Published : Aug 17, 2026, 05:17 AM ISTUpdated : Aug 17, 2026, 11:36 PM IST

India Latest News Live ಸಿಎಂ ವಿಜಯ್ ತಾಯಿ ಬಗ್ಗೆ ಕೀಳು ಹೇಳಿಕೆ: 'ಟಬು ನನ್ನ ಉತ್ತಮ ಸ್ನೇಹಿತೆ, ಆದ್ರೆ.. ನಾನು ಭ್ರಷ್ಟನಾಗಿದ್ದೇನೆ' - ನಟ ನಾಗಾರ್ಜುನ ಓಪನ್ ಟಾಕ್

ಸಾರಾಂಶ

 

ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಅವರ ತಂದೆ-ತಾಯಿ ಬಗ್ಗೆ ಕೀಳು ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ವಿರುದ್ಧ ದೂರು ದಾಖಲಾಗಿದೆ. ಪೂರ್ಣ ತನಿಖೆ ನಡೆಸಿ ನೈನಾ‌ರ್ ವಿರುದ್ಧ ಸೂಕ್ತ ಕ್ರಿಮಿನಲ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ವ್ಯಕ್ತಿಯೊಬ್ಬರು ಡಿಜಿಪಿಗೆ ದೂರು ನೀಡಿದ್ದಾರೆ. ವಿಜಯ್ ಪದೇ ಪದೇ ಅಸೆಂಬ್ಲಿಯಲ್ಲಿ ಉದಯನಿಧಿ ಸ್ಟಾಲಿನ್‌ಗೆ 'ನಿಮ್ಮ ತಂದೆ ಎಲ್ಲಿದ್ದಾರೆ?' ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಕ್ಷೇಪಿಸುವ ವೇಳೆ ನಾಗೇಂ ದ್ರನ್, “ನಿಮ್ಮ ತಂದೆ ಮನೆಯಲ್ಲಿ ಇಲ್ಲ ಎಂದಾದರೆ, ಆತ ಎಲ್ಲಿರುತ್ತಾನೆ ಎಂದು ತಾಯಿಯನ್ನು ಕೇಳಿ' ಎಂದಿದ್ದರು.

11:36 PM (IST) Aug 17

'ಟಬು ನನ್ನ ಉತ್ತಮ ಸ್ನೇಹಿತೆ, ಆದ್ರೆ.. ನಾನು ಭ್ರಷ್ಟನಾಗಿದ್ದೇನೆ' - ನಟ ನಾಗಾರ್ಜುನ ಓಪನ್ ಟಾಕ್

ನಟ ನಾಗಾರ್ಜುನ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾನು ಭ್ರಷ್ಟನಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಮಸ್ಯೆ ಇಲ್ಲ, ಆದರೆ ಹೊರಗಿನ ಜಗತ್ತಿನಲ್ಲಿ ಇದು ಹೆಚ್ಚಾಗಿದೆ.

Read Full Story

10:49 PM (IST) Aug 17

5 ವರ್ಷದ ಬಾಲಕನ ಮುದ್ದು ಕಂಠದಲ್ಲಿ ರಾಷ್ಟ್ರಗೀತೆ - ನಾಗಾಲ್ಯಾಂಡ್ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ!

ಆನಂದ್ ಮಹೀಂದ್ರಾ ಶ್ಲಾಘಿಸಿದ 5 ವರ್ಷದ ಬಾಲಕನ ರಾಷ್ಟ್ರಗೀತೆ ಗಾಯನದಿಂದ ನಾಗಾಲ್ಯಾಂಡ್ ಪ್ರವಾಸೋದ್ಯಮವು ಗಮನ ಸೆಳೆದಿದೆ. ಈ ಲೇಖನವು ಹಾರ್ನ್‌ಬಿಲ್ ಹಬ್ಬ, ಜುಕೊ ಕಣಿವೆ, ಖೊನೊಮಾ ಹಸಿರು ಗ್ರಾಮ ಸೇರಿದಂತೆ ನಾಗಾಲ್ಯಾಂಡ್‌ನ ಪ್ರಮುಖ ಪ್ರವಾಸಿ ತಾಣಗಳ ವಿವರ ಇಲ್ಲಿದೆ.

Read Full Story

10:01 PM (IST) Aug 17

‘ಸುರ್ನಪಖಾ ಅಲ್ಲ, ಶೂರ್ಪನಖಿ’ - ಹೆಸರು ತಪ್ಪಾಗಿ ಹೇಳಿದ ಪಾಪರಾಜಿಗಳನ್ನು ನಗುತ್ತಲೇ ತಿದ್ದಿದ ರಕುಲ್!

