Asianet Suvarna News Asianet Suvarna News

ಯುಎಇ ಅಧ್ಯಕ್ಷ ಖಲೀಫಾ ನಹ್ಯಾನ್‌ ನಿಧನ, ಭಾರತದಲ್ಲಿ ಒಂದು ದಿನದ ಶೋಕಾಚರಣೆ ಘೋಚಿಸಿದ ಸರ್ಕಾರ!

* ದುಬೈ ಅಧ್ಯಕ್ಷ, ಅಬುಧಾಬಿಯ ದೊರೆಯಾದ ಶೇಖ್‌ ಖಲೀಫಾ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ನಿಧನ

* ನಿಧನದ ಹಿನ್ನೆಲೆಯಲ್ಲಿ ಯುಎಇಯಲ್ಲಿ 40 ದಿನಗಳ ಶೋಕಾಚರಣೆ

* ಭಾರತದಲ್ಲೂ ಒಂದು ದಿನದ ಶೋಕಾಚರಣೆ ಘೋಚಿಸಿದ ಕೇಂದ್ರ ಸರ್ಕಾರ

India Declares One Day State Mourning After UAE President Death pod
Author
Bangalore, First Published May 14, 2022, 12:14 PM IST

ನವದೆಹಲಿ(ಮೇ.14): ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದ ನಂತರ ಭಾರತವು ಶನಿವಾರದಂದು ದೇಶಾದ್ಯಂತ ಶೋಕಾಚರಣೆ ಘೋಷಿಸಿದೆ. ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊರಡಿಸಿದ ಆದೇಶದನ್ವಯ, ಅಗಲಿದ ಗಣ್ಯರ ಗೌರವಾರ್ಥ ಮೇ 14 ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ.

ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ನಿಧನ

ಸಂದೇಶದ ಪ್ರಕಾರ, ದೇಶದಲ್ಲಿ ಒಂದು ದಿನದ ಶೋಕಾಚರಣೆಯ ಸಂದರ್ಭದಲ್ಲಿ, ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶೇಖ್ ಖಲೀಫಾ ಶುಕ್ರವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು ಯುಎಇಯ ಸ್ಥಾಪಕ ಅಧ್ಯಕ್ಷ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹಿರಿಯ ಪುತ್ರರಾಗಿದ್ದರು. ಶೇಖ್ ಖಲೀಫಾ ಅವರು ಯುಎಇ ಅಧ್ಯಕ್ಷರಾಗಿದ್ದರು ಮತ್ತು ನವೆಂಬರ್ 3, 2004 ರಿಂದ ಅಬುಧಾಬಿಯ ಆಡಳಿತಗಾರರಾಗಿದ್ದರು. ಶೇಖ್ ಜಾಯೆದ್ ಬಿನ್ ಸುಲ್ತಾನ್ ಅವರು 1971 ರಿಂದ ನವೆಂಬರ್ 2, 2004 ರವರೆಗೆ ಯುಎಇಯ ಮೊದಲ ಅಧ್ಯಕ್ಷರಾಗಿದ್ದರು. ಅವರು 2 ನವೆಂಬರ್ 2004 ರಂದು ನಿಧನರಾದರು.

ಅತ್ತ, ಯುಎಇಯಲ್ಲಿ ಅಧ್ಯಕ್ಷರ ನಿಧನದ ನಂತರ, ಸರ್ಕಾರವು 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ರಾಷ್ಟ್ರಧ್ವಜವು 40 ದಿನಗಳ ಕಾಲ ಅರ್ಧ ಮಟ್ಟದಲ್ಲಿ ಉಳಿಯುತ್ತದೆ. ರಾಷ್ಟ್ರೀಯ ಶೋಕಾಚರಣೆಯ ಜೊತೆಗೆ, ದೇಶದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ವಲಯಗಳಿಗೆ ಮೂರು ದಿನಗಳ ರಜೆಯನ್ನು ಘೋಷಿಸಲಾಗಿದೆ. ಶೇಖ್ ಖಲೀಫಾ ಅವರು 3 ನವೆಂಬರ್ 2004 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಹುದ್ದೆಯಲ್ಲಿದ್ದರು. 2019 ರಲ್ಲಿ, ಅವರು ನಾಲ್ಕನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಅವನು ತನ್ನ ತಂದೆಯ ನಂತರ ಆಯ್ಕೆಯಾದರು.

ಈದ್ ಪಾರ್ಟಿಯಲ್ಲಿ ಬಿರಿಯಾನಿ ಜೊತೆ ಆಭರಣ ನುಂಗಿದ ವ್ಯಕ್ತಿ

ತಮ್ಮ ಆಡಳಿತಾವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಂಡ ಇವರು ಆಧುನಿಕ ದುಬೈ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದುಬೈಯಲ್ಲಿ ಒಕ್ಕೂಟ ವ್ಯವಸ್ಥೆಯ ಸರ್ಕಾರ ಪುನರ್‌ ರಚನೆಯಲ್ಲಿ ಶ್ರಮಿಸಿದ್ದರು. ತೈಲ ಹಾಗೂ ಅನಿಲ ಕ್ಷೇತ್ರದಲ್ಲಿ ಇವರು ಕೈಗೊಂಡ ಸಾಕಷ್ಟುಸುಧಾರಣಾ ಕ್ರಮಗಳ ಮೂಲಕ ದೇಶವು ಆರ್ಥಿಕವಾಗಿ ಇನ್ನಷ್ಟು ಸಬಲವಾಯಿತು. ಇದಲ್ಲದೇ ಬಡ ಜನರಿಗಾಗಿ ಮನೆ, ಶಿಕ್ಷಣ ಮೊದಲಾದ ಸೌಲಭ್ಯ ನೀಡಿ ಮೆಚ್ಚುಗೆ ಗಳಿಸಿದ್ದರು.

ಖಲೀಫಾ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ‘ಖಲೀಫಾ ಮಹಾನ್‌ ದೂರದರ್ಶಿ, ದೂರದೃಷ್ಠಿಯ ನಾಯಕರಾಗಿದ್ದರು. ಅವರ ಆಡಳಿತದಲ್ಲಿ ಭಾರತ ಹಾಗೂ ದುಬೈ ಸಂಬಂಧಗಳು ಉತ್ತಮಗೊಂಡಿದ್ದವು’ ಎಂದು ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios