ಫೆಬ್ರವರಿ 6 ರಂದು ರೈತರು ದೇಶಾದ್ಯಂತ ಚಕ್ಕಾ ಜಾಮ್ ಪ್ರತಿಭಟನೆ ನಡೆಸಿದ್ದಾರೆ. ರೈತ ಪ್ರತಿಭಟನೆಗೆ ಖಲಿಸ್ತಾನ ಸಂಘಟನೆ ಸೇರಿದಂತೆ ಹಲವು ನಿಷೇಧಿತ ಸಂಘಟನೆಗಳು ಬೆಂಬಲ ಸೂಚಿಸಿ ಹೋರಾಟ ತೀವ್ರಗೊಳಿಸಿದೆ. ಆದರೆ ಇದೇ ಖಲಿಸ್ತಾನದ ವಿರುದ್ದ ಕೆನಾಡಲ್ಲಿರುವ ಸಿಖ್ ಸಮುದಾಯದ ತಿರಂಗ ರ್ಯಾಲಿ ನಡೆಸಿ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.
ಕೆನಡಾ(ಫೆ.06): ರೈತ ಪ್ರತಿಭಟನೆ ನಡುವೆ ಇದೀಗ ಹಲವು ಸಂಘಟನೆಗಳು ಸೇರಿಕೊಂಡಿದೆ. ದೆಹಲಿ ಹಾಗೂ ದೇಶಾದ್ಯಂತ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ 41 ರೈತ ಸಂಘಟನೆಗಳು ಎದುರಿಗೆ ಕುಳಿತು ಪ್ರತಿಭಟನೆ ಮಾಡುತ್ತಿದ್ದರೆ, ಇದರ ನಡುವೆ ಹಲವು ನಿಷೇಧಿತ ಸಂಘಟನೆಗಳು ಸೇರಿಕೊಂಡು ಹೋರಾಟ ತೀವ್ರಗೊಳಿಸಿದೆ. ಪ್ರಮುಖವಾಗಿ ಖಲಿಸ್ತಾನಿ ಸಿಖ್ ಸಂಘಟನೆ ಭಾರತ ಒಡೆಯುವ ಕೆಲಸಕ್ಕೆ ಕೈಹಾಕಿದೆ. ಇದೀಗ ಈ ಖಲಿಸ್ತಾನ್ ಸಂಘಟನೆ ವಿರುದ್ಧ ಸಿಖ್ ಸಮುದಾಯ ಹೋರಾಟ ಆರಂಭಿಸಿದೆ.
ರೈತ ಪ್ರತಿಭಟನೆ ನಡುವೆ ಸೇರಿಕೊಂಡ ಖಲಿಸ್ತಾನಕ್ಕೆ ಪಾಕ್ ಬಹಿರಂಗ ಬೆಂಬಲ; ವೈರಲ್ ವಿಡಿಯೋ!
ಕೆನಡದಲ್ಲಿ ಭಾರತದ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಹಲವು ಪ್ರತಿಭಟನೆಗಳನ್ನು ಖಲಿಸ್ತಾನ ಸಂಘಟನ ಆಯೋಜಿಸಿದೆ. ಇದೀಗ ಈ ಖಲಿಸ್ತಾನ ಕುತಂತ್ರದ ವಿರುದ್ಧ ಕೆನಡಾದಲ್ಲಿ ಸಿಖ್ ಸಮುದಾಯ ತಿರಂಗ ರ್ಯಾಲಿ ಆಯೋಜಿಸಿದೆ. ಕೆನಡಾದಲ್ಲಿ ಆಯೋದಿಸಿದ ತಿರಂಗ ರ್ಯಾಲಿಯಲ್ಲಿ ಸಾವಿರಾರು ಸಿಖ್ರು ತಮ್ಮ ವಾಹನಗಳಿಗೆ ತಿರಂಗ ಧ್ವಜ ಕಟ್ಟಿ ರ್ಯಾಲಿ ಮಾಡಿದ್ದಾರೆ.
In #Canada, the patriotic #Indians took out a #Tricolor rally to protest against the #Khalistanis. #SikhCommunity supports you all. Thank you for standing with #SikhCommunity and not #Khalistanis. #SikhsDontWantKhalistan #SikhForIndia #IndiaForSikh #NahiChahidaKhalistan pic.twitter.com/zYSc74mo2s
— Gunjan Kaur (@KaurGunjann) February 6, 2021
ನಮ್ಮ ಹೋರಾಟ ಖಲಿಸ್ತಾನದ ವಿರುದ್ಧವಾಗಿದೆ. ಭಾರತವನ್ನು ಒಡೆಯಲು ನಾವು ಅವಕಾಶ ನೀಡುವುದಿಲ್ಲ. ಭಾರತದೊಂದಿದೆ ಸಿಖ್ ಎಂಬ ಘೋಷವಾಕ್ಯಗಳೊಂದಿಗೆ ಪ್ರತಿಭಟನೆ ಆರಂಭಿಸಿದ್ದಾರೆ. ಖಲಿಸ್ತಾನ ಬೇಡವೇ ಬೇಡ, ರೈತರು ಕುತಂತ್ರ ಅರ್ಥ ಮಾಡಿಕೊಳ್ಳಬೇಕು ಎಂದು ಕೆನಡಾ ಸಿಖ್ ಸಮುದಾಯ ಮನವಿ ಮಾಡಿದೆ.
ತಿರಂಗ ಪ್ರತಿಭಟನೆ ಯಾವುದೇ ಪಕ್ಷದ ಪರ ಅಲ್ಲ. ಇದು ಭಾರತಕ್ಕಾಗಿ, ಐಕ್ಯ ಭಾರತಕ್ಕಾಗಿ ಆಯೋಜಿಸಿದ ಪ್ರತಿಭಟನೆ ಎಂದು ಕೆನಡಾ ಸಿಖ್ ಸಮುದಾಯ ಸ್ಪಷ್ಟಪಡಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 6, 2021, 6:37 PM IST