LIVE NOW
Published : Aug 17, 2026, 05:17 AM ISTUpdated : Aug 17, 2026, 07:14 AM IST

India Latest News Live ಸಿಎಂ ವಿಜಯ್ ತಾಯಿ ಬಗ್ಗೆ ಕೀಳು ಹೇಳಿಕೆ: ₹70000 ಕೋಟಿ ವೆಚ್ಚದಲ್ಲಿ 6 ಸಬ್‌ಮರೀನ್ - ಶೀಘ್ರ ಒಪ್ಪಂದ?

ಸಾರಾಂಶ

 

ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಅವರ ತಂದೆ-ತಾಯಿ ಬಗ್ಗೆ ಕೀಳು ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ವಿರುದ್ಧ ದೂರು ದಾಖಲಾಗಿದೆ. ಪೂರ್ಣ ತನಿಖೆ ನಡೆಸಿ ನೈನಾ‌ರ್ ವಿರುದ್ಧ ಸೂಕ್ತ ಕ್ರಿಮಿನಲ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ವ್ಯಕ್ತಿಯೊಬ್ಬರು ಡಿಜಿಪಿಗೆ ದೂರು ನೀಡಿದ್ದಾರೆ. ವಿಜಯ್ ಪದೇ ಪದೇ ಅಸೆಂಬ್ಲಿಯಲ್ಲಿ ಉದಯನಿಧಿ ಸ್ಟಾಲಿನ್‌ಗೆ 'ನಿಮ್ಮ ತಂದೆ ಎಲ್ಲಿದ್ದಾರೆ?' ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಕ್ಷೇಪಿಸುವ ವೇಳೆ ನಾಗೇಂ ದ್ರನ್, “ನಿಮ್ಮ ತಂದೆ ಮನೆಯಲ್ಲಿ ಇಲ್ಲ ಎಂದಾದರೆ, ಆತ ಎಲ್ಲಿರುತ್ತಾನೆ ಎಂದು ತಾಯಿಯನ್ನು ಕೇಳಿ' ಎಂದಿದ್ದರು.

07:14 AM (IST) Aug 17

₹70000 ಕೋಟಿ ವೆಚ್ಚದಲ್ಲಿ 6 ಸಬ್‌ಮರೀನ್ - ಶೀಘ್ರ ಒಪ್ಪಂದ?

ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ₹70,000 ಕೋಟಿ ವೆಚ್ಚದ ಪ್ರೊಜೆಕ್ಟ್ 75(1) ಸಬ್‌ಮರೀನ್ ಒಪ್ಪಂದಕ್ಕೆ ಶೀಘ್ರದಲ್ಲೇ ಚಾಲನೆ ಸಿಗುವ ನಿರೀಕ್ಷೆಯಿದೆ. ಈ ಯೋಜನೆಯಡಿ, ಜರ್ಮನಿಯ ಥಿಸೆನ್‌ಕ್ರುಪ್ ಮರೈನ್ ಸಿಸ್ಟಮ್ ಮತ್ತು ಭಾರತದ ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಸಹಭಾಗಿತ್ವದಲ್ಲಿ ಭಾರತೀಯ ನೌಕಾಪಡೆಗೆ 6 ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತದೆ.

Read Full Story

05:49 AM (IST) Aug 17

ಬೆಂಗಳೂರು ಸೇರಿದಂತೆ ರೈಲ್ವೆ ನಿಲ್ದಾಣದ ಕುಡಿವ ನೀರಲ್ಲಿ ಡೇಂಜರಸ್‌ ಬ್ಯಾಕ್ಟೀರಿಯಾ ಪತ್ತೆ

ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲಾಗುವ ಕುಡಿಯುವ ನೀರಿನಲ್ಲಿ ಅಪಾಯಕಾರಿ ಇ. ಕೋಲೈ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ಈ ಕಲುಷಿತ ನೀರಿನ ಸೇವನೆಯು ಫುಡ್ ಪಾಯಿಸನಿಂಗ್, ಭೇದಿ ಮತ್ತು ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Read Full Story

More Trending News