ಸೌದಿ ಅರೇಬಿಯಾದ ಮದೀನಾದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅವರ ನಿಯೋಗದ ವಿರುದ್ಧ ಕೆಟ್ಟ ಮತ್ತು ನಿಂದನಾತ್ಮಕ ಘೋಷಣೆಗಳನ್ನು ಕೂಗಿದ ಕೆಲವು ಪಾಕಿಸ್ತಾನಿ ಯಾತ್ರಿಕರನ್ನು ಸೌದಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಇಸ್ಲಾಮಾಬಾದ್ (ಏ.30): ಸೌದಿ ಅರೇಬಿಯಾದ (Saudi Arabia) ಮದೀನಾದಲ್ಲಿರುವ (Medina) ಮಸ್ಜಿದ್-ಇ-ನಬ್ವಿಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Prime Minister Shehbaz Sharif ) ಮತ್ತು ಅವರ ನಿಯೋಗದ ವಿರುದ್ಧ ಕೆಟ್ಟ ಮತ್ತು ನಿಂದನಾತ್ಮಕ ಘೋಷಣೆಗಳನ್ನು ಕೂಗಿದ ಕೆಲವು ಪಾಕಿಸ್ತಾನಿ ಪ್ರಜೆಗಳನ್ನು (Pakistan) ಸೌದಿ ಅರೇಬಿಯಾದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಇಸ್ಲಾಮಾಬಾದ್‌ನಲ್ಲಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿ ಶುಕ್ರವಾರ ಖಚಿತಪಡಿಸಿದೆ.

ಸೌದಿ ರಾಯಭಾರಿ ಕಚೇರಿಯ ಮಾಧ್ಯಮ ನಿರ್ದೇಶಕರ ಪ್ರಕಾರ, ಪ್ರತಿಭಟನಾಕಾರರನ್ನು "ನಿಯಮಗಳನ್ನು ಉಲ್ಲಂಘಿಸಿದ" ಮತ್ತು ಮಸೀದಿಯ ಪಾವಿತ್ರ್ಯತೆಯನ್ನು "ಅಗೌರವ" ಪಡಿಸಿದ ಕಾರಣಕ್ಕಾಗಿ ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನ ಪ್ರಧಾನಿಯನ್ನು ಮದೀನಾದಲ್ಲಿ ನೋಡಿದ ತಕ್ಷಣ, ಪ್ರಜೆಗಳು "ಚೋರ್, ಚೋರ್ (ಕಳ್ಳ, ಕಳ್ಳ)" ಎಂದು ಕೂಗಿದ್ದರು ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. ಹೊಸದಾಗಿ ನೇಮಕಗೊಂಡ ಪ್ರಧಾನ ಮಂತ್ರಿ ಸೌದಿ ಅರೇಬಿಯಾಕ್ಕೆ ಮೂರು ದಿನಗಳ ಪ್ರವಾಸದಲ್ಲಿದ್ದು, ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವಿದೇಶಿ ಪ್ರವಾಸವಾಗಿದೆ. ಬಿಲಾವಲ್ ಭುಟ್ಟೋ, ಜರ್ದಾರಿ ಸೇರಿದಂತೆ ಇತರ ನಿಯೋಗದೊಂದಿಗೆ ಸೌದಿ ಭೇಟಿ ಕೈಗೊಂಡಿದ್ದಾರೆ.

ಗುರುವಾರ ಮದೀನಾಕ್ಕೆ ಆಗಮಿಸಿದ ನಿಯೋಗವು, ಪ್ರವಾದಿಯ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಯೋಚನೆಯಲ್ಲಿತ್ತು. ಆದರೆ, ಮಸೀದಿಯ ಒಳಹೊಕ್ಕ ಬೆನ್ನಲ್ಲಿಯೇ ಪಾಕಿಸ್ತಾನದ ಮೂಲದ ಯಾತ್ರಿಕರಿಂದ ಪ್ರತಿಭಟನೆಗಳು ವ್ಯಕ್ತವಾಗಿದ್ದು ಮಾತ್ರವಲ್ಲದೆ, ಪ್ರಧಾನಿಯನ್ನು ಕಳ್ಳ ಕಳ್ಳ ಎಂದು ಕರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Scroll to load tweet…


ಪ್ರಧಾನಿ ಷರೀಫ್ ಮತ್ತು ಅವರ ಪುತ್ರ ಹಮ್ಜಾ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ. ಈ ನಡುವೆ ಇವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದು, ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಇನ್ನೊಂದು ವೀಡಿಯೊದಲ್ಲಿ ಪಾಕಿಸ್ತಾನದ ಪ್ರಜೆಗಳು ಸೌದಿ ಗಾರ್ಡ್‌ಗಳಿಂದ ಬೆಂಗಾವಲು ಪಡೆದ ಫೆಡರಲ್ ಮಂತ್ರಿಗಳಾದ ಮರಿಯುಮ್ ಔರಂಗಜೇಬ್ ಮತ್ತು ಶಹಜೈನ್ ಬುಗ್ತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸಿದೆ. ಒಬ್ಬ ಪ್ರಜೆಯು ಬುಗ್ಟಿಯ ಕೂದಲನ್ನು ಹಿಂದಿನಿಂದ ಎಳೆಯುವುದನ್ನು ಸಹ ಕಾಣಬಹುದು.

