Asianet Suvarna News Asianet Suvarna News

'ಟ್ವಿಟರ್‌ನಲ್ಲಿ ರಾಜಕೀಯ ಮಾಡ್ತಿದ್ದವರು ಇದೀಗ ಟ್ವಿಟರ್‌ಗಾಗಿ ರಾಜಕೀಯ'; ಕಾಂಗ್ರೆಸ್‌ಗೆ ತಿರುಗೇಟು!

  • ದೇಶದ ಕಾನೂನು ಗೌರವಿಸಲು ಟ್ವಿಟರ್‌ಗೆ ಕೇಂದ್ರ ತಾಕೀತು
  • ಟ್ವಿಟರ್ ಪರ ನಿಂತು ಕೇಂದ್ರದ ವಿರುದ್ಧ ಕಾಂಗ್ರೆಸ್ ಸಮರ ಆರಂಭ
  • ಕಾಂಗ್ರೆಸ್ ರಾಜಕಾರಣಕ್ತೆ ತಕ್ಕ ತಿರುಗೇಟು ನೀಡಿದ ರವಿಶಂಕರ್ ಪ್ರಸಾದ್
Those who do politics only in twitter now are doing politics of twitter RS Prasad slams congress ckm
Author
Bengaluru, First Published May 30, 2021, 8:24 PM IST

ನವದೆಹಲಿ(ಮೇ.30):  ಹೊಸ ಡಿಜಿಟಲ್ ನಿಯಮ ಪಾಲನೆಗೆ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವ್ಯಾಟ್ಸ್ಆ್ಯಪ್, ಲಿಂಕ್ಡ್ ಇನ್ ಸೇರಿದಂತೆ ಬಹುತೇಕ ಸಂಸ್ಥೆಗಳು ಒಪ್ಪಿಕೊಂಡಿದ್ದರೆ, ಟ್ವಿಟರ್ ತನ್ನ ಮೊಂಡುವಾದ ಮುಂದುವರಿಸಿದೆ. ಈ ದೇಶದ ಕಾನೂನು ಗೌರವಿಸಲು ಕೇಂದ್ರ ತಾಕೀತು ಮಾಡಿದ ಬೆನ್ನಲ್ಲೇ ಇದೀಗ ಟ್ವಿಟರ್ ಪರ ಕಾಂಗ್ರೆಸ್ ಬ್ಯಾಟಿಂಗ್ ಮಾಡುತ್ತಿದೆ. ಕಾಂಗ್ರೆಸ್ ನಡೆಯನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಖಂಡಿಸಿದ್ದಾರೆ.

ಕೇಂದ್ರದ ಎಚ್ಚರಿಕೆಗೆ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಥಂಡಾ; ಹೊಸ ನಿಯಮಕ್ಕೆ ಸಮ್ಮತಿ!.

ಟ್ವಿಟರ್‌ ತಾಣದಲ್ಲಿ ಮಾತ್ರ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಟ್ವಿಟರ್‌ನಿಂದ ರಾಜಕಾರಣ ಆರಂಭಿಸಿದ್ದಾರೆ ಎಂದು ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಈ ರೀತಿಯ ನೀಚ ರಾಜಕಾರಣ ಹಾಗೂ ಪರಿಸ್ಥಿತಿಗೆ ತಕ್ಕಂತೆ ತನ್ನ ನಿಲುವಗಳನ್ನೇ ಬದಲಿಸಿಕೊಳ್ಳುವ ಸ್ಥಿತಿಗೆ ಇಳಿದಿದೆ. ಕಾಂಗ್ರೆಸ್ ರಾಜಕಾರಣವನ್ನು ಈ ದೇಶದ ಜನ ನೋಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ.

ಪ್ರತಿಯೊಬ್ಬರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಟ್ವಿಟರ್ ಉತ್ತಮ ವೇದಿಕೆಯಾಗಿದೆ. ಟ್ವಿಟರ್ ಭಾರತದ ಬಹುದೊಡ್ಡ ಸಾಮಾಜಿಕ ಮಾಧ್ಯಮವಾಗಿದೆ. ಉತ್ತಮ ಲಾಭ ಮಾಡಿಕೊಳ್ಳುತ್ತಿದೆ. ಇದರಲ್ಲಿ ನಮಗೇನು ತಕರಾರಿಲ್ಲ. ಆದರೆ ಈ ದೇಶದ ಕಾನೂನು, ಈ ದೇಶದ ಸಂವಿಧಾನವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಸಾಮಾನ್ಯ ವ್ಯಾಟ್ಸ್ಆ್ಯಪ್ ಬಳಕೆದಾರರು ಭಯಪಡಬೇಕಿಲ್ಲ; ಹೊಸ ನಿಯಮ ಕುರಿತು ಕೇಂದ್ರ ಸ್ಪಷ್ಟನೆ!

ಹೊಸ ಡಿಜಟಲ್ ನಿಯಮ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಟ್ವಿಟರ್ ಕೇಂದ್ರದ ಮೇಲೆ ಆರೋಪ ಮಾಡಿತ್ತು. ಈ ಹೇಳಿಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ ಕೇಂದ್ರ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಪಾಠ ಬೇಕಿಲ್ಲ ನಿಯಮ ಪಾಲಿಸಿ ಎಂದು ತಾಕೀತು ಮಾಡಿತ್ತು.

Follow Us:
Download App:
  • android
  • ios