವೆ. ಆದರೆ, ಈ ಸುಂದರ ಮುಖಗಳ ಹಿಂದೆ ಅದೆಷ್ಟು ನೋವು, ಅವಮಾನ ಮತ್ತು ಕೀಳರಿಮೆ ಅಡಗಿರುತ್ತದೆ?

Read Full Story

12:32 PM (IST) Jul 18

RBIನಿಂದ ಹೊಸ ಹೆಜ್ಜೆ; ಬರಲಿವೆ 10 & 20 ರೂ. ಮುಖಬೆಲೆಯ ವಿಶೇಷ ಪ್ಲಾಸ್ಟಿಕ್ ನೋಟುಗಳು

ನಕಲಿ ನೋಟು ಹಾವಳಿ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ. ಆರಂಭದಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುವುದು.

Read Full Story

11:49 AM (IST) Jul 18

IPC Section 294 - ಬರೀ ಬೈಗುಳ, ನಿಂದನೆ ಅಶ್ಲೀಲತೆಯಲ್ಲ, ಅದರಲ್ಲಿ ಲೈಂಗಿಕ ಪ್ರಚೋದನೆ ಇರಬೇಕು - ಸುಪ್ರೀಂ ಮಹತ್ವದ ತೀರ್ಪು! ಏನಿದು ಪ್ರಕರಣ?

ಬೈಗುಳ ಅಥವಾ ಅಸಭ್ಯ ಪದಗಳನ್ನು ಬಳಸಿದ ಮಾತ್ರಕ್ಕೆ ಅದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294ರ ಅಡಿ 'ಅಶ್ಲೀಲತೆ' ಎನಿಸುವುದಿಲ್ಲ. ಆ ಪದಗಳು ಲೈಂಗಿಕ ಪ್ರಚೋದನೆ ನೀಡುವಂತಿರಬೇಕು ಮತ್ತು ಕಾಮಪ್ರಚೋದಕ ಆಸಕ್ತಿಯನ್ನು ಕೆರಳಿಸುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Read Full Story

11:12 AM (IST) Jul 18

'ಇಷ್ಟೊಂದು ದುರಹಂಕಾರ..' ಜಂತರ್‌ ಮಂತರ್‌ನಿಂದ ಸೋನಮ್ ಸ್ಥಳಾಂತರ, ಮೋದಿ ಸರ್ಕಾರದ ವಿರುದ್ಧ ಕೇಜ್ರಿ, ಅಜಾದ್ ವಾಗ್ದಾಳಿ

Sonam Wangchuk shifted to Safdarjung Hospital ಜಂತರ್‌ ಮಂತರ್‌ನಲ್ಲಿ ಕಳೆದ ಹತ್ತೊಬ್ಬಂತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು  ಅರವಿಂದ್ ಕೇಜ್ರಿವಾಲ್, ಸಂಸದ ಚಂದ್ರಶೇಖರ್ ಅಜಾದ್ ಆಕ್ರೋಶ.

Read Full Story

10:20 AM (IST) Jul 18

ರೋಹಿತ್ ಶರ್ಮಾ ನಿವೃತ್ತಿ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ BCCI!

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಏಕದಿನ ಪಂದ್ಯವು ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎನ್ನುವ ಕುರಿತಂತೆ ಕೊನೆಗೂ ಬಿಸಿಸಿಐ ತುಟಿಬಿಚ್ಚಿದ್ದು, ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದೆ. ಅಷ್ಟಕ್ಕೂ ಬಿಸಿಸಿಐ ಹೇಳಿದ್ದೇನು?

Read Full Story

09:52 AM (IST) Jul 18

ದುಬೈನಲ್ಲಿ ಕನ್ನಡಿಗನ ಕೊಂದ ಪಾತಕಿ, ಜೈಲಿಂದ ಬಂದು ಕರ್ನಾಟಕ-ಕೇರಳ ಗಡಿಭಾಗದದಲ್ಲಿ ಡ್ರಗ್‌ ಕಿಂಗ್‌ಪಿನ್‌ ಆದ!

