Asianet Suvarna News Asianet Suvarna News

ಮಹಾರಾಜನಾಗಿದ್ದ ಮೈಸೂರಿಗೆ ಶಾಕ್! ಮುಂಬೈನಿಂದ ಬಂದ ಯುವಕನಿಗೆ ಕೋವಿಡ್ ಪಾಸಿಟೀವ್

ಜಿಲ್ಲಾಡಳಿತ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಇಷ್ಟು ದಿನ ಮೈಸೂರೇ ಮಹಾರಾಜನಾಗಿತ್ತು. ಆದರೆ ಇದೀಗ ಮೈಸೂರು ನಗರಿಯ ಜನತೆಗೆ ಆಘಾತಕಾರಿ ಸುದ್ದಿಯೊಂದು ಕಾದಿದೆ. ಮುಂಬೈನಿಂದ ಬಂದ ಯುವಕನಿಗೆ ಕೊರೊನಾ ಪಾಸಿಟೀವ್ ಬಂದಿದೆ. ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ತೆರಳಿದ್ದ ಸೋಂಕಿತ ಯುವಕ. ಅವಧಿಗೂ ಮುನ್ನವೇ ಕ್ವಾರಂಟೈನ್‌ನಿಂದ ಯುವಕ ಡಿಸ್ಚಾರ್ಜ್ ಆಗಿದ್ದ. ಬೆಂಗಳೂರಿನಿಂದ ನಂಜನಗೂಡಿಗೆ ಬಂದ ಯುವಕನಿಗೆ ಕೋವಿಡ್ ಟೆಸ್ಟ್‌ನಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರಿನ ಕೋವಿಡ್ ಆಸ್ಪತ್ರೆಗೆ ಯುವಕನನ್ನು ಶಿಫ್ಟ್ ಮಾಡಲಾಗಿದೆ. ನಂಜನಗೂಡಿನ 17 ನೇ ವಾರ್ಡ್, ನೀಲಕಂಠ ನಗರವನ್ನು ಸೀಲ್‌ ಡೌನ್ ಮಾಡಲಾಗಿದೆ. ಯುವಕನ ಕುಟುಂಬಸ್ಥರಿಗೆ ಕ್ವಾರಂಟೈನ್ ಮಾಡಲಾಗಿದೆ. 

ಮೈಸೂರು (ಜೂ. 09): ಜಿಲ್ಲಾಡಳಿತ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಇಷ್ಟು ದಿನ ಮೈಸೂರೇ ಮಹಾರಾಜನಾಗಿತ್ತು. ಆದರೆ ಇದೀಗ ಮೈಸೂರು ನಗರಿಯ ಜನತೆಗೆ ಆಘಾತಕಾರಿ ಸುದ್ದಿಯೊಂದು ಕಾದಿದೆ. ಮುಂಬೈನಿಂದ ಬಂದ ಯುವಕನಿಗೆ ಕೊರೊನಾ ಪಾಸಿಟೀವ್ ಬಂದಿದೆ.

ಬೆಂಗಳೂರು ಪೊಲೀಸ್ ಪೇದೆಗೆ ಕೊರೋನಾ ಲಕ್ಷಣ ಇಲ್ಲದಿದ್ರೂ ಟೆಸ್ಟ್‌ನಲ್ಲಿ ಪಾಸಿಟಿವ್..!

ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ತೆರಳಿದ್ದ ಸೋಂಕಿತ ಯುವಕ. ಅವಧಿಗೂ ಮುನ್ನವೇ ಕ್ವಾರಂಟೈನ್‌ನಿಂದ ಯುವಕ ಡಿಸ್ಚಾರ್ಜ್ ಆಗಿದ್ದ. ಬೆಂಗಳೂರಿನಿಂದ ನಂಜನಗೂಡಿಗೆ ಬಂದ ಯುವಕನಿಗೆ ಕೋವಿಡ್ ಟೆಸ್ಟ್‌ನಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರಿನ ಕೋವಿಡ್ ಆಸ್ಪತ್ರೆಗೆ ಯುವಕನನ್ನು ಶಿಫ್ಟ್ ಮಾಡಲಾಗಿದೆ. ನಂಜನಗೂಡಿನ 17 ನೇ ವಾರ್ಡ್, ನೀಲಕಂಠ ನಗರವನ್ನು ಸೀಲ್‌ ಡೌನ್ ಮಾಡಲಾಗಿದೆ. ಯುವಕನ ಕುಟುಂಬಸ್ಥರಿಗೆ ಕ್ವಾರಂಟೈನ್ ಮಾಡಲಾಗಿದೆ.