ನಟಿಯೊಂದಿಗೆ ಮಾತನಾಡುವ ವೇಳೆ ಮುಂಬೈನ ಪಾಪರಾಜಿಗಳು ಆಕೆಯ ‘ರಾಮಾಯಣ’ ಪಾತ್ರದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ರಕುಲ್ ಪ್ರೀತ್ ಸಿಂಗ್ ನಗುತ್ತಲೇ ಸರಿಯಾದ ಉಚ್ಚಾರಣೆಯನ್ನು ಹೇಳಿಕೊಟ್ಟಿದ್ದಾರೆ.

Read Full Story

09:42 PM (IST) Aug 17

ಮೋದಿಗಾಗಿ ಕಾನ್‌ಸ್ಟೆಬಲ್ ಹುದ್ದೆಗೆ ರಾಜೀನಾಮೆ; ಸರ್ಕಾರಿ ಕೆಲಸವನ್ನೇ ತ್ಯಾಗ ಮಾಡಿದ ಪೊಲೀಸ್..!

ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಅಪಪ್ರಚಾರ ಎದುರಿಸಲು ಮತ್ತು 2029ರ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಲು ಗುಜರಾತ್‌ನ ಕಾನ್‌ಸ್ಟೆಬಲ್ ರಾಮಗರ್ ಗೋಸಾಯಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಅವರ ನಡೆ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

09:41 PM (IST) Aug 17

ವ್ಯರ್ಥ ಆಹಾರದಿಂದ ಪರಿಸರ ಹಾನಿ ತಡೆಗೆ ಇರುವೆ ಬಳಕೆ - 18 ವರ್ಷದ ವಿದ್ಯಾರ್ಥಿನಿಯ ಅದ್ಭುತ ಸಂಶೋಧನೆ

ವಿಶ್ವಾದ್ಯಂತ ಆಹಾರ ತ್ಯಾಜ್ಯವು ಗಂಭೀರ ಸಮಸ್ಯೆಯಾಗಿದ್ದು, ಪರಿಸರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು, ವಿದ್ಯಾರ್ಥಿನಿ ಅನನ್ಯಾ ಗುಲೂರ್ ನಾಗೇಂದ್ರ ಅವರು ಇರುವೆಗಳನ್ನು ಬಳಸಿ ಆಹಾರ ತ್ಯಾಜ್ಯವನ್ನು ಸಂಸ್ಕರಿಸುವ ವಿನೂತನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಂಶೋಧನೆಯು ತ್ಯಾಜ್ಯ ನಿರ್ವಹಣೆಯಲ್ಲಿ ಇರುವೆಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
Read Full Story

09:25 PM (IST) Aug 17

ಕರ್ನಾಟಕ, ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಅಭಾವ - ದೇಶದಲ್ಲಿ ಭತ್ತದ ಬಿತ್ತನೆ 14.37 ಲಕ್ಷ ಹೆಕ್ಟೇರ್‌ ಕುಸಿತ!

ಕರ್ನಾಟಕ, ಜಾರ್ಖಂಡ್, ಮತ್ತು ಮಹಾರಾಷ್ಟ್ರದಲ್ಲಿನ ಮಳೆ ಕೊರತೆಯಿಂದಾಗಿ, ದೇಶದಲ್ಲಿ ಖಾರಿಫ್ ಭತ್ತದ ಬಿತ್ತನೆ ವಿಸ್ತೀರ್ಣ ಶೇ. 3.65 ರಷ್ಟು ಕುಸಿದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕುಸಿತ ದಾಖಲಾಗಿದೆ.

Read Full Story

08:50 PM (IST) Aug 17

ಭಾರತದ ಅತ್ಯಂತ ಎತ್ತರದ 7 ಕ್ರಿಕೆಟಿಗರು ಇವರೇ ನೋಡಿ.. ಲಿಸ್ಟ್‌ನಲ್ಲಿ ಕನ್ನಡಿಗನೂ ಇದ್ದಾನೆ..!

