Asianet Suvarna News Asianet Suvarna News

suvarna focus:ಟಿಕೆಟ್‌ ಘೋಷಣೆಗೂ ಮುನ್ನ ಕಣದಿಂದ ಹಿಂದೆ ಸರಿದ ಹಿರಿಯ ನಾಯಕರು..!

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆಗೂ ಮುನ್ನವೇ ಕೆಲವು ಹಾಲಿ ಶಾಸಕರು ತಮಗೆ ಟಿಕೆಟ್‌ ಸಿಗುವುದಿಲ್ಲವೆಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದಾರೆ.

First Published Apr 12, 2023, 6:08 PM IST | Last Updated Apr 12, 2023, 6:08 PM IST

ಬೆಂಗಳೂರು (ಏ.12):  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆಗೂ ಮುನ್ನವೇ ಕೆಲವು ಹಾಲಿ ಶಾಸಕರು ತಮಗೆ ಟಿಕೆಟ್‌ ಸಿಗುವುದಿಲ್ಲವೆಂದು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರವನ್ನು ಹಿಡಿಯಲೇಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದ್ದು, ಗುಜರಾತ್‌ ಮಾಡೆಲ್‌ ಮೂಲಕ ಟಿಕೆಟ್‌ ಹಂಚಿಕೆಗೆ ಮುಂದಾಗಿದೆ.

ಈ ಮಾದರಿಯಲ್ಲಿ 70 ವರ್ಷ ಮೀರಿದವರಿಗೆ ಟಿಕೆಟ್‌ ನೀಡದಿರಲು ಮುಂದಾಗಿದೆ. ಈ ಗುಜರಾತ್‌ ಮಾಡೆಲ್‌ ಸೂತ್ರಕ್ಕೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಬೆಚ್ಚಿ ಬಿದ್ದಿದ್ದಾರೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡುವುದು ಹಾಗೂ ಹಾಲಿ ಶಾಸಕರಲ್ಲಿ ಎಷ್ಟು ಜನರನ್ನು ಹೊರಗಿಡಬೇಕು ಎಂದು ಚರ್ಚಿಸಿ ಈಗ ನಿರ್ಧಾರ ಕೈಗೊಂಡಿದೆ. ಈಗಾಗಲೇ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಹಾಲಾಡಿ ಶ್ರೀನಿವಾಸಶೆಟ್ಟಿ, ಎಸ್.ಎ. ರವೀಂದ್ರನಾಥ್, ಎಸ್. ಅಂಗಾರ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

Video Top Stories