Asianet Suvarna News Asianet Suvarna News

ಕಾಂಗ್ರೆಸ್‌ನಿಂದ ಬೃಹತ್‌ ಸರಣಿ ಸಮಾವೇಶ: ಕ್ಷೇತ್ರವಾರು ಪ್ರತ್ಯೇಕ ಯಾತ್ರೆಗೆ 'ಹೈಕಮಾಂಡ್‌' ಅಸ್ತು

ವಿಜಯಪುರದಲ್ಲಿ ಕೃಷ್ಣಾ ನದಿ ಪಾತ್ರದ ಅನ್ಯಾಯದ ಬಗ್ಗೆ ಡಿಸೆಂಬರ್‌ 30ರಂದು ಸಮಾವೇಶ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
 

ಕಾಂಗ್ರೆಸ್‌ನಿಂದ ಬೃಹತ್‌ ಸರಣಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಈ ಕುರಿತು ಹೈಕಮಾಂಡ್‌ ಸಭೆಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ 30 ರಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಕೈ ಒಗ್ಗಟ್ಟಿನ ಮಂತ್ರ ಇದಾಗಿದ್ದು, ಜಾತಿಗಳ ಮೀಸಲಾತಿ ಹೋರಾಟದ ಬಗ್ಗೆ ಗಮನಹರಿಸಿ ಪ್ರತ್ಯೇಕವಾಗಿ ಎಲ್ಲಾ ಸಮುದಾಯಗಳ ಹೋರಾಟ, ರ್ಯಾಲಿ ನಡೆಸಲಾಗುವುದು ಎಂದು ಡಿಕೆಶಿ ಹೇಳಿದರು. ಇದರಿಂದ ಎಲ್ಲಾ ಸಮುದಾಯಗಳನ್ನು ತಲುಪಬಹುದು ಎಂದು ಹೈಕಮಾಂಡ್ ಸಲಹೆ ನೀಡಿದೆ. ಒಗ್ಗಟ್ಟಾಗಿ ಒಂದೇ ತಂಡವಾಗಿ ಬಸ್‌ ಯಾತ್ರೆಗೆ ಸೂಚನೆ ನೀಡಿದ್ದು,  ಕ್ಷೇತ್ರವಾರು ಪ್ರತ್ಯೇಕ ಯಾತ್ರೆಗೆ ಹೈಕಮಾಂಡ್‌ ಅಸ್ತು ಎಂದಿರುವುದಾಗಿ ಅವರು ತಿಳಿಸಿದ್ದಾರೆ.

ಟಿಕೆಟ್‌ ಕೊಟ್ರೆ ಬಿಜೆಪಿಯಿಂದ, ಇಲ್ದಿದ್ರೆ ಪಕ್ಷೇತರನಾಗಿ ಸ್ಪರ್ಧೆ: ಗೂಳಿಹಟ್ಟಿ ಶೇಖರ್‌ ಖಡಕ್‌ ನುಡಿ