ಅಪ್ಪು ಆಸೆಯಂತೆ ಸಾವಿರಾರು ಅಭಿಮಾನಿಗಳಿಗೆ ಇಂದು ಅನ್ನ ಸಂತರ್ಪಣೆ, ಅಭಿಮಾನಿಗಳ ಕ್ಯೂ..!
ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಇಟ್ಟುಕೊಳ್ಳಲಾಗಿದೆ. ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ವೆಜ್ ಹಾಗೂ ನಾನ್ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು (ನ. 09): ಅರಮನೆ ಮೈದಾನದಲ್ಲಿ (Palace Ground) ಅಪ್ಪು ಅಭಿಮಾನಿಗಳಿಗೆ ರಾಜ್ ಕುಟುಂಬದಿಂದ ಅನ್ನ ಸಂತರ್ಪಣೆ ಇಟ್ಟುಕೊಳ್ಳಲಾಗಿದೆ. ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ವೆಜ್ ಹಾಗೂ ನಾನ್ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ. ಏಕಕಾಲದಲ್ಲಿ 3 ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ.
ಅಪ್ಪು ಫ್ಯಾನ್ಸ್ಗೆ ಇಂದು ರಾಜ್ ಕುಟುಂಬದಿಂದ ಅನ್ನ ಸಂತರ್ಪಣೆ, ವೆಜ್, ನಾನ್ವೆಜ್ ಊಟದ ವ್ಯವಸ್ಥೆ
ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಆಗಮಿಸಿದ್ಧಾರೆ. 'ಸಾರ್ ನಾವು ಅಪ್ಪು ಅಭಿಮಾನಿಗಳು, ಅವರಿಲ್ಲ ಅಂತ ಕೇಳಿದಾಗ ಬಹಳ ನೋವಾಯ್ತು, ಅವರನ್ನು ನೋಡೋಕೆ ಬಂದಿದ್ದೇವೆ. ಬಹಳ ಒಳ್ಳೆಯ ಮುನುಷ್ಯ ಸಾರ್, ಅವರ ಪುಣ್ಯ ಕಾರ್ಯಕ್ಕೆ ಬಂದಿದ್ದೇವೆ ಸಾರ್' ಎಂದು ಅಭಿಮಾನಿಗಳು ಹೇಳಿದರು.