ಮಂಗಳೂರು ಮೂಲದವರೊಬ್ಬರ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯಾದ ಜೈಲು ಸೇರಿ, 80 ಲಕ್ಷ ರು. ಬ್ಲಡ್‌ ಮನಿ ಪಾವತಿಸುವ ಮೂಲಕ 10 ವರ್ಷಗಳ ಬಳಿಕ ಬಿಡುಗಡೆಯಾಗಿ ಭಾರತಕ್ಕೆ ಬಂದಿದ್ದ ಕೇರಳದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ಕರ್ನಾಟಕ-ಕೇರಳ ಗಡಿಯಲ್ಲಿ ಡ್ರಗ್ಸ್ ಕಿಂಗ್ ಪಿನ್ ಆದ! ಸಿಕ್ಕಿಬಿದ್ದಿದ್ದು ಹೇಗೆ?

Read Full Story

09:29 AM (IST) Jul 18

ಲಿಯೋನೆಲ್ ಮೆಸ್ಸಿ ಸ್ಪೇನ್‌ಗೆ ಆಡುವುದನ್ನು ತಪ್ಪಿಸಿತ್ತು ಆ ಫೋನ್‌ ಕರೆ! ಬಾಲ್ಯದಲ್ಲೇ ಫುಟ್ಬಾಲ್ ದಿಗ್ಗಜನ ದಿಕ್ಕು ಬದಲಿಸಿತ್ತು ಆ ಘಟನೆ

ಸ್ಪೇನ್ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲು ಬಾರ್ಸಿಲೋನಾ ಕ್ಲಬ್ ಪ್ರಯತ್ನಿಸಿದರೂ, ಲಿಯೋನಲ್ ಮೆಸ್ಸಿ ಅರ್ಜೆಂಟೀನಾ ಪರ ಆಡಲು ದೃಢ ನಿರ್ಧಾರ ಮಾಡಿದ್ದರು. ನಿರ್ಲಕ್ಷ್ಯಕ್ಕೊಳಗಾಗಿದ್ದ ಮೆಸ್ಸಿಯ ಪ್ರತಿಭೆಯನ್ನು ಒಂದು ವಿಎಚ್‌ಎಸ್ ಟೇಪ್, ಒಂದು ಫೋನ್ ಕರೆ ಮತ್ತು ತಪ್ಪಾಗಿ ಬರೆಯಲಾಗಿದ್ದ ಫ್ಯಾಕ್ಸ್ ಸಂದೇಶವು ಅರ್ಜೆಂಟೀನಾ ಫುಟ್ಬಾಲ್ ಸಂಸ್ಥೆಯ ಗಮನಕ್ಕೆ ತಂದಿತು, ಇದು ಅವರನ್ನು ಅರ್ಜೆಂಟೀನಾದ ದಂತಕಥೆಯನ್ನಾಗಿ ಮಾಡಿತು.
Read Full Story

09:18 AM (IST) Jul 18

ನೀಟ್ ಅಕ್ರಮ - ಪೊಲೀಸ್ ಭದ್ರತೆಯಲ್ಲಿ ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ದಾಖಲು

ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರನ್ನು ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರತಿಭಟನೆಗೆ ಹಲವಾರು ವಿರೋಧ ಪಕ್ಷಗಳು ಮತ್ತು ಚಲನಚಿತ್ರ ರಂಗದ ಸೆಲೆಬ್ರಿಟಿಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.
Read Full Story

07:36 AM (IST) Jul 18

US-Iran War - ಡೊನಾಲ್ಡ್ ಟ್ರಂಪ್ ಬೆದರಿಕೆ ನಡುವೆಯೂ ಅಮೆರಿಕದ MQ-9 ಡ್ರೋನ್ ಹೊಡೆದುರುಳಿಸಿದ ಇರಾನ್!

ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಸತತ ಏಳನೇ ದಿನವೂ ತಡರಾತ್ರಿ ಅಮೆರಿಕ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಈ ನಡುವೆ ಅಮೆರಿಕದ MQ-9 ಡ್ರೋನ್ ಹೊಡೆದುರುಳಿಸಿದ್ದೇವೆ ಎಂದು ಇರಾನ್ ಮಾಧ್ಯಮ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.

Read Full Story

More Trending News