ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶಾದ್ಯಂತ ಸೃಷ್ಟಿಯಾಗಿರುವ ಇಂಧನ ಅಭಾವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋ ದ್ಯಮ ನಿಗಮಕ್ಕೂ(ಐಆರ್ಸಿಟಿಸಿ) ತಟ್ಟಿದೆ. ಚಲಿಸುವ ರೈಲಿನಲ್ಲಿ ಎಲ್ಪಿಜಿ ಬಳಸಿ ಮಾಡುತ್ತಿದ್ದ ಅಡುಗೆಗೆ ಇತಿಶ್ರೀ ಹಾಡಿ ಇನ್ಮುಂದೆ ಇಂಡ ಕ್ಷನ್ ಸೌವ್ ಬಳಸಲು ನಿರ್ಧರಿಸಿದೆ. ಪ್ರತಿನಿತ್ಯ 1400 ರೈಲಲ್ಲಿ 17 ಲಕ್ಷ ಪ್ಲೇಟ್ ಊಟವನ್ನು ಪೂರೈಸಲಾಗುತ್ತಿದೆ. ಆದರೆ ದಿನಕ್ಕೆ 1000 ಸಿಲಿಂಡರ್ ನೆಚ್ಚಿಕೊಂಡಿದ್ದ ಐಆರ್ಸಿಟಿಸಿಗೆ ಯುದ್ಧದಿಂದ ಹೊಡೆತ ಬಿದ್ದಿದೆ. ಹೀಗಾಗಿ ಪರ್ಯಾಯ ಆಯ್ಕೆಯ ಮೊರೆ ಹೋಗಿದೆ. ಈಗಾಗಲೇ ಶೇ.60ರಷ್ಟು ರೈಲುಗಳಲ್ಲಿ ಇಂಡಕ್ಷನ್ ವ್ಯವಸ್ಥೆ ಜಾರಿಯಾಗಿದೆ.

10:40 PM (IST) Jun 11
ಚಿತ್ರರಂಗದಲ್ಲಿ ಪ್ರತಿ ವರ್ಷ ನೂರಾರು ಬಾಲನಟರು ಪರಿಚಯವಾಗುತ್ತಾರೆ. ಅವರಲ್ಲಿ ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಅಂತಹವರ ಸಾಲಿನಲ್ಲಿ ಕೇಳಿಬರುವ ಒಂದು ಪ್ರಮುಖ ಹೆಸರು ಶ್ರಿಯಾ ಶರ್ಮಾ. ಹದಿನೈದು ವರ್ಷಗಳ ಹಿಂದಿನ ಬಾಲನಟಿ ಈಗೆಲ್ಲಿದ್ದಾರೆ? ಈ ಸ್ಟೋರಿ ನೋಡಿ…
10:08 PM (IST) Jun 11
ಈ ವಯಸ್ಸಿನಲ್ಲೂ ತ್ರಿಷಾ ಅಷ್ಟು ಎನರ್ಜಿಟಿಕ್ ಆಗಿ, ಯಂಗ್ ಆಗಿ ಮತ್ತು ಫಿಟ್ ಆಗಿ ಇರೋದು ಹೇಗೆ? ಈ ಪ್ರಶ್ನೆಗೆ ಸ್ವತಃ ತ್ರಿಷಾ ಅವರೇ ಇತ್ತೀಚೆಗೆ ಉತ್ತರ ನೀಡಿದ್ದಾರೆ. ಅದು ಅಂತಿಂಥ ರಹಸ್ಯವಲ್ಲ, ಪ್ರತಿಯೊಂದು ಹುಡುಗಿ, ನಟಿ ಕೂಡ ಈ ರಹಸ್ಯ
09:20 PM (IST) Jun 11
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮುದ್ರಾ ಗ್ರಾಮದ ಯುವಕರಿಗೆ ಯಾಕೆ ಹೆಣ್ಣು ಸಿಗುತ್ತಿಲ್ಲ? ಇಡೀ ಊರನ್ನೇ ಬೆಚ್ಚಿಬೀಳಿಸಿರುವ ಈ ದುಸ್ಥಿತಿಯ ಹಿಂದೆ ಯಾವುದೇ ಶಾಪ ಅಥವಾ ಸಂಪ್ರದಾಯವಿಲ್ಲ. ಬದಲಿಗೆ, ಇದು ಕೇವಲ ಕುಡಿಯುವ ನೀರಿನ ಸಮಸ್ಯೆ ಎಂದರೆ ನೀವು ನಂಬುತ್ತೀರಾ?
