ಪುಣೆ: ‘ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅಂಡಮಾನ್ ಜೈಲಲ್ಲಿದ್ದಾಗ ಬ್ರಿಟಿಷ್ ಸರ್ಕಾರಕ್ಕೆ 10 ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರು ತಮ್ಮ ಶಿಕ್ಷೆ ಕಮ್ಮಿ ಮಾಡಲು ಕೋರಿದ್ದರು. ಆದರೆ ಅವರ ಸ್ವರವು ನಮ್ರತೆಯಿಂದ ಕೂಡಿರಲಿಲ್ಲ ಮತ್ತು ಆಗಿನ ಬ್ರಿಟಿಷರಿಗೆ ನಿಷ್ಠೆ ವ್ಯಕ್ತಪಡಿಸುವ ಪದಗಳನ್ನು ಅವು ಹೊಂದಿರಲಿಲ್ಲ’ ಎಂದು ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಸಾವರ್ಕರ್ ಕುರಿತು ಕಾಂಗ್ರೆಸ್ಸಿಗ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಪ್ರಶ್ನಿಸಿ ಅವರ ವಿರುದ್ಧ ಪುಣೆ ಸಂಸದ/ಶಾಸಕ ಕೋರ್ಟಲ್ಲಿ ನಡೆದಿರುವ ಮಾನಹಾನಿ ಪ್ರಕರಣದ ವಿಚಾರಣೆ ವೇಳೆ ಸಾತ್ಯಕಿ ಈ ಹೇಳಿಕೆ ನೀಡಿದರು.
‘ಕ್ಷಮಾದಾನ ಅರ್ಜಿಯು ಕಾನೂನಾತ್ಮಕ ಕ್ರಮವಾಗಿತ್ತು. ಅದು ಅಪರಾಧವಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
10:34 AM (IST) Jun 17
ಹೆಚ್ಚುತ್ತಿರುವ ಮಾರುಕಟ್ಟೆ ಸ್ಪರ್ಧೆ ಮತ್ತು ಮಾರಾಟ ಕುಸಿತದಿಂದಾಗಿ, ಪಿಜ್ಜಾ ಹಟ್ನ ಮೂಲ ಕಂಪನಿ ಯಮ್ ಬ್ರ್ಯಾಂಡ್ಸ್ ಅದನ್ನು 2.7 ಬಿಲಿಯನ್ ಡಾಲರ್ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಮಾರಾಟವು ಎರಡು ಭಾಗಗಳಲ್ಲಿ ನಡೆಯಲಿದೆ.