Asianet Suvarna News Asianet Suvarna News

ನಾಯಕತ್ವ ಬದಲಾವಣೆ ಸುದ್ದಿ ಮಧ್ಯೆ ಯಡಿಯೂರಪ್ಪಗೆ ಮತ್ತೊಂದು ಶಾಕ್!

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋದಿಂದ ನಾಯಕತ್ವ ಬದಲಾವಣೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರಿಂದ ಬಿಎಸ್‌ವೈ ಆಪ್ತರು ಸೈಲೆಂಟ್ ಆಗಿದ್ದಾರೆ.ಇದರ ಮಧ್ಯೆ ಸಚಿವರೊಬ್ಬರು ನೀಡಿದ ಜಾಹೀರಾತಿನಲ್ಲಿ ಮುಖ್ಯಮಂತ್ರಿಯನ್ನೇ ಮರೆತಿದ್ದಾರೆ.

ಬೆಂಗಳೂರು, (ಜು.20):  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋದಿಂದ ನಾಯಕತ್ವ ಬದಲಾವಣೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರಿಂದ ಬಿಎಸ್‌ವೈ ಆಪ್ತರು ಸೈಲೆಂಟ್ ಆಗಿದ್ದಾರೆ.

'ಬಿಜೆಪಿ ಲಿಂಗಾಯತ ನಾಯಕರಿಗೆ ಹೈಕಮಾಂಡ್ ಭಯ, ಅದಕ್ಕೆ ಬಿಎಸ್‌ವೈಗೆ ಯಾರೂ ಬೆಂಬಲಿಸುತ್ತಿಲ್ಲ'

ಇದರ ಮಧ್ಯೆ ಸಚಿವರೊಬ್ಬರು ನೀಡಿದ ಜಾಹೀರಾತಿನಲ್ಲಿ ಮುಖ್ಯಮಂತ್ರಿಯನ್ನೇ ಮರೆತಿದ್ದಾರೆ. ಕಟೀಲ್ ಪ್ರಲ್ಹಾದ್ ಜೋಶಿ ಸೇರಿದಂತೆ ಕೆಲ ಬಿಜೆಪಿ ನಾಯಕರು ಜಾಹೀರಾತಿನಲ್ಲಿದ್ದಾರೆ. ಆದ್ರೆ, ಸಿಎಂ ಫೋಟೋ ಇರದಿರುವುದು ಚರ್ಚೆಗೆ ಗ್ರಾಸವಾಗಿದೆ.