ಕ್ರಿಕೆಟ್‌ನಲ್ಲಿ ಆಟಗಾರರ ಎತ್ತರವು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವಿಶೇಷ ಲಾಭವನ್ನು ನೀಡುತ್ತದೆ. ಭಾರತದ ಅತ್ಯಂತ ಎತ್ತರದ ಆಟಗಾರರಾದ ಅಬೆ ಕುರುವಿಲ್ಲಾ (6.6) ರಿಂದ ಹಿಡಿದು ಇಶಾಂತ್ ಶರ್ಮಾ ಮತ್ತು ಶಿವಂ ದುಬೆವರೆಗಿನ ಟಾಪ್ 7 ಆಟಗಾರರ ಮಾಹಿತಿ ಇಲ್ಲಿದೆ.

Read Full Story

08:14 PM (IST) Aug 17

ಗೆಜ್ಜೆ ಸದ್ದು, ಆಕ್ರಂದನ..ಆಶ್ರಮ ವಸತಿ ಶಾಲೆಯಲ್ಲಿ ಭೂತದ ಭೀತಿ - ಸ್ಕೂಲ್‌ ತೊರೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು!

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯೊಂದರಲ್ಲಿ ದೆವ್ವದ ವದಂತಿಯಿಂದಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿದ್ದಾರೆ. ರಾತ್ರಿ ವೇಳೆ ಗೆಜ್ಜೆ ಸದ್ದು, ಅಳು, ನಗುವಿನಂತಹ ವಿಚಿತ್ರ ಶಬ್ದಗಳು ಕೇಳಿಬಂದಿದೆ.

Read Full Story

07:48 PM (IST) Aug 17

ಸರ್ಕಸ್​ ಕಂಪೆನಿ ಸೇರಬೇಕಿದ್ದವ ಡಾಕ್ಟರ್​ ಆದ ರೋಚಕ ಸ್ಟೋರಿ - ವೈದ್ಯಕೀಯ ಮಂಡಳಿ ರಿಜೆಕ್ಟ್​ ಮಾಡಿದ್ರೂ ದಾಖಲೆ ಬರೆದ ಸಾಹಸಿ

3 ಅಡಿ 4 ಇಂಚು ಎತ್ತರದ ಡಾ.ಗಣೇಶ್ ಬರಯ್ಯ, ದೈಹಿಕ ನ್ಯೂನತೆಯ ಕಾರಣಕ್ಕೆ ವೈದ್ಯಕೀಯ ಪ್ರವೇಶ ನಿರಾಕರಿಸಲ್ಪಟ್ಟರೂ ಛಲ ಬಿಡಲಿಲ್ಲ. ಸುಪ್ರೀಂಕೋರ್ಟ್​ನಲ್ಲಿ ಕಾನೂನು ಹೋರಾಟ ಮಾಡಿ ಗೆದ್ದು, ಇಂದು ಜಗತ್ತಿನ ಅತಿ ಕುಬ್ಜ ಡಾಕ್ಟರ್​ ಆಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
Read Full Story

07:31 PM (IST) Aug 17

'ಸತ್ತವರ ಬಗ್ಗೆ ನಾನು ಯೋಚಿಸಲ್ಲ' - ಶ್ರೀದೇವಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ದೇಕೆ?

ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್'ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಅಧ್ಯಾಯ ಬರೆದಿದ್ದಾರೆ. ಈ ವೇಳೆ, ದಂತಕಥೆಯಂತಿದ್ದ ನಟಿಯ ನಟನೆ, ಅದರಲ್ಲೂ 'ಮಿಸ್ಟರ್ ಇಂಡಿಯಾ' ಚಿತ್ರದ ಅಭಿನಯವನ್ನು ನೆನಪಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read Full Story

07:00 PM (IST) Aug 17

ರಿಚಾರ್ಜ್ ದರ ಏರಿಕೆಯಾದರೂ ಇಲ್ಲ ತಲೆನೋವು - ಜಿಯೋ ಪ್ರೈಮ್‌ ಇದ್ರೆ ಸಾಕು ಒಂದು ವರ್ಷ ಟೆನ್ಶನ್‌ ಫ್ರೀ!

