Asianet Suvarna News Asianet Suvarna News

ಸಮಂತಾ ಬೆಂಬಲಕ್ಕೆ ನಿಂತ ಟಾಲಿವುಡ್ ಸ್ಟಾರ್ಸ್: ಕೊಂಡ ಸುರೇಖಾ ವಿರುದ್ದ ಇನ್ನೂ ಸಹಿಸೋದಿಲ್ಲ ಎಂದು ಕಿಡಿ

ತೆಲಂಗಾಣ ಸಚಿವೆ ಕೊಂಡ ಸುರೇಖಾ ತೆಲುಗು ನಟಿಯರ ಬಗ್ಗೆ ಕೊಟ್ಟಿದ್ದ ಹೇಳಿಕೆ ಟಾಲಿವುಡ್​ನಲ್ಲಿ ಅದೆಂಥಾ ಬಿರುಗಾಳಿ ಎಬ್ಬಿಸಿದೆ ಅನ್ನೋದು ನಿಮಗೆ ಗೊತ್ತೇ ಇದೆ. ರಾಜಕೀಯದಾಟದಲ್ಲಿ ಸಿನಿಮಾ ತಾರೆಯರನ್ನ ಎಳೆದು ತಂದಿದ್ದಕ್ಕೆ ಇಡೀ ತೆಲುಗು ಚಿತ್ರರಂಗ ಕಿಡಿಕಿಡಿಯಾಗಿದೆ. 

First Published Oct 5, 2024, 10:01 AM IST | Last Updated Oct 5, 2024, 10:01 AM IST

ತೆಲಂಗಾಣ ಸಚಿವೆ ಕೊಂಡ ಸುರೇಖಾ ತೆಲುಗು ನಟಿಯರ ಬಗ್ಗೆ ಕೊಟ್ಟಿದ್ದ ಹೇಳಿಕೆ ಟಾಲಿವುಡ್​ನಲ್ಲಿ ಅದೆಂಥಾ ಬಿರುಗಾಳಿ ಎಬ್ಬಿಸಿದೆ ಅನ್ನೋದು ನಿಮಗೆ ಗೊತ್ತೇ ಇದೆ. ರಾಜಕೀಯದಾಟದಲ್ಲಿ ಸಿನಿಮಾ ತಾರೆಯರನ್ನ ಎಳೆದು ತಂದಿದ್ದಕ್ಕೆ ಇಡೀ ತೆಲುಗು ಚಿತ್ರರಂಗ ಕಿಡಿಕಿಡಿಯಾಗಿದೆ. ಟಿ ಟೌನ್​​ನ ಬಿಗ್ ಸ್ಟಾರ್ಸ್ ಈ ಬಗ್ಗೆ ರಿಯ್ಯಾಕ್ಟ್ ಮಾಡಿದ್ದು ಇದನ್ನ ಸಹಿಸಲ್ಲ ಅನ್ನೋ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇತ್ತೀಚಿಗೆ ತೆಲಂಗಾಣದ ಅರಣ್ಯ ಸಚಿವೆಯಾಗಿರೋ ಕೊಂಡ ಸುರೇಖಾ ಕೊಟ್ಟ ಹೇಳಿಕೆ ವಿರುದ್ದ ಇಡೀ ತೆಲುಗು ಚಿತ್ರರಂಗ ತಿರುಗಿ ಬಿದ್ದಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಟಿ.ರಾಮ್​ರಾವ್ ವಿರುದ್ದ ಆಪಾದನೆ ಮಾಡಿದ್ದ ಕೊಂಡ ಸುರೇಖಾ , ಹಲವು ತೆಲುಗು ನಟಿಯರಿಗೆ KTR ಜೊತೆ ನಂಟಿದೆ ಅನ್ನೋ ಆರೋಪ ಮಾಡಿದ್ರು. 