08:54 PM (IST) Jun 11
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳಿಂದ ಯಾವಾಗ ರಿಟೈರ್ ಆಗ್ತಾರೆ? ಈ ಪ್ರಶ್ನೆಗೆ ಅಕ್ಕಿ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ತಮ್ಮ ರಿಟೈರ್ಮೆಂಟ್ ಬಗ್ಗೆ ಅಕ್ಷಯ್ ಹೇಳಿದ್ದೇನು? ಇಲ್ಲಿದೆ ಪೂರ್ತಿ ಡೀಟೇಲ್ಸ್.
08:29 PM (IST) Jun 11
ರಾಮ್ ಚರಣ್ ಜೊತೆಗಿನ 'ಪೆದ್ದಿ' ಚಿತ್ರಕ್ಕಾಗಿ ಜಾನ್ವಿ ಕಪೂರ್ ತಮ್ಮ ವೃತ್ತಿಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 'ದೇವರ' ಚಿತ್ರದ ಯಶಸ್ಸಿನ ನಂತರ ಅವರ ಬೇಡಿಕೆ ಹೆಚ್ಚಾಗಿದ್ದು, ಸಂಭಾವನೆಯಲ್ಲೂ ಭಾರಿ ಏರಿಕೆಯಾಗಿದೆ.
08:11 PM (IST) Jun 11
Thalapathy Vijay Wife: ನಟನೆಯಿಂದ ರಾಜಕೀಯಕ್ಕೆ ಬಂದಿರುವ ವಿಜಯ್, ಪತ್ನಿ ಸಂಗೀತಾ ಕುರಿತ ಹೊಸ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಹಲವು ತಿಂಗಳುಗಳಿಂದ ಹಬ್ಬಿದ್ದ ಬೇರ್ಪಡುವಿಕೆಯ ಊಹಾಪೋಹಗಳ ನಂತರ ದಂಪತಿ ಮತ್ತೆ ಒಂದಾಗಿದ್ದಾರೆ?
08:07 PM (IST) Jun 11
"ವರ್ಷಗಳು ಕಳೆದಂತೆ ರವೀನಾ ಅವರಲ್ಲಿ ಏನು ಬದಲಾಗಿದೆ?" ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್, "ರವೀನಾ ಅಂದು ಹೀರೋಯಿನ್ ಆಗಿದ್ದರು, ಆದರೆ ಇಂದು ಅವರು ಒಬ್ಬ ನಾಯಕಿಯ ತಾಯಿಯಾಗಿದ್ದಾರೆ!" ಎಂದು ತಮಾಷೆ ಮಾಡಿದರು.
08:01 PM (IST) Jun 11
ನನ್ನ ಹೆಂಡತಿ ನನ್ನ ರಕ್ಷಣೆಯಲ್ಲಿ ಇರಬೇಕು ಅನ್ನೋದು ರಘುವರನ್ ಮನಸ್ಥಿತಿಯಾಗಿತ್ತು. ಮದುವೆಯಾದ 7 ವರ್ಷಗಳ ಕಾಲ ನಾನು ಯಾಕೆ ಸಿನಿಮಾದಿಂದ ದೂರ ಉಳಿದಿದ್ದೆ ಅನ್ನೋದಕ್ಕೆ ಇದೇ ಕಾರಣ ಅಂತ ನಟಿ ರೋಹಿಣಿ ಇದೀಗ ಸತ್ಯ ಬಿಚ್ಚಿಟ್ಟಿದ್ದಾರೆ.
07:41 PM (IST) Jun 11
ಸ್ಟ್ಯಾಂಡ್ಅಪ್ ಕಾಮಿಡಿ ಶೋದಲ್ಲಿ ಮಹಿಳೆಯರ ಬಗ್ಗೆ ಮಾಡಿದ ವಿವಾದಾತ್ಮಕ ಕಾಮೆಂಟ್ಗೆ ನಟಿ ಪೂನಂ ಪಾಂಡೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 370 ರೂ. ಬಿರಿಯಾನಿ ವಿವಾದ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
07:26 PM (IST) Jun 11
ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಆದರೆ, ಇದು ಫ್ರೆಂಚ್ ಥ್ರಿಲ್ಲರ್ 'ಲಾ ಫೆಮ್ಮೆ ನಿಕಿತಾ' ಚಿತ್ರದ ಕಾಪಿ ಎಂಬ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.
