Asianet Suvarna News Asianet Suvarna News

ಇಟಲಿಯ ಪಿಯಾ​ಸೆಂಜಾ ಮ್ಯೂಸಿಯಂನಲ್ಲಿ ಕನ್ನಡದ ಕವಿತೆ

ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಅಂಕೋಲಾದ ಕವಯತ್ರಿ ರೇಣುಕಾ ರಮಾನಂದ ಅವರ ಕವಿತೆ ಸ್ಥಾನ ಪಡೆದಿದೆ.
 

Kannada Poem Got placed At italy museum snr
Author
Bengaluru, First Published Sep 28, 2020, 7:28 AM IST

ಕಾರವಾರ (ಸೆ.28): ಕವಿತೆ, ವಿಶ್ವ ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಅಂಕೋಲಾದ ಕವಯತ್ರಿ ರೇಣುಕಾ ರಮಾನಂದ ಅವರ ಕವಿತೆ ಸ್ಥಾನ ಪಡೆದಿದೆ.

ಭಾರತದ 15 ಭಾಷೆಗಳ ಇಪ್ಪತ್ತೆಂಟು ಕವಿಗಳ 250 ಕವಿತೆಗಳು, ಕವಿಗಳ ಕೈಬರಹ, ಅವರದ್ದೇ ವಾಚನದ ವಿಡಿಯೋ, ಅದರ ಇಂಗ್ಲಿಷ್‌ ಅನುವಾದದ ಪ್ರದರ್ಶನ ಸೆ.26 ಆರಂಭವಾಗಿದೆ. ಈ ಪ್ರದರ್ಶನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅಂಕೋಲೆಯ ಕವಯತ್ರಿ ರೇಣುಕಾ ರಮಾನಂದರ ಕನ್ನಡ ಕವಿತೆಯೂ ಇರುವುದು ವಿಶೇಷ. 

ಟ್ರಂಪ್ ಜತೆ ಸೇರಿಕೊಂಡ ಪುಟಿನ್, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹೆಸರು .

ಇದು ಗ್ಲೋಬಲ್ ಪೊಯೆಟ್ರಿ ಪ್ಯಾಚ್‌ ವರ್ಕ್ನ ರಕ್‌ ರಾರ‍ಯಕ್‌ ಕಲಾಕವನ ಅನುಸ್ಥಾಪನಾ ಯೋಜನೆಯಾಗಿದ್ದು, ಇದರಲ್ಲಿ ಭಾರತ ದೇಶದ ವೈವಿಧ್ಯತೆಯನ್ನು ಸಂಭ್ರಮಿಸುವ ಬಹುಭಾಷಿಕ ಹಾಗೂ ಪ್ರಾಂತಿಕ ವಿಚಾರ ಧ್ವನಿಸುವ ಭಾರತೀಯ ಭಾಷೆಯ ಕವಿತೆಗಳನ್ನು ಒಳಗೊಂಡಿವೆ. ಪ್ರಖ್ಯಾತ ಕವಯತ್ರಿ ಮಮತಾ ಸಾಗರ ಈ ಕವನಗಳ ಆಯ್ಕೆ ಮಾಡಿದ್ದಾರೆ.

Follow Us:
Download App:
  • android
  • ios