Asianet Suvarna News Asianet Suvarna News

ಕೋಲಾರ ಕುರುಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಬ್ಬರ, ಪ್ರಜಾಧ್ವನಿ ಹೆಸರಲ್ಲಿ ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ!

ಕೋಲಾರದಲ್ಲಿ ಸಿದ್ಧರಾಮಯ್ಯ ಅವರಿಗೆ ಒಳೇಟಿನ ಆತಂಕ ಶುರುವಾಗಿದೆ. ದಲಿತ ವಿರೋಧಿಯಾಗಿರುವ ಸಿದ್ಧರಾಮಯ್ಯ ಅವರನ್ನು ಸೋಲಿಸಿ ಎಂದು ಅಭಿಯಾನ ಆರಂಭವಾಗಿರುವ ಬೆನ್ನಲ್ಲಿಯೇ, ಇಂದು ಅವರ ಬೆಂಬಲಿಗರು ದಲಿತರಾಮಯ್ಯ ಎಂದು ಕರಪತ್ರವನ್ನು ಜಿಲ್ಲೆಯ ಗೋಡೆಗೋಡೆಗಳಲ್ಲಿ ಅಂಟಿಸಿದ್ದಾರೆ. ಈ ನಡುವೆ ಕೋಲಾರದಲ್ಲಿ ಸಿದ್ಧರಾಮಯ್ಯ ಅವರ ವಾಸ್ತವ್ಯಕ್ಕೆ ಮನೆ ಕೂಡ ಫಿಕ್ಸ್‌ ಆಗಿದೆ.
 

ಬೆಂಗಳೂರು (ಜ.23): ದಲಿತ ವಿರೋಧಿಯಾಗಿರುವ ಸಿದ್ಧರಾಮಯ್ಯ ಅವರನ್ನು ಸೋಲಿಸಿ ಎಂದು ಕ್ಯಾಂಪೇನ್‌ ಆರಂಭವಾದ ಬೆನ್ನಲ್ಲಿಯೇ, ಇಂದು ಸಿದ್ಧರಾಮಯ್ಯ ಅವರು ದಲಿತರಾಮಯ್ಯ ಎನ್ನುವ ಕರಪತ್ರವನ್ನು ಅವರು ಚುನಾವಣೆಗೆ ನಿಲ್ಲುವ ಕ್ಷೇತ್ರ ಎಂದು ಕೇಳಲಾಗಿರುವ ಕೋಲಾರದ ಗೋಡೆ ಗೋಡೆಗಳ ಮೇಲೆ ಅಂಟಿಸಲಾಗಿದೆ.ಕರಪತ್ರದಲ್ಲಿ ದಲಿತರಿಗಾಗಿ ಸಿದ್ದು ತಂದ ಯೋಜನೆಗಳ ಪ್ರಸ್ತಾಪ ಮಾಡಲಾಗಿದೆ.

ಈ ನಡುವೆ ಕೋಲಾರದಲ್ಲಿ ಸಿದ್ದರಾಮಯ್ಯ ವಾಸ್ತವ್ಯಕ್ಕೆ ಮನೆ ಫಿಕ್ಸ್ ಆಗಿದೆ. ಕೋಲಾರ ಹೊರವಲಯದ ಕೋಗಿಲಹಳ್ಳಿಯಲ್ಲಿ ಮನೆ ನೋಡಲಾಗಿದೆ. ಸುಮಾರು ಒಂದು ಎಕರೆಯ ತೋಟದಲ್ಲಿರುವ ಭವ್ಯ ಮನೆ ಇದಾಗಿದೆ. ಕುರುಬರ ಪೇಟೆಯ ನಿವಾಸಿ ಶಂಕರ್ ಒಡೆತನದ ಮನೆ ಇದಾಗಿದ್ದು, 2018ರಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಈವರೆಗೂ ಯಾರಿಗೂ ಬಾಡಿಗೆ ಕೊಟ್ಟಿರಲಿಲ್ಲ. ಮನೆ ಮಾಲೀಕ ಶಂಕರ್‌, ಸಿದ್ಧರಾಮಯ್ಯ ಅವರ ಅಭಿಮಾನಿ. 1 ಎಕರೆಯಲ್ಲಿ 56 ಉದ್ದ, 46 ಅಗಲದ ವಿಸ್ತೀರ್ಣದ ಮನೆ ಇದಾಗಿದೆ. ಕೋಲಾರ ನಗರದಿಂದ ಕೋಗಿಲಹಳ್ಳಿಗೆ 1 ಕಿಮೀ ದೂರ ಆಗಲಿದೆ.

ಕೋಲಾರದಲ್ಲಿ ಸಿದ್ದುಗಾಗಿ ಮನೆ ಹುಡುಕಾಟ: ಇತ್ತ ಟಗರು ಬೇಟೆಗೆ ಕೇಸರಿ ಖೆಡ್ಡಾ

ಇನ್ನೊಂದೆಡೆ ಬೆಳಗಾವಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಯಾವ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ. ನಾನು ಭವಿಷ್ಯ ಹೇಳುತ್ತಿಲ್ಲ. ಸಿದ್ದು ಕೋಲಾರದಿಂದ ನಿಲ್ಲುವುದಿಲ್ಲ. ಡ್ರಾಮಾ ಮಾಡ್ತಿದ್ದಾರೆ,ಮೈಸೂರಿಗೆ ಬರೋಕೆ ಪ್ರಯತ್ನ ಮಾಡ್ತಿದ್ದಾರೆ. ಕೋಲಾರದಲ್ಲಿ ನಿಂತುಕೊಂಡರೆ ಮನೆಗೆ ಹೋಗುವುದು ನಿಶ್ಚಿತ. ಸುಮ್ಮನೆ ರಾಜಕೀಯ ಡೊಂಬರಾಟ.. ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Video Top Stories