Asianet Suvarna News Asianet Suvarna News

ಡಿಕೆಗೆ ಚೆಕ್‌ಮೇಟ್ ಇಡಲು ಸಿದ್ಧವಾಗ್ತಿದ್ಯಾ 'ಸಾಹುಕಾರ' ವ್ಯೂಹ? ತ್ರಿವಳಿ ಮಂತ್ರಿಗಳ ನಿಗೂಢ ಹೆಜ್ಜೆ

ಸಿದ್ದರಾಮಯ್ಯಗೆ ಮುಡಾ ಸಂಕಷ್ಟ. ಕಾಂಗ್ರೆಸ್'ನಲ್ಲಿ ಶುರುವಾಗಿದೆ ರಣರೋಚಕ ಆಟ. ತೆರೆಯ ಮುಂದೆ ಸ್ನೇಹದ ಬಲೆ, ತೆರೆಯ ಹಿಂದೆ ಕಣ್ಣಾ ಮುಚ್ಚಾಲೆ. ಚದುರಂಗದಲ್ಲಿ ಡಿಸಿಎಂ ಡಿಕೆಶಿಗೆ ಚೆಕ್'ಮೇಟ್ ಇಡಲು ಸಿದ್ಧವಾಗ್ತಿದ್ಯಾ ದಲಿತ ಮಂತ್ರಿಗಳ ರಣರೋಚಕ ವ್ಯೂಹ? ದೆಹಲಿಯಲ್ಲಿ ಸಾಹುಕಾರನ ಇಂಟ್ರೆಸ್ಟಿಂಗ್ ಆಟ, ಬೆಳಗಾವಿಯ ಬಿಂಕದ ನಾಯಕ ಅಂಕಣದಲ್ಲಿ ಆಡ್ತಿರೋದು ಪಗಡೆಯಾಟ? ಕಾಂಗ್ರೆಸ್ ಅಧಿನಾಯಕನನ್ನು ಹೈಕಮಾಂಡ್ ಒಡ್ಡೋಲಗದಲ್ಲಿ ಭೇಟಿಯಾಗಿದ್ದು ಅದೇ ಕಾರಣಕ್ಕಾ? ಸಿದ್ದರಾಮಯ್ಯ ಪದತ್ಯಾಗ ಮಾಡಿದ್ರೆ, ಆ ದಲಿತ ನಾಯಕನೇ ಸಿಎಂ ಆಗೋದು ಗ್ಯಾರಂಟಿನಾ? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಹಾವು ಏಣಿ ಆಟ.

First Published Oct 5, 2024, 10:22 AM IST | Last Updated Oct 5, 2024, 10:22 AM IST

ಜಗ್ಗಲ್ಲ, ಬಗ್ಗಲ್ಲ ಅಂತಿದ್ದಾರೆ ಸಿದ್ದರಾಮಯ್ಯ. ಆದ್ರೆ ಸಿಂಹಾಸನವಂತೂ ಅಲುಗಾಡ್ತಾ ಇದೆ. ಮುಡಾ ಕಳಂಕ ಮೆತ್ತಿಕೊಂಡಿರೋ ಸಿದ್ದರಾಮಯ್ಯನವರ ಕುರ್ಚಿಗೇ ಕಂಟಕ ಎದುರಾಗಿ ಬಿಟ್ರೆ, ಆಗ ಕಾಂಗ್ರೆಸ್"ನಲ್ಲಿ ದೊಡ್ಡ ಪಟ್ಟ ಕಾಳಗವೇ ನಡೆಯಲಿದೆ. ಆ ಪಟ್ಟ ತಮ್ಮಲ್ಲಿ ಯಾರಿಗಾದ್ರೂ ಸಿಗ್ಬೇಕು ಅಂತ ತ್ರಿವಳಿ ಮಂತ್ರಿಗಳು ಆಟ ಶುರು ಮಾಡಿದ್ದಾರೆ. ಅಷ್ಟಕ್ಕೂ ಈ ತ್ರಿಮೂರ್ತಿಗಳ ಟಾರ್ಗೆಟ್ ಯಾರು? ಈ ಹಾವು ಏಣಿ ಆಟದ ಅಸಲಿ ರಹಸ್ಯ ಇಲ್ಲಿದೆ ನೋಡಿ

Video Top Stories