'ಮನೆಯಲ್ಲೆ ಕಲಿ-ಕನ್ನಡ ಕಲಿ' ಸಿಂಗಾಪುರ ಕನ್ನಡ ಸಂಘದ ಅದ್ಭುತ ಕಾರ್ಯಕ್ರಮ
ಕನ್ನಡ ಕಟ್ಟುವ ಹೊಸತನದ ಯತ್ನ/ ಅನಿವಾಸಿ ಕನ್ನಡಿಗರ ಸಂಭ್ರಮ/ ಆನ್ ಲೈನ್ ಕನ್ನಡ ಕಲಿಕೆಯ ತರಗತಿಗಳು/ ಸುಮಾರು 2 ಗಂಟೆಗಳ ಕಾಲ ನಾಡಿನ ದಿಗ್ಗಜರೊಂದಿಗೆ ಸಂವಾದ
ಸಿಂಗಾಪುರ(ಏ. 30): ಕನ್ನಡ ಸಂಘ (ಸಿಂಗಪುರ) ಆಯೋಜಿಸಿದ 'ಹೊಂಗೆ ಹೂವ ತೊಂಗಲಲ್ಲಿ' ಕಾರ್ಯಕ್ರಮಕ್ಕೆ ಅಭೂತ ಪೂರ್ವವಾದ ಪ್ರತಿಕ್ರಿಯೆ ದೊರೆತಿದೆ ಕನ್ನಡ ಸಂಘ (ಸಿಂಗಾಪುರ) ದ ಮಹಾದಾಸೆಯ ಚಟುವಟಿಕೆ "ಮನೆಯಲ್ಲೇ ಕಲಿ - ಕನ್ನಡ ಕಲಿ"ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿರ್ದೇಶಕ ಟಿಎಸ್ ನಾಗಾಭರಣ, ಪ್ರೇಮಕವಿ ಬಿ.ಆರ್.ಲಕ್ಷ್ಮಣರಾವ್, ಲೇಖಕ ಡುಂಡಿರಾಜ್ ಅವರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಚಾಲನೆಯನ್ನು ಮಾಡಲಾಯಿತು .
ಇದೇ ಸಂದರ್ಭದಲ್ಲಿ ಕನ್ನಡ ಕಲಿಕೆ, ಭಾಷೆಯ ಸ್ಥಿತಿ ಗತಿಗಳ ಬಗ್ಗೆ ನಡೆದ ಅರ್ಥಪೂರ್ಣ ಸಂವಾದದಲ್ಲಿ ಸಿಂಗಾಪುರ ಕನ್ನಡಿಗರು ಭಾಗವಹಿಸಿದ್ದರು. ಸುಮಾರು 2 ಗಂಟೆಗಳ ಕಾಲ ನಾಡಿನ ದಿಗ್ಗಜರೊಂದಿಗೆ ನಡೆದ ಅರ್ಥಪೂರ್ಣವಾದ ಚರ್ಚೆ ನಿಜಕ್ಕೂ ಒಂದಷ್ಟು ಹೊಸತನಗಳನ್ನು ನೀಡಿತು.
ಸಿಂಗಾಪುರ ಕನ್ನಡ ಸಂಘದಿಂದ ಯುಗಾದಿ ಸಂಭ್ರಮ.. ಲೈವ್ ನೋಡುವ ಅವಕಾಶ ಇದೆ
ಮೇ 2 ರಿಂದ, ಪ್ರತೀ ಭಾನುವಾರ ಬೆಳಿಗ್ಗೆ, ಕನ್ನಡ ಕಲಿಯ ತರಗತಿಗಳು ಆರಂಭಗೊಳ್ಳಲಿವೆ. ವಿದೇಶಗಳಲ್ಲಿ ಸಂಘ-ಸಂಸ್ಥೆಗಳು ಕನ್ನಡವನ್ನು ಮೊಳಗಿಸುತ್ತಲೇ ಬಂದಿವೆ. ಅನಿವಾಸಿ ಕನ್ನಡಿಗರ ನಾವಿಕ, ಅಕ್ಕ ಸಮ್ಮೇಳನಗಳು ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾಡಿಕೊಟ್ಟಿವೆ