ಬಿಜೆಪಿ ಕಚೇರಿಯ ಮುಂದೆ ಅಪರಿಚಿತ ವ್ಯಕ್ತಿಯಿಂದ ವಿಚಿತ್ರ ವರ್ತನೆ
ಬೆಂಗಳೂರು ಬಿಜೆಪಿ ಕಚೇರಿ ಮುಂದೆ ಅಪರಿಚಿತ ವ್ಯಕ್ತಿ ಪ್ಲಕಾರ್ಡ್ ಪ್ರದರ್ಶನ ಮಾಡಿ, 'ರಾಜ್ಯದಲ್ಲಿ ಮಳೆ ನಿಂತಿದೆ, ಬೈಬಲ್ ನಲ್ಲಿ ಮಳೆ ನಿಂತಿದೆ ಎಂದು ಬರೆದಿದೆ' ಎಂದು ಬರೆದುಕೊಂಡಿದ್ದಾನೆ.
ಬೆಂಗಳೂರು (ಆ. 23): ಬಿಜೆಪಿ ಕಚೇರಿ ಮುಂದೆ ಅಪರಿಚಿತ ವ್ಯಕ್ತಿ ಪ್ಲಕಾರ್ಡ್ ಪ್ರದರ್ಶನ ಮಾಡಿ, 'ರಾಜ್ಯದಲ್ಲಿ ಮಳೆ ನಿಂತಿದೆ, ಬೈಬಲ್ ನಲ್ಲಿ ಮಳೆ ನಿಂತಿದೆ ಎಂದು ಬರೆದಿದೆ' ಎಂದು ಬರೆದುಕೊಂಡಿದ್ದಾನೆ.
ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಏನಪ್ಪಾ ಇದರ ಅರ್ಥ ಎಂದು ವಿಚಾರಿಸಿದರೆ, ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಹೀಗಂತ ಬೈಬಲ್ನಲ್ಲಿಯೂ ಬರೆದಿದೆ' ಎಂದು ಉತ್ತರಿಸಿದ್ದಾನೆ.