ರಿಲಯನ್ಸ್ ಜಿಯೋ ತನ್ನ 'ಜಿಯೋ ಪ್ರೈಮ್' ಸದಸ್ಯತ್ವವನ್ನು ಮರುಆರಂಭಿಸಿದೆ. ಕೇವಲ ₹300 ಪಾವತಿಸಿ ಒಂದು ವರ್ಷದವರೆಗೆ ಭವಿಷ್ಯದ ದರ ಏರಿಕೆಯಿಂದ ರಕ್ಷಣೆ ಪಡೆಯಬಹುದು. ಈ ಯೋಜನೆಯು ಹಳೆಯ ದರದಲ್ಲಿ ರಿಚಾರ್ಜ್, ಕ್ಯಾಶ್‌ಬ್ಯಾಕ್, ಆದ್ಯತೆಯ ಗ್ರಾಹಕ ಸೇವೆ ಮುಂತಾದ ಲಾಭಗಳನ್ನು ನೀಡುತ್ತದೆ.
Read Full Story

06:49 PM (IST) Aug 17

ಪ್ರಿಯಕರನ ಜೊತೆ ಸೇರಿ ಪತಿಗೆ ಕರೆಂಟ್ ಶಾಕ್ ಕೊಟ್ಟು ಕೊಂದ ಪತ್ನಿ.. ದರೋಡೆ ನಾಟಕವಾಡಿದ ಕಿರಾತಕಿ ಲಾಕ್ ಆಗಿದ್ದು ಹೇಗೆ?

ದೆಹಲಿಯಲ್ಲಿ ಅಕ್ರಮ ಸಂಬಂಧಕ್ಕಾಗಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಗೆ ಕರೆಂಟ್ ಶಾಕ್ ನೀಡಿ ಕ್ರೂರವಾಗಿ ಹತ್ಯೆ ಮಾಡಿ, ದರೋಡೆಯ ನಾಟಕವಾಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ. ಕೊನೆಗೆ ಈಕೆ ಲಾಕ್ ಆಗಿದ್ದು ಹೇಗೆ ಗೊತ್ತಾ?

Read Full Story

06:42 PM (IST) Aug 17

ಏರ್‌ಟೆಲ್‌ನಿಂದ ಭರ್ಜರಿ ಆಫರ್‌ - ಐಫೋನ್ ಖರೀದಿಯ ಮೇಲೆ ಸಿಗಲಿದೆ ₹35,000 ವರೆಗೆ ಭಾರಿ ಡಿಸ್ಕೌಂಟ್‌

ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಕ್ರೋಮಾ ಸಹಯೋಗದೊಂದಿಗೆ ಹೊಸ ಐಫೋನ್ ಖರೀದಿಯ ಮೇಲೆ ₹35,000 ವರೆಗೆ ಉಳಿತಾಯ ಮಾಡುವ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ನೇರ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೋನಸ್ ಸೇರಿದ್ದು, ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಇದನ್ನು ಕ್ಲೇಮ್ ಮಾಡಬಹುದು.
Read Full Story

06:24 PM (IST) Aug 17

ಚಿದಂಬರ ರಹಸ್ಯ ಅಂದ್ರೇನು? ಆ ಗರ್ಭಗುಡಿಯ ಪರದೆ ಹಿಂದಿರುವ ಅಸಲಿ ಸತ್ಯ ಇಲ್ಲಿದೆ ನೋಡಿ!

ಸಾಮಾನ್ಯವಾಗಿ ನಿಗೂಢ ವಿಷಯಗಳಿಗೆ ಬಳಸುವ 'ಚಿದಂಬರ ರಹಸ್ಯ' ಎಂಬ ನುಡಿಗಟ್ಟು ತಮಿಳುನಾಡಿನ ಚಿದಂಬರಂ ದೇವಸ್ಥಾನದಿಂದ ಬಂದಿದೆ. ಇಲ್ಲಿನ ಗರ್ಭಗುಡಿಯಲ್ಲಿ ಯಾವುದೇ ಮೂರ್ತಿಯಿಲ್ಲದೆ, ಶೂನ್ಯವನ್ನೇ ದೇವರ ರೂಪವೆಂದು ಪೂಜಿಸಲಾಗುತ್ತದೆ. ದೇವರು ನಿರಾಕಾರ ಮತ್ತು ಸರ್ವವ್ಯಾಪಿ ಎಂಬ ತಾತ್ವಿಕ ಸತ್ಯವೇ ಈ ರಹಸ್ಯದ ಹಿಂದಿನ ಅಸಲಿ ಅರ್ಥವಾಗಿದೆ.
Read Full Story

05:46 PM (IST) Aug 17

ಏಷ್ಯನ್ ಗೇಮ್ಸ್‌ಗೆ ಆಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್‌ಗೆ ರೆಸ್ಟ್, ಮೊಹಮ್ಮದ್ ನಬಿ ಮಗನಿಗೆ ಚಾನ್ಸ್!

ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ರಶೀದ್ ಖಾನ್‌ರಂತಹ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ದರ್ವೀಶ್ ರಸೂಲಿ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲಾಗಿದ್ದು, ಮಾಜಿ ನಾಯಕ ಮೊಹಮ್ಮದ್ ನಬಿ ಅವರ ಪುತ್ರ ಹಸನ್ ಈಸಾಖಿಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
Read Full Story

05:21 PM (IST) Aug 17

ಸಚಿನ್ ತೆಂಡೂಲ್ಕರ್-ವಿನೋದ್ ಕಾಂಬ್ಳಿ ದೂರಾಗಿದ್ದೇಕೆ? ಆ ಕಹಿ ಸತ್ಯ ಕೊನೆಗೂ ವೆಬ್ ಸರಣಿಯಲ್ಲಿ ರಿವೀಲ್!

ಕ್ರಿಕೆಟಿಗ ವಿನೋದ್ ಕಾಂಬ್ಳಿ ಜೀವನವನ್ನು ಆಧರಿಸಿದ 'ಕಾಂಬ್ಳಿ' ವೆಬ್ ಸರಣಿ 'ಝೀ-5'ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅಭಿಜಿತ್ ದೇಶಪಾಂಡೆ ನಿರ್ದೇಶನದ ಈ ಸರಣಿಯು, ಕಾಂಬ್ಳಿಯ ಕ್ರಿಕೆಟ್ ಜರ್ನಿ, ಆರಂಭಿಕ ಯಶಸ್ಸು ಹಾಗೂ ಸಚಿನ್ ತೆಂಡೂಲ್ಕರ್ ಜೊತೆಗಿನ ಸ್ನೇಹದ ಏರಿಳಿತಗಳನ್ನು ಕಟ್ಟಿಕೊಡುವ ನಿರೀಕ್ಷೆಯಿದೆ.
Read Full Story

05:16 PM (IST) Aug 17

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರಿ ವಿಧ್ವಂಸಕ ಕೃತ್ಯ ಸಂಚು ವಿಫಲ - 200ಕ್ಕೂ ಹೆಚ್ಚು ಉಗ್ರರ ಬಂಧನ!

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದಲ್ಲಿ ಬೃಹತ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ 'ಶಹಜಾದ್ ಭಟ್ಟಿ' ಭಯೋತ್ಪಾದಕ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ.

Read Full Story

05:08 PM (IST) Aug 17

‘KGF’, ‘ಧುರಂಧರ್‌’ ಅಂತಹ ಬ್ಲಾಕ್‌ಬಸ್ಟರ್‌ ಕೊಟ್ಟರೂ ಈ ಇಬ್ಬರು ನಟಿಯರ ಕರಿಯರ್‌ ಯಾಕೆ ಬದಲಾಗಲಿಲ್ಲ?

‘ಕೆಜಿಎಫ್‌’, ‘ಧುರಂಧರ್‌’ ಅಂತಹ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿದ ಶ್ರೀನಿಧಿ ಶೆಟ್ಟಿ ಮತ್ತು ಸಾರಾ ಅರ್ಜುನ್‌ ಅವರ ಕರಿಯರ್‌ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದಿರುವುದಕ್ಕೆ ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ.

Read Full Story

04:30 PM (IST) Aug 17

ಕಣ್ಮುಚ್ಚಿ ಬಿಡುವಷ್ಟರಲ್ಲಿ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಶುಭ್‌ಮನ್ ಗಿಲ್! ವಿಡಿಯೋ ವೈರಲ್

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ, ನಾಯಕ ಶುಭಮನ್ ಗಿಲ್ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದು ಕಮಿಂದು ಮೆಂಡಿಸ್ ಅವರನ್ನು ಔಟ್ ಮಾಡಿದರು. ಆರಂಭಿಕ ಕುಸಿತದ ನಂತರ ದಿನುಷ ಮತ್ತು ಡಿಕ್ವೆಲ್ಲಾ ಅವರ ಜೊತೆಯಾಟದಿಂದ ಚೇತರಿಸಿಕೊಂಡ ಲಂಕಾ, ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ 210 ರನ್‌ಗಳ ಹಿನ್ನಡೆಯಲ್ಲಿದೆ.
Read Full Story

04:19 PM (IST) Aug 17

ಅಡಿಕೆ ಕೃಷಿಕರಿಗೆ ಗುಡ್‌ನ್ಯೂಸ್‌ ನೀಡಿದ DRI, 2500 ಕೋಟಿ ರೂಪಾಯಿ ಅಕ್ರಮ ಬಯಲು!