07:12 PM (IST) Jun 11
ಹೊಸ ಸ್ಟಾರ್ಟ್ಅಪ್ ಕಂಪನಿ Blinq Mobility ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರಲಿದೆ. ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಹೊಂದಿರುವ ಈ ಕಾರು, ಪ್ರತಿ ಚಾರ್ಜ್ಗೆ 250 ಕಿ.ಮೀ ರೇಂಜ್ ನೀಡಲಿದ್ದು, ಕೇವಲ 2 ನಿಮಿಷ 48 ಸೆಕೆಂಡುಗಳಲ್ಲಿ ಬ್ಯಾಟರಿ ಬದಲಾಯಿಸಬಹುದು.
07:03 PM (IST) Jun 11
ತಮ್ಮ ಆತ್ಮಚರಿತ್ರೆ 'ಖುಲ್ಲಂ ಖುಲ್ಲಾ'ದಲ್ಲಿ ರಿಷಿ ಕಪೂರ್, 1993ರ ಮುಂಬೈ ಸ್ಫೋಟಕ್ಕೂ ಮುನ್ನ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಎರಡು ಬಾರಿ ಭೇಟಿಯಾಗಿದ್ದ ಘಟನೆ ಬಗ್ಗೆ ಬಹಿರಂಗವಾಗಿ ಬರೆದಿದ್ದರು. ಆ ಭೇಟಿಯ ಸಂಪೂರ್ಣ ಕಥೆ ಇಲ್ಲಿದೆ.
06:46 PM (IST) Jun 11
ತಾಯ್ತನದ ಖುಷಿಯಲ್ಲಿ ನಟನೆಗೆ ಬ್ರೇಕ್ ಕೊಟ್ಟಿದ್ದ ಕತ್ರಿನಾ ಕೈಫ್, ಈಗ ಮತ್ತೆ ಕಮ್ಬ್ಯಾಕ್ಗೆ ರೆಡಿಯಾಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸದ್ಯ ಸ್ಕ್ರಿಪ್ಟ್ಗಳನ್ನು ಓದುತ್ತಿದ್ದು, 2027ರಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
06:39 PM (IST) Jun 11
ಮಹಾರಾಷ್ಟ್ರದ ಲಾತೂರ್ನಲ್ಲಿ, 89 ವರ್ಷದ ವೃದ್ಧೆಯೊಬ್ಬರು ತಮ್ಮನ್ನು ನೋಡಿಕೊಳ್ಳುತ್ತಾರೆಂಬ ನಂಬಿಕೆಯ ಮೇಲೆ ಮೊಮ್ಮಕ್ಕಳಿಗೆ 7.5 ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಆಸ್ತಿ ಪಡೆದ ನಂತರ ಮೊಮ್ಮಕ್ಕಳು ಅವರನ್ನು ಅಲಕ್ಷಿಸಿದಾಗ ಕೋರ್ಟ್ ಮೆಟ್ಟಿಲೇರಿ ಗೆಲುವು ಕಂಡಿದ್ದಾರೆ.
05:43 PM (IST) Jun 11
ಸ್ಟ್ಯಾಂಡ್ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಅವರ ಶೋನಲ್ಲಿ, ಮಹಿಳಾ ವೈದ್ಯೆ ಸೆಜಾಲ್ ಪವಾರ್ ಅವರು ಪುರುಷರ ಶವಗಳ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರ ಟೀಕೆಗೆ ಗುರಿಯಾದ ನಂತರ, ವೈದ್ಯೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
05:10 PM (IST) Jun 11
05:00 PM (IST) Jun 11
ಟಾಟಾ ಒಡೆತನದ ಟಿಸಿಎಸ್ ಕಂಪನಿಯು ಇನ್ನು ಮುಂದೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸುವ ಮೂಲಕ ನಿರುದ್ಯೋಗಿಗಳಿಗೆ ಆಘಾತ ನೀಡಿದೆ. ಕೃತಕ ಬುದ್ಧಿಮತ್ತೆ (AI) ಮೇಲೆ ಭಾರಿ ಹೂಡಿಕೆ ಮಾಡುತ್ತಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.
