'ಯಾರಿಗೆಲ್ಲ ಟಿಕೆಟ್ ನೀಡಿದ್ದಾರಪ್ಪ..?' ಪತ್ರಕರ್ತರನ್ನೇ ಪ್ರಶ್ನಿಸಿದ ಯಡಿಯೂರಪ್ಪ!
ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾದ ಬಗ್ಗೆ ಮಾಧ್ಯಮದವರು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಕೇಳಲು ದೌಡಾಯಿಸಿದ್ದರು. ಆದರೆ, ಬಿಎಸ್ವೈ ಮಾಧ್ಯಮವರಿಗೆ ಫುಲ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ.
ಬೆಂಗಳೂರು (ಏ.17): ಬಿಜೆಪಿ ಇಂದು ವಿಧಾನಸಭೆ ಚುನಾವಣೆಗೆ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಕುರಿತಾಗಿ ಮಾಧ್ಯಮದವರು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಕೇಳಲು ಮೈಕ್ ಹಿಡಿದಿದ್ದರು. ಆದರೆ, ಮಾಧ್ಯಮದವರಿಗೆ ಅಚ್ಚರಿ ಎನ್ನುವಂತೆ, 'ಯಾರಿಗೆಲ್ಲಾ ಟಿಕೆಟ್ ನೀಡಿದ್ದಾರಪ್ಪ..?' ಎಂದು ಮಾಧ್ಯಮದವರಿಗೆ ಯಡಿಯೂರಪ್ಪ ಪ್ರಶ್ನೆ ಮಾಡಿದರು. ಸರ್ ನಿಮಗೆಲ್ಲಾ ಗೊತ್ತರುತ್ತೆ ಹೇಳಿ ಸರ್ ಎಂದಾಗ, ಪತ್ರಕರ್ತರೊಬ್ಬರ ಮೊಬೈಲ್ ಪಡೆದು ಅಭ್ಯರ್ಥಿಗಳ ಮೂರನೇ ಲಿಸ್ಟ್ ನೋಡಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?