ಶೇ. 50 ರಷ್ಟು ಭರ್ತಿಗೆ ಅವಕಾಶ; ಸಿಎಂ ಭೇಟಿಗೆ ಮುಂದಾದ ಫಿಲ್ಮ್ ಚೇಂಬರ್
ಕೊರೊನಾ ನಿಯಂತ್ರಣಕ್ಕೆ ಟಫ್ರೂಲ್ಸ್ ಮೊರೆ ಹೋಗಿದೆ ಸರ್ಕಾರ. ಶೇ. 50 ಅಕ್ಯಪೆನ್ಸಿ ಬಗ್ಗೆ ಚಿತ್ರೋದ್ಯಮ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಮನವಿ ಸಲ್ಲಿಸಲು ಫಿಲ್ಮ್ ಚೇಂಬರ್ ಸಿಎಂ ಭೇಟಿಗೆ ನಿರ್ಧರಿಸಿದೆ.
ಬೆಂಗಳೂರು (ಏ. 03): ಕೊರೊನಾ ನಿಯಂತ್ರಣಕ್ಕೆ ಟಫ್ರೂಲ್ಸ್ ಮೊರೆ ಹೋಗಿದೆ ಸರ್ಕಾರ. ಶೇ. 50 ಅಕ್ಯಪೆನ್ಸಿ ಬಗ್ಗೆ ಚಿತ್ರೋದ್ಯಮ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಮನವಿ ಸಲ್ಲಿಸಲು ಫಿಲ್ಮ್ ಚೇಂಬರ್ ಸಿಎಂ ಭೇಟಿಗೆ ನಿರ್ಧರಿಸಿದೆ.
ಚಿತ್ರರಂಗವನ್ನು ವೆಂಟಿಲೇಟರ್ನಲ್ಲಿ ಹಾಕಿದಂತಾಗಿದೆ, ಸಿಡಿದೆದ್ದ ಸ್ಯಾಂಡಲ್ವುಡ್..!
ಸುಳಿವು ನೀಡದೇ ಏಕಾಏಕಿ ಶೇ. 50 ರಷ್ಟು ಭರ್ತಿಗೆ ಮಾತ್ರ ಅವಕಾಶ ಕೊಟ್ಟಿದ್ದು ಸರಿಯಲ್ಲ. ಮುಂಚಿತವಾಗಿ ಹೇಳಿದ್ದರೆ ನಾವು ಸಿನಿಮಾವನ್ನು ರಿಲೀಸ್ ಮಾಡುತ್ತಿರಲಿಲ್ಲ. ಈ ರೀತಿ ಸಂಕಷ್ಟಕ್ಕೆ ತಳ್ಳಿದರೆ ನಾವೆಲ್ಲಿಗೆ ಹೋಗೋಣ ಎಂದು ಫಿಲ್ಮ್ ಚೇಂಬರ್ನಲ್ಲಿ ಉಮೇಶ್ ಬಣಕಾರ್ ಹೇಳಿದ್ದಾರೆ.