04:51 PM (IST) Jun 11
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಜಾಕಿ ಶ್ರಾಫ್ ನಡುವಿನ ಒಂದು ಚಿಕ್ಕ ವಿಡಿಯೋ ಈಗ ಆನ್ಲೈನ್ನಲ್ಲಿ ಚರ್ಚೆಯ ವಿಷಯವಾಗಿದೆ. ಅಕ್ಷಯ್ ಕೈಯನ್ನು ಜಾಕಿ ತಳ್ಳಿದಂತೆ ಕಾಣುವ ಈ ದೃಶ್ಯ, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
04:21 PM (IST) Jun 11
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೀಗಿದ್ದೂ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಭುವನೇಶ್ವರ್ ಕುಮಾರ್ ಮೌನ ಮುರಿದಿದ್ದಾರೆ.
04:19 PM (IST) Jun 11
ಭಾರತಿರಾಜ ಅವರು ಪುಟ್ಟಣ್ಣ ಕಣಗಾಲ್ ಅವರ ‘ರಂಗನಾಯಕಿ’ ಚಿತ್ರದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದವರು. ಹೀಗಾಗಿಯೇ ಭಾರತಿರಾಜ ಅವರನ್ನು ಪುಟ್ಟಣ್ಣ ಕಣಗಾಲ್ ಶಿಷ್ಯ ಅಂತಲೇ ಗುರುತಿಸುತ್ತಾರೆ.
03:56 PM (IST) Jun 11
54,000 ಕೋಟಿ ರೂಪಾಯಿಗಳ ಬೃಹತ್ ಆಸ್ತಿ ಹೊಂದಿರುವ ಕುಟುಂಬದ ಹಿನ್ನೆಲೆ, ಭಾರತದ ಅತಿ ದೊಡ್ಡ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸೋದರ ಸೊಸೆ ಎಂಬ ಪಟ್ಟ - ಇವೆಲ್ಲವೂ ಇದ್ದರೂ ಶರ್ಮಿನ್ ಇಂದು ಚಿತ್ರರಂಗದಿಂದ ದೂರ ಆಗಬೇಕಾಗಿದ್ದು ದುರಂತ!
03:51 PM (IST) Jun 11
01:22 PM (IST) Jun 11
12:51 PM (IST) Jun 11
12:45 PM (IST) Jun 11
ನಾಗಾರ್ಜುನ ತಮ್ಮ ಕೂದಲಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅನೇಕರು ಅವರು ದುಬಾರಿ ಹೇರ್ ಟ್ರಾನ್ಸ್ಪ್ಲಾಂಟ್ ಅಥವಾ ಕೆಮಿಕಲ್ ಟ್ರೀಟ್ಮೆಂಟ್ ಮಾಡಿಸಿಕೊಂಡಿರಬಹುದು ಎಂದು ಭಾವಿಸಿದ್ದರು. ಆದರೆ ನಾಗಾರ್ಜುನ ಹೇಳಿದ್ದೇ ಬೇರೆ! ಈ ಸ್ಟೋರಿ ನೋಡಿ…
12:22 PM (IST) Jun 11
09:46 AM (IST) Jun 11
09:28 AM (IST) Jun 11
08:31 AM (IST) Jun 11
ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ಆಡಳಿತಾವಧಿಯ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಕುತಂತ್ರದಿಂದ 'ಹಿಂದೂ ಬೆಳವಣಿಗೆ ದರ' ಎಂದು ಕರೆಯಲಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.
08:28 AM (IST) Jun 11
07:27 AM (IST) Jun 11
ಮೇಲ್ವರ್ಗದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ದಲಿತ ಯುವಕನೊಬ್ಬನನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಬಾಲಕಿಯ ಮನೆಯವರು ಯುವಕ ಮತ್ತು ಅವನ ಸ್ನೇಹಿತನನ್ನು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದು, ಈ ಸಂಬಂಧ ಬಾಲಕಿಯ ತಂದೆ ಹಾಗೂ ಅಜ್ಜನನ್ನು ಬಂಧಿಸಲಾಗಿದೆ.
07:11 AM (IST) Jun 11