ಅಷ್ಟೇ ಅಲ್ಲ ಸಮಂತಾ ನಾಗಚೈತನ್ಯ ಡಿವೋರ್ಸ್​​ಗೂ KTR ಕಾರಣ ಅಂತ ಹೇಳಿಕೆ ಕೊಟ್ಟಿದ್ದ ಕೊಂಡ ಸುರೇಖಾ, ಸಮಂತಾಳನ್ನ KTR ಬಳಿ ಹೋಗುವಂತೆ ಖುದ್ದು ನಾಗಾರ್ಜುನ್ ಒತ್ತಾಯ ಮಾಡಿದ್ರು ಅಂತೆಲ್ಲಾ ಡ್ಯಾಮೇಜಿಂಗ್ ಸ್ಟೇಟ್​ಮೆಂಟ್ ಕೊಟ್ಟಿದ್ರು.ಯಾವಾಗ ಈ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತವಾಯ್ತೋ ಕೊಂಡ ಸುರೇಖಾ ಕ್ಷಮೆ ಕೇಳಿದ್ದಾರೆ. ತನ್ನ ಹೇಳಿಕೆ ವಾಪಾಸ್ ಪಡೀತೀನಿ ಅಂತಲೂ ಹೇಳಿದ್ದಾರೆ. ಆದ್ರೆ ಈ ಹೇಳಿಕೆ ಸೃಷ್ಟಿಸಿದ ಡ್ಯಾಮೇಜ್ ಅನ್ನಂತೂ ಸರಿಪಡಿಸೋಕೆ ಸಾಧ್ಯವೇ ಇಲ್ಲ. ಅಂತೆಯೇ ಈ ಕುರಿತು ಟಾಲಿವುಡ್ ಸ್ಟಾರ್ಸ್ ಆಕ್ರೋಶ ವ್ಯ್ತಪಡಿಸ್ತಾ ಇದ್ದಾರೆ. ರಾಜಕೀಯದಾಟದಲ್ಲಿ ಸಮಂತಾರನ್ನ ಎಳೆದು ತಂದು ಆಕೆಯ ಮಾನಹಾನಿ ಮಾಡಿದ್ದರ ವಿರುದ್ದ ಟಾಲಿವುಡ್ ಸ್ಟಾರ್ಸ್ ಗರಂ ಆಗಿದ್ದಾರೆ. ಪ್ರತಿಬಾರಿ ರಾಜಕೀಯ ಕೆಸರೆರಚಾಟದಲ್ಲಿ ಸಿನಿತಾರೆಯರನ್ನ ಎಳೆದುತಂದು  ಅವರ ಗೌರವಕ್ಕೆ ಧಕ್ಕೆ ತರಬೇಡಿ ಅಂತ ವಾರ್ನ್ ಮಾಡಿದ್ದಾರೆ. 

ಮೆಗಾಸ್ಟಾರ್ ಚಿರಂಜೀವಿ, NTR, ಅಲ್ಲು ಅರ್ಜುನ್, ನಾನಿ ಸೇರಿದಂತೆ ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ "ಫಿಲ್ಮ್ ಇಂಡಸ್ಟ್ರಿ ವಿಲ್ ನಾಟ್ ಟೊಲರೇಟ್" ಅನ್ನೋ ಹ್ಯಾಶ್ ಟ್ಯಾಗ್ ದೇಶಾದ್ಯಂತ ಟ್ರೆಂಡ್ ಆಗಿದೆ. ಇನ್ನೂ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಈ ಬಗ್ಗೆ ಮಾತನಾಡಿ ನಿಮ್ಮ ರಾಜಕೀಯದಾಟದಲ್ಲಿ ನಮ್ಮನ್ನ ಎಳೆತರಬೇಡಿ ಎಂದಿದ್ದಾರೆ. ಸ್ಟಾರ್ ಡೈರೆಕ್ಟರ್ ರಾಜಮೌಳಿ ಕೂಡ ಸಮಂತಾ ಬೆಂಬಲಕ್ಕೆ ನಿಂತಿದ್ದಾರೆ. ಒಟ್ಟಾರೆ ಈ ಸಾರಿ ಚಿತ್ರರಂಗ , ರಾಜಕೀಯ ನಾಯಕರ ಕೀಳು ಅಭಿರುಚಿಯ ಮಾತುಗಳಿಗೆ  ಸರಿಯಾದ ಪ್ರತಿಕ್ರಿಯೆಯನ್ನೇ ಕೊಟ್ಟಿದೆ. ಇನ್ಮುಂದೆ ಸಿನಿಮಾದವರ ಬಗ್ಗೆ ಮಾತನಾಡೋ ಮುನ್ನ ಎಚ್ಚರ ಇರಲಿ ಅಂತ ಖಡಕ್ ವಾರ್ನಿಂಗ್ ಮಾಡಿದೆ.

Video Top Stories