Asianet Suvarna News Asianet Suvarna News

ಕರ್ನಾಟಕದಲ್ಲಿ ಹಗರಣಗಳ ಸರಮಾಲೆ: ಮತ್ತೊಂದು ನೇಮಕಾತಿ ಹಗರಣ ಬಯಲಿಗೆ..!

ಪಿಎಸ್‌ಐ ಆಯ್ತು, ಈಗ ಎಫ್‌ಡಿಎ ನೇಮಕಾತಿಯಲ್ಲೂ ಹಗರಣ ಆಗಿದೆ. 2021ರ ಎಫ್‌ಡಿ ಹಗರಣದಲ್ಲೂ ಗೋಲ್‌ಮಾಲ್‌ 

ಬೆಂಗಳೂರು(ಸೆ.17):  ರಾಜ್ಯದಲ್ಲಿ ಬಯಲಾಗುತ್ತಲೇ ಇವೆ ಹಗರಣಗಳು, ಸಾಲು ಸಾಲು ಹಗರಣಗಳ ನಡುವೆ ಮತ್ತೊಂದು ಹಗರಣ ಬಗಯಲಿಗೆ ಬಂದಿದೆ. ಹೌದು, ರಾಜ್ಯ ಸರ್ಕಾರಕ್ಕೆ ಎಫ್‌ಡಿಎ ನೇಮಕಾತಿಯ ಹಗ್ಗ ಸುತ್ತಿಕೊಂಡಿದೆ. ಪಿಎಸ್‌ಐ ಆಯ್ತು, ಈಗ ಎಫ್‌ಡಿಎ ನೇಮಕಾತಿಯಲ್ಲೂ ಹಗರಣ ಆಗಿದೆ. 2021ರ ಎಫ್‌ಡಿ ಹಗರಣದಲ್ಲೂ ಗೋಲ್‌ಮಾಲ್‌ ಆಗಿದೆ.  ಮೈಸೂರಿನ ಲೇಡಿ ಪಿಎಸ್‌ಐ ಎಫ್‌ಡಿಎ ನೇಮಕಾತಿ ಡೀಲ್‌ ನಡೆಸಿದ್ದಾರೆ. ಟ್ರಾಫಿಕ್‌ ಪಿಎಸ್‌ಐ ಅಶ್ವಿನಿ ಅನಂತಪುರ ನಡೆಸಿದ ಡೀಲ್‌ ಆಡಿಯೋ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. . ಟ್ರಾಫಿಕ್‌ ಪಿಎಸ್‌ಐ ಅಶ್ವಿನಿ ಅನಂತಪುರ ಮೂಲತಃ ಬಾಗಲಕೋಟೆಯ ಆಲಗೂರು ಗ್ರಾಮದವರು ಅಂತ ತಿಳಿದು ಬಂದಿದೆ. 

ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಕ್ಕೂ ಮುನ್ನ ರಾಜ್ಯದಲ್ಲಿ ಹೊತ್ತಿದ ಕಿಡಿ!

Video Top Stories