ಆಗ್ನೇಯ ಏಷ್ಯಾದಿಂದ ಅಡಿಕೆ ಆಮದು ಮಾಡಿಕೊಂಡು, 'ಸಾಫ್ಟಾ' ಒಪ್ಪಂದವನ್ನು ದುರ್ಬಳಕೆ ಮಾಡಿ ಭಾರತ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂ. ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದೆ.

Read Full Story

02:33 PM (IST) Aug 17

ವಿರಾಟ್ ಕೊಹ್ಲಿಯ ಈ 3 ಕ್ಯಾಪ್ಟನ್ಸಿ ರೆಕಾರ್ಡ್ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ..! ನೀವೇನಂತೀರಾ?

ಭಾರತದ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದ ಅವಧಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ನಾಯಕನಾಗಿ ಅತಿ ಹೆಚ್ಚು ದ್ವಿಶತಕ, ಅತಿ ಹೆಚ್ಚು ಟೆಸ್ಟ್ ಗೆಲುವು ಹಾಗೂ ಅತಿ ಹೆಚ್ಚು ರನ್ ಗಳಿಸಿದಂತಹ ಅವರ ಮೂರು ಪ್ರಮುಖ ದಾಖಲೆಗಳನ್ನು ಮುರಿಯುವುದು ಸವಾಲಿನ ಸಂಗತಿಯಾಗಿದೆ.
Read Full Story

01:07 PM (IST) Aug 17

Interesting Facts - ವಿಮಾನಗಳು ಹೆಚ್ಚು ಬಿಳಿಯ ಬಣ್ಣದಲ್ಲಿ ಮಾತ್ರ ಇರುತ್ತೆ ಯಾಕೆ? ಶೇ.99 ಮಂದಿಗೆ ಗೊತ್ತಿಲ್ಲ!

ಹೆಚ್ಚಿನ ವಿಮಾನಗಳು ಬಿಳಿ ಬಣ್ಣದಲ್ಲಿರಲು ವೈಜ್ಞಾನಿಕ, ಭದ್ರತೆ ಮತ್ತು ಆರ್ಥಿಕ ಕಾರಣಗಳಿವೆ. ಬಿಳಿ ಬಣ್ಣವು ಸೂರ್ಯನ ಶಾಖವನ್ನು ಪ್ರತಿಫಲಿಸಿ ಇಂಧನ ಉಳಿಸುತ್ತದೆ, ವಿಮಾನದ ಮೇಲಿನ ದೋಷಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.
Read Full Story

01:02 PM (IST) Aug 17

The Hundred 2026 ಕೊನೆಗೂ ವಿಕೆಟ್‌ ಕೀಪರ್ ಬ್ಯಾಟರ್‌ನಿಂದಲೇ ಕಪ್ ಗೆದ್ದ ಸಂಜೀವ್ ಗೋಯೆಂಕಾ..! ಐಪಿಎಲ್‌ನಲ್ಲೂ ಈ ಆಟಗಾರನಿಗೆ ಗಾಳ?

ಸಂಜೀವ್ ಗೋಯೆಂಕಾ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್‌ ತಂಡವು ದಿ ಹಂಡ್ರೆಡ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್‌ ವಿರುದ್ಧ ರೋಚಕ ಜಯ ಸಾಧಿಸಿದ ಜೋಸ್ ಬಟ್ಲರ್ ಪಡೆ, ಗೋಯೆಂಕಾ ಅವರ ಟ್ರೋಫಿ ಬರವನ್ನು ನೀಗಿಸಿದೆ. ಟಿಮ್ ಸೈಫರ್ಟ್‌ ಫೈನಲ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿನ ರೂವಾರಿಯಾದರು.

Read Full Story

12:25 PM (IST) Aug 17

Toxic Countdown Day 10 - ಯಶ್ 'ಟಾಕ್ಸಿಕ್' ಬಿಡುಗಡೆಗೆ ಕೌಂಟ್‌ಡೌನ್.. 10ನೇ ದಿನದ ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!

ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 10 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದ ಬಗೆಗಿನ ಸ್ಪೆಷಲ್ ಮಾಹಿತಿ ಇಲ್ಲಿದೆ ನೋಡಿ..

