Asianet Suvarna News Asianet Suvarna News

ದರ್ಶನ್ ಜಾಮೀನಿಗಾಗಿ ವಕೀಲರ ವಾದ, ಬಳ್ಳಾರಿ ಜೈಲಿನಲ್ಲಿರುವ ನಟನಿಗೆ ಸಿಗುತ್ತಾ ಬೇಲ್?

ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಇತ್ತ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ನಾಳೆ ದರ್ಶನ್ ಬೇಲ್ ಭವಿಷ್ಯ ಗೊತ್ತಾಗಲಿದೆ.

First Published Oct 4, 2024, 11:16 PM IST | Last Updated Oct 4, 2024, 11:16 PM IST

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ಈ ವೇಳೆ ಚಾರ್ಜ್‌ಶೀಟ್‌ನಲ್ಲಿರುವ ತಪ್ಪುಗಳನ್ನು ಕೋರ್ಟ್ ಮುಂದಿಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ್ ಪಾತ್ರವಿಲ್ಲ. ಕೊಲೆ ಮಾಡಿದವರು ದರ್ಶನ್ ಅಭಿಮಾನಿಗಳು ಎಂದು ವಾದ ಮಂಡಿಸಿದ್ದಾರೆ. ಇಷ್ಟೇ ಅಲ್ಲ ಪೊಲೀಸರು ಘಟನಾ ಸ್ಥಳದಿಂದ ಜಪ್ತಿ ಮಾಡಿರುವ ವಸ್ತುಗಳ ದಿನಾಂಕದಲ್ಲಿ ವ್ಯತ್ಯಾಸಗಳಿವೆ ಎಂದು ವಕೀಲರು ಹೇಳಿದ್ದಾರೆ. ನಾಗೇಶ್ ಅವರ ವಾದವೇನು? ದರ್ಶನ್‌ಗೆ ಜಾಮೀನು ಸಿಗುತ್ತಾ?
 

Video Top Stories