ಆಪ್ತಮಿತ್ರರ ಮಧ್ಯೆ ಮತ್ತೆ ರಾಜಕೀಯ ವೈರತ್ವ: ಏನಿದು “ಚಾಮುಂಡಿ” ಗೆಳೆಯರ ದೋಸ್ತಿ.. ದುಷ್ಮನಿ ಕಹಾನಿ..?

ಒಮ್ಮೆ ದೋಸ್ತಿ..ಮತ್ತೊಮ್ಮೆ ಕುಸ್ತಿ..ಇದು ಸ್ನೇಹಿತರ ಸವಾಲ್!
ಸಿದ್ದು ಕಿಚ್ಚು ಮಾತಿಗೆ ರೊಚ್ಚಿಗೆದ್ದ ಕುಚಿಕೂ ದೋಸ್ತ್..!
ಏನಿದು “ಚಾಮುಂಡಿ” ಗೆಳೆಯರ ದೋಸ್ತಿ,ದುಷ್ಮನಿ ಕಹಾನಿ?

First Published Sep 4, 2023, 2:35 PM IST | Last Updated Sep 4, 2023, 2:35 PM IST

ಅವ್ರಿಬ್ರೂ ಚಾಮುಂಡಿ ಅಖಾಡದ ಹಳೇ ಪೈಲ್ವಾನ್‌ಗಳು. ಅವ್ರಿಬ್ರ ಮಧ್ಯೆ ಇದ್ದದ್ದು ರಾಮ-ಲಕ್ಷ್ಮಣರಂಥಾ ಬಾಂಧವ್ಯ. ದೋಸ್ತಿ ಬೆಸೆದ ಆಪ್ತಮಿತ್ರರಾದವ್ರು ದುಷ್ಮನ್‌ಗಳಾದ್ರು. ದುಷ್ಮನಿ ಜಾಗದಲ್