Read Full Story

12:10 PM (IST) Aug 17

CJPಯಂತೆ ಶುರುವಾದ ದಿಮಾಗಿ ನಕ್ಸಲ್ ಜನತಾ ಪಾರ್ಟಿ; ಇನ್‌ಸ್ಟಾಗ್ರಾಂನಿಂದ ಕಣ್ಮರೆಯಾದ ಖಾತೆ

ಪ್ರಧಾನಿ ನರೇಂದ್ರ ಮೋದಿಯವರ "ದಿಮಾಗಿ ನಕ್ಸಲ್" ಹೇಳಿಕೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ "ದಿಮಾಗಿ ನಕ್ಸಲ್ ಜನತಾ ಪಾರ್ಟಿ" ಎಂಬ ಖಾತೆಯೊಂದು ಸಂಚಲನ ಸೃಷ್ಟಿಸಿದೆ. ಇನ್‌ಸ್ಟಾಗ್ರಾಂನಿಂದ ಕಣ್ಮರೆಯಾದ ಈ ಖಾತೆಯು ಎಕ್ಸ್‌ನಲ್ಲಿ ಮತ್ತೆ ಹುಟ್ಟಿಕೊಂಡಿದೆ.

Read Full Story

12:07 PM (IST) Aug 17

ಅಚ್ಚರಿಯ ಕಾರಣ ಕೊಟ್ಟು ಬಿಜೆಪಿಗೆ ಗುಡ್‌ಬೈ ಹೇಳಿದ ಖ್ಯಾತ ನಟ ದೇವನ್; ಕೇರಳ ರಾಜಕೀಯದಲ್ಲಿ ಸಂಚಲನ

ಮಲಯಾಳಂ ನಟ ಮತ್ತು ರಾಜಕೀಯ ನಾಯಕ ದೇವನ್ ಅವರು ಕೇರಳ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಕಾರಣ ಮತ್ತು ಹಿರಿಯ ನಾಯಕರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಬೇಸರದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 2021ರಲ್ಲಿ ತಮ್ಮ ಕೇರಳ ಪೀಪಲ್ಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.

Read Full Story

11:25 AM (IST) Aug 17

ಗವಾಸ್ಕರ್, ಸೆಹ್ವಾಗ್ ಕೈಬಿಟ್ಟು ಭಾರತದ ಸಾರ್ವಕಾಲಿಕ ಟಾಪ್-3 ಟೆಸ್ಟ್‌ ಬ್ಯಾಟರ್ ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್! ಲಿಸ್ಟ್‌ನಲ್ಲಿವೆ ಅಚ್ಚರಿ ಹೆಸರು

ಟೀಂ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್, ಭಾರತದ ಸಾರ್ವಕಾಲಿಕ ಶ್ರೇಷ್ಠ ಮೂವರು ಟೆಸ್ಟ್ ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿಯೆಂದರೆ, ಅವರ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್‌ಗೆ ಸ್ಥಾನ ಸಿಕ್ಕಿಲ್ಲ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅಶ್ವಿನ್ ಆಯ್ಕೆಯ ಶ್ರೇಷ್ಠ ಆಟಗಾರರಾಗಿದ್ದಾರೆ.
Read Full Story

10:52 AM (IST) Aug 17

Shehzad Poonawalla - ಕಮಲ ಪಾಳಯಕ್ಕೆ ಶಹಜಾದ್ ಪೂನಾವಾಲಾ ರಾಜೀನಾಮೆ; ಭಾವುಕ ವಿದಾಯ

ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಅವರು ತಮ್ಮ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ತಮಗೆ ಅವಕಾಶ ನೀಡಿದ ಪಕ್ಷದ ಹಿರಿಯ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
Read Full Story

10:39 AM (IST) Aug 17

Tirumala - ಎಲ್‌ ನಿನೋ ಎಫೆಕ್ಟ್; ತಿರುಮಲದಲ್ಲಿ ಐದು ದಿನ ವರುಣಯಾಗ, ವಿಶೇಷ ಪೂಜೆ!

ಎಲ್‌ ನಿನೋ ಪ್ರಭಾವದಿಂದ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಪ್ರಮಾಣ ದಾಖಲಾಗಿದೆ. ಕರ್ನಾಟಕ ಮಾತ್ರವಲ್ಲದೇ, ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಪ್ರಯಾಣ ಕಡಿಮೆಯಾಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಟಿಟಿಡಿ ಪ್ರಮುಖ ನಿರ್ಣಯ ತೆಗೆದುಕೊಂಡಿದೆ.