ಯಾತ್ರಾರ್ಥಿಗಳಿಂದ ಎದುರಿಸಿದ ಕಿರುಕುಳದ ಬಗ್ಗೆ ಮಾತನಾಡಿದ ಮರಿಯುಮ್ ಔರಂಗಜೇಬ್ ವೀಡಿಯೊ ಸಂದೇಶದಲ್ಲಿ "ಆಯ್ದ ಗುಂಪು" ಈ ಕೃತ್ಯವನ್ನು ಎಸಗಿದೆ ಎಂದು ಹೇಳಿದ್ದಾರೆ, ಆದರೆ ಹೆಚ್ಚಿನ ಪಾಕಿಸ್ತಾನಿಗಳು ಮಸೀದಿಯ ಪಾವಿತ್ರ್ಯತೆಯನ್ನು ಗೌರವಿಸುತ್ತಾರೆ. "ಈ ಘಟನೆಗೆ ಕಾರಣವಾದ ವ್ಯಕ್ತಿಯನ್ನು ನಾನು ಹೆಸರಿಸಲು ಬಯಸುವುದಿಲ್ಲ ಏಕೆಂದರೆ ನಾನು ಈ ಪವಿತ್ರ ಭೂಮಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲು ಬಯಸುವುದಿಲ್ಲ" ಎಂದು ಅವರು ಹೇಳಿದರು.

ರಿಯಲ್ ಲೈಫ್ ನ ವಿಕ್ಕಿ ಡೋನರ್, 30 ವರ್ಷದ ಕೇಲ್ ಗಾರ್ಡಿಗೆ 47 ಮಕ್ಕಳು!

ಪಾಕಿಸ್ತಾನಿ ಯಾತ್ರಿಕರ ವಿರುದ್ಧ "ಸೂಕ್ತ ಕ್ರಮ" ತೆಗೆದುಕೊಳ್ಳುವಂತೆ ಸೌದಿ ಅರೇಬಿಯಾ ಸರ್ಕಾರಕ್ಕೆ ತಮ್ಮ ಸಚಿವಾಲಯವು ವಿನಂತಿಸುತ್ತದೆ ಎಂದು ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿದ್ದಾರೆ. ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನನ್ನ ಸಚಿವಾಲಯವು ಸೌದಿ ಸರ್ಕಾರಕ್ಕೆ ವಿನಮ್ರ ವಿನಂತಿಯನ್ನು ಮಾಡುತ್ತದೆ. ಮಸೀದಿ-ಇ-ನಬ್ವಿಯಲ್ಲಿ ನಡೆದ ಈ ಘಟನೆಗಳಲ್ಲಿ ರಾಷ್ಟ್ರ ಅನುಭವಿಸಿದ ನೋವನ್ನು ನಾವು ತಿಳಿಸಲಿದ್ದೇವೆ ಎಂದು ಅವರು ಹೇಳಿದರು.

ರಷ್ಯಾದ 40 ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದ'ಗೋಸ್ಟ್ ಆಫ್ ಕೀವ್' ಸಾವು!

ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಸೌದಿ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗುವುದು ಏಕೆಂದರೆ ಅವರು "ಪವಿತ್ರ ಭೂಮಿಯಲ್ಲಿ ವಾಸಿಸಲು ಅರ್ಹರಲ್ಲ" ಎಂದು ಸನಾವುಲ್ಲಾ ಹೇಳಿದರು. ಘಟನೆಯನ್ನು ಖಂಡಿಸಿದ ಪಾಕಿಸ್ತಾನ್ ಉಲೇಮಾ ಕೌನ್ಸಿಲ್ ಅಧ್ಯಕ್ಷ ತಾಹಿರ್ ಮಹಮೂದ್ ಅಶ್ರಫಿ, ರಂಜಾನ್ ಪವಿತ್ರ ದಿನದಂದು ಕೆಟ್ಟ ಘೋಷಣೆಗಳನ್ನು ಎತ್ತುವ ಮತ್ತು ಆರೋಪಗಳನ್ನು ಮಾಡುವ ಬದಲು ಮುಸ್ಲಿಮರು ಮಸೀದಿ-ಇ-ನಬ್ವಿಯಲ್ಲಿ ತಲೆ ಬಾಗಿ ತಮ್ಮ ಧ್ವನಿಯನ್ನು ತಗ್ಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.