Asianet Suvarna News Asianet Suvarna News

ನನ್ನದು ದುರಹಂಕಾರ ಅಲ್ಲ, ಸ್ವಾಭಿಮಾನ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ, ಕುಮಾರಸ್ವಾಮಿ ಅವರು ಸ್ವತಂತ್ರ  ರಾಜಕಾರಣ ಮಾಡಿ ಅಧಿಕಾರ ಹಿಡಿಯುತ್ತಾ ಬಂದಿದ್ದಾರೆ. ನನ್ನ ಮಾತನ್ನು ಅವರು ದುರಂಹಕಾರ ಅಂದರೆ ನಾನು ಅದನ್ನ ಸ್ವಾಭಿಮಾನ ಅಂತ ಹೇಳ್ತೇನೆ: ಸಂಸದೆ ಸುಮಲತಾ ಅಂಬರೀಶ್‌ 

First Published Apr 20, 2023, 10:11 PM IST | Last Updated Apr 20, 2023, 10:11 PM IST

ಮಂಡ್ಯ(ಏ.20): ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ರೆ ನೀವು ಸ್ಪರ್ಧೆ ಮಾಡಿ ಅಂತ ಬಿಜೆಪಿ ನನಗೆ ಹೇಳಿತ್ತು ಅಂತ ಸಂಸದೆ ಸುಮಲತಾ ಅಂಬರೀಶ್‌ ಅವರು ತಿಳಿಸಿದ್ದಾರೆ. ನಮ್ಮಲ್ಲೇ ಸಮರ್ಥ ಅಭ್ಯರ್ಥಿ ಇದ್ದಾರೆ, ಅವರನ್ನೇ ಕುಮಾರಸ್ವಾಮಿ ವಿರುದ್ಧ ಗೆಲ್ಲಿಸಬಹುದು ಅಂತ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ, ಕುಮಾರಸ್ವಾಮಿ ಅವರು ಸ್ವತಂತ್ರ  ರಾಜಕಾರಣ ಮಾಡಿ ಅಧಿಕಾರ ಹಿಡಿಯುತ್ತಾ ಬಂದಿದ್ದಾರೆ. ನನ್ನ ಮಾತನ್ನು ಅವರು ದುರಂಹಕಾರ ಅಂದರೆ ನಾನು ಅದನ್ನ ಸ್ವಾಭಿಮಾನ ಅಂತ ಹೇಳ್ತೇನೆ ಅಂತ ತಿಳಿಸಿದ್ದಾರೆ. 

ಎನ್‌.ಆರ್‌. ಸಂತೋಷ್‌ ಪರ ಎಚ್‌.ಡಿ. ದೇವೇಗೌಡ ಅಬ್ಬರದ ಪ್ರಚಾರ: ಎದೆತಟ್ಟಿ ಘರ್ಜಿಸಿದ ಮಾಜಿ ಪ್ರಧಾನಿ