Read Full Story

09:50 AM (IST) Aug 17

Continental GT 650 - ಹೊಸ ಫೀಚರ್‌ಗಳೊಂದಿಗೆ ರಾಯಲ್ ಎನ್‌ಫೀಲ್ಡ್ GT 650 ಲಾಂಚ್! ಬೆಲೆ ಎಷ್ಟು? ಏನಿದರ ಸ್ಪೆಷಾಲಿಟಿ?

ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರಿಯ ಕೆಫೆ ರೇಸರ್ ಬೈಕ್ ಕಾಂಟಿನೆಂಟಲ್ GT 650ಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾಡೆಲ್‌ನಲ್ಲಿ ಎಲ್‌ಇಡಿ ಇಂಡಿಕೇಟರ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಂತಹ ಫೀಚರ್‌ಗಳನ್ನು ಸೇರಿಸಲಾಗಿದ್ದು, ರಾಕರ್ ರೆಡ್ ಬಣ್ಣದ ವೇರಿಯೆಂಟ್‌ಗೆ ಡಾರ್ಕ್ ಲುಕ್ ನೀಡಲಾಗಿದೆ. ಎಂಜಿನ್ ಮತ್ತು ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಇದರ ಆರಂಭಿಕ ಬೆಲೆ ₹3,58,427 ಆಗಿದೆ.
Read Full Story

07:47 AM (IST) Aug 17

ವಿಮಲ್ ಪಾನ್ ಮಸಾಲಾ - ಬಾಯಲ್ಇ ಕೇಸರಿ ಹೇಳಿದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಸಂಕಷ್ಟ!

ವಿಮಲ್‌ ಎಲಾಯ್ಚಿ ಪಾನ್‌ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟರಾದ ಶಾರುಖ್‌ ಖಾನ್‌, ಅಜಯ್‌ ದೇವಗನ್‌ ಮತ್ತು ಟೈಗರ್‌ ಶ್ರಾಫ್‌ ಅವರಿಗೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ. ಈ ಜಾಹೀರಾತು ನಿಷೇಧಿತ ತಂಬಾಕು ಉತ್ಪನ್ನಗಳಿಗೆ ಪರೋಕ್ಷವಾಗಿ ಪ್ರಚಾರ ನೀಡುತ್ತಿದೆ ಎಂದು ಆರೋಪಿಸಲಾಗಿದೆ.
Read Full Story

07:14 AM (IST) Aug 17

₹70000 ಕೋಟಿ ವೆಚ್ಚದಲ್ಲಿ 6 ಸಬ್‌ಮರೀನ್ - ಶೀಘ್ರ ಒಪ್ಪಂದ?

ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ₹70,000 ಕೋಟಿ ವೆಚ್ಚದ ಪ್ರೊಜೆಕ್ಟ್ 75(1) ಸಬ್‌ಮರೀನ್ ಒಪ್ಪಂದಕ್ಕೆ ಶೀಘ್ರದಲ್ಲೇ ಚಾಲನೆ ಸಿಗುವ ನಿರೀಕ್ಷೆಯಿದೆ. ಈ ಯೋಜನೆಯಡಿ, ಜರ್ಮನಿಯ ಥಿಸೆನ್‌ಕ್ರುಪ್ ಮರೈನ್ ಸಿಸ್ಟಮ್ ಮತ್ತು ಭಾರತದ ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಸಹಭಾಗಿತ್ವದಲ್ಲಿ ಭಾರತೀಯ ನೌಕಾಪಡೆಗೆ 6 ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತದೆ.

Read Full Story

05:49 AM (IST) Aug 17

ಬೆಂಗಳೂರು ಸೇರಿದಂತೆ ರೈಲ್ವೆ ನಿಲ್ದಾಣದ ಕುಡಿವ ನೀರಲ್ಲಿ ಡೇಂಜರಸ್‌ ಬ್ಯಾಕ್ಟೀರಿಯಾ ಪತ್ತೆ

ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲಾಗುವ ಕುಡಿಯುವ ನೀರಿನಲ್ಲಿ ಅಪಾಯಕಾರಿ ಇ. ಕೋಲೈ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ಈ ಕಲುಷಿತ ನೀರಿನ ಸೇವನೆಯು ಫುಡ್ ಪಾಯಿಸನಿಂಗ್, ಭೇದಿ ಮತ್ತು ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Read Full Story

More Trending News