Asianet Suvarna News Asianet Suvarna News

ಬಸವನಗುಡಿಯಲ್ಲಿ ಹೆಚ್‌ಡಿಕೆ ಭರ್ಜರಿ ಮತಬೇಟೆ: ಅರಮನೆ ಶಂಕರ್ ಪರ ರೋಡ್‌ ಶೋ

ಬಸವನಗುಡಿಯಲ್ಲಿ ಹೆಚ್‌ಡಿಕೆ ಭರ್ಜರಿ ಮತಬೇಟೆ
ರೋಡ್‌ ಶೋ ಮೂಲಕ ಕುಮಾರಸ್ವಾಮಿ ಪ್ರಚಾರ
ಅರಮನೆ ಶಂಕರ್ ಪರ ಕುಮಾರಸ್ವಾಮಿ ರೋಡ್ ಶೋ
 

First Published May 8, 2023, 2:30 PM IST | Last Updated May 8, 2023, 2:30 PM IST

ಬೆಂಗಳೂರು: ಇಂದು ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾಗಿದೆ. ಈ ಹಿನ್ನೆಲೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಜೆಡಿಎಸ್‌ ಅಭ್ಯರ್ಥಿ ಅರಮನೆ ಶಂಕರ್‌ ಪರ ರೋಡ್‌ ಶೋ ಮಾಡುತ್ತಿದ್ದಾರೆ. ರೋಡ್‌ ಶೋ ವೇಳೆ ಹೆಚ್‌ಡಿಕೆಗೆ ಅಭಿಮಾನಿಗಳು ವಿಶೇಷವಾಗಿ ಬೆಲ್ಲದಿಂದ ತಯಾರಾದ ಹಾರವನ್ನು ಹಾಕಿದರು. ಈ ವೇಳೆ ಹೆಚ್‌ಡಿಕೆ ಮಾತನಾಡಿದ್ದು, ಈ ಬಾರಿ ಚುನಾವಣೆಯಲ್ಲಿ ಜನ ಜೆಡಿಎಸ್‌ ಪರವಾಗಿ ಇದ್ದಾರೆ.  ನಮ್ಮ ನಿರೀಕ್ಷೆ 123 ಗುರಿಯನ್ನು ಮುಟ್ಟುವುದಾಗಿದೆ. ಕಾಂಗ್ರೆಸ್‌ನ ಮಹಾ ನಾಯಕರು ಜೆಡಿಎಸ್‌ 20 ರಿಂದ 23 ಸೀಟ್‌ ಗೆಲ್ಲಲಿದೆ ಎಂದು ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಅದನ್ನು ಧಿಕ್ಕರಿಸಿ ನಾಡಿನ ಜನತೆ ಜೆಡಿಎಸ್‌ಗೆ 123 ಸ್ಥಾನವನ್ನು ನೀಡಲಿದ್ದಾರೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಬಿಎಂಟಿಸಿ ಬಸ್‌ನಲ್ಲಿ ರಾಹುಲ್‌ ಗಾಂಧಿ ರೌಂಡ್ಸ್‌: ಪ್ರಯಾಣಿಕರ ಜೊತೆ ಸಂವಾದ