ಕಾಂಗ್ರೆಸ್ ಸರ್ಕಾರ 50:50 ಒಪ್ಪಂದ ಸೀಕ್ರೆಟ್, ಅಂದರ್-ಬಾಹರ್ ಆಟದ ಸುಳಿವು ಕೊಟ್ಟ ಕೈ ಮಿನಿಸ್ಟರ್!

ಕಾಂಗ್ರೆಸ್ ಸರ್ಕಾರ ರಚನೆಯಾಗಿ ಮೂರು ತಿಂಗಳಿಗೆ ಹಲವು ಆರೋಪ, ಟೀಕೆ ಕೇಳಿಬರುತ್ತಿದೆ. ಕಮಿಷನ್ ಸರ್ಕಾರ ಆರೋಪದ ಬೆನ್ನಲ್ಲೇ ಇದೀಗ ಒಪ್ಪಂದ ಸೀಕ್ರೆಟ್ ಕೂಡ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಎರಡೂ ವರೆ ವರ್ಷ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರಾ? ಈ ಕುರಿತು ಸಚಿವ ಮನಿಯಪ್ಪ ನೀಡಿದ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.

First Published Aug 16, 2023, 3:15 PM IST | Last Updated Aug 16, 2023, 3:15 PM IST

ಬೆಂಗಳೂರು(ಆ.16) ಎರಡೂವರೆ ವರ್ಷ ಸಿದ್ದರಾಮಯ್ಯ, ಮುಂದಿನ ಎರಡೂವರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ. ಈ ಸೂತ್ರದಲ್ಲಿ ಕಾಂಗ್ರೆಸ್ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವಂತೆ ಸಚಿವ ಕೆ ಮುನಿಯಪ್ಪ ನೀಡಿದ ಹೇಳಿಕೆ ಬಿರುಗಾಳಿ ಎಬ್ಬಿಸಿದೆ. ಎರಡೂವರೆ ವರ್ಷಗಳ ನಂತ್ರ ಅಧಿಕಾರ ತ್ಯಾಗ ಮಾಡಬೇಕಿರೋದು ಮಂತ್ರಿಗಳಷ್ಟೇನಾ.? ಅಥವಾ ಇದ್ರಲ್ಲಿ ಸಿಎಂ-ಡಿಸಿಎಂ ಕೂಡ ಸೇರಿದ್ದಾರಾ..? ಅನ್ನೋ ಪ್ರಶ್ನೆ ಇದೀಗ ಎದ್ದಿದೆ.  ಅಧಿಕಾರ ತ್ಯಾಗದ ಮಾತೇ ನಿಜವಾದ್ರೆ, ಎರಡೂವರೆ ವರ್ಷಗಳ ನಂತರ ಸಚಿವರ ಸಂಪುಟದಿಂದ ಬಾಹರ್ ಆಗೋರು ಯಾರು..? ಅಂದರ್ ಆಗೋರು ಯಾರು..?