Asianet Suvarna News Asianet Suvarna News

'ಬಲವಂತವಾಗಿ ಕೈ ಕಾರ್ಯಕರ್ತ ಎಂದು ಹೇಳಿಸಿದ್ದಾರೆ, RSS ಶಾಖಾ ಮೀಟಿಂಗ್‌ ಹೋಗಿದ್ದು ಯಾಕೆ?'

ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಸಂಪತ್‌ ಯಾವ ಪಾರ್ಟಿ ಎನ್ನುವ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ಸಂಪತ್ ಕಾಂಗ್ರೆಸ್ ಕಾರ್ಯಕರ್ತನೋ ಅಥವಾ ಬಿಜೆಪಿ ಕಾರ್ಯಕರ್ತನೋ ಎನ್ನುವ ಗೊಂದಲ ರಾಜ್ಯ ರಾಜಕಾರಣದಲ್ಲಿ ಇದೆ.

First Published Aug 21, 2022, 5:52 PM IST | Last Updated Aug 21, 2022, 5:52 PM IST

ಬೆಂಗಳೂರು, (ಆಗಸ್ಟ್.21): ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಸಂಪತ್‌ ಯಾವ ಪಾರ್ಟಿ ಎನ್ನುವ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ಸಂಪತ್ ಕಾಂಗ್ರೆಸ್ ಕಾರ್ಯಕರ್ತನೋ ಅಥವಾ ಬಿಜೆಪಿ ಕಾರ್ಯಕರ್ತನೋ ಎನ್ನುವ ಗೊಂದಲ ರಾಜ್ಯ ರಾಜಕಾರಣದಲ್ಲಿ ಇದೆ.

ಆತ ಕಾಂಗ್ರೆಸ್‌ ಕಾರ್ಯಕರ್ತನಾದ್ರೆ ಏಕೆ ಜೈಲಿಂದ ಬಿಡಿಸಿದ್ರಿ? ಯಾಕೆ ಆಸಕ್ತಿ? ಬಿಜೆಪಿಗೆ ತಿವಿದ ಮಹಾದೇವಪ್ಪ

ಇನ್ನು ಸಂಪತ್ ಬಿಜೆಪಿ ಕಾರ್ಯಕರ್ತ ಎನ್ನುವ ಬಗ್ಗೆ ಸಾಕಷ್ಟು ಫೋಟೋಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಆದ್ರೆ, ಬಿಜೆಪಿಯುವರು ಆತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳುತ್ತಿದ್ದಾರೆ.ಇನ್ನು ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, 'ಬಲವಂತವಾಗಿ ಕಾಂಗ್ರೆಸ್‌ ಕಾರ್ಯಕರ್ತ ಎಂದು ಹೇಳಿಸಿದ್ದಾರೆ; ಆರೆಸ್ಸೆಸ್‌ ಶಾಖಾ ಮೀಟಿಂಗ್‌ ಹೋಗಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.