ಮದ್ದೂರು ಕಾಂಗ್ರೆಸ್‌ನಲ್ಲಿ ಬಂಡಾಯ: ಗುರುಚರಣ್‌ ಜೆಡಿಎಸ್‌ಗೆ ಸೇರ್ಪಡೆ

ಕಾಂಗ್ರೆಸ್‌ಗೆ ಕೈಕೊಟ್ಟ ಟಿಕೆಟ್‌ ಆಕಾಂಕ್ಷಿ ಗುರುಚರಣ್‌ 
ಸೋಮನಹಳ್ಳಿ ನಿವಾಸದಲ್ಲಿ ಜೆಡಿಎಸ್‌ಗೆ ಸೇರ್ಪಡೆ
ಉದಯ್‌ಗೌಡಗೆ ಟಿಕೆಟ್‌ ನೀಡಿದ್ದಕ್ಕೆ ಅಸಮಾಧಾನ

First Published Apr 20, 2023, 3:34 PM IST | Last Updated Apr 20, 2023, 3:34 PM IST

ಮಂಡ್ಯ: ಕಾಂಗ್ರೆಸ್‌ ಮದ್ದೂರು ಕ್ಷೇತ್ರದ ಅಭ್ಯರ್ಥಿಯಾಗಿ ಉದಯ್‌ಗೌಡಗೆ ಟಿಕೆಟ್‌ ನೀಡಿದೆ. ಇದರಿಂದ ಅಸಮಾಧಾನಗೊಂಡ ಟಿಕೆಟ್‌ ಆಕಾಂಕ್ಷಿ ಗುರುಚರಣ್‌ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದಾರೆ. ಇವರು ಎಸ್‌.ಎಂ.ಕೃಷ್ಣ ಅವರ ಅಣ್ಣನ ಮಗನಾಗಿದ್ದಾರೆ. ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಸೋಮನಹಳ್ಳಿ ನಿವಾಸದಲ್ಲಿ ಜೆಡಿಎಸ್‌ಗೆ ಸೇರಿದ್ದಾರೆ. ಗುರುಚರಣ್‌ ಸೇರ್ಪಡೆ ಬಳಿಕ ಕುಮಾರಸ್ವಾಮಿ ಮಾತನಾಡಿ, ಮೊದಲಿನಿಂದಲೂ ತಮ್ಮಣ್ಣ ಮತ್ತು ಗುರುಚರಣ್‌ ಬೇರೆ ಬೇರೆ ಪಕ್ಷದಿಂದ ಹೋರಾಟ ಮಾಡಿದ್ದಾರೆ. ಇವತ್ತು ಇವರು ಜೆಡಿಎಸ್‌ಗೆ ಸೇರ್ಪಡೆ ಆಗಿ, ಜೆಡಿಎಸ್‌ ಅಭ್ಯರ್ಥಿ ತಮ್ಮಣ್ಣ ಅವರ ಗೆಲುವಿಗೆ ಶ್ರಮಿಸಲಿದ್ದಾರೆ.  

ಇದನ್ನೂ ವೀಕ್ಷಿಸಿ: ಹೊಳೆನರಸೀಪುರದಲ್ಲಿ ರೇವಣ್ಣ V/s ಪ್ರೀತಂಗೌಡ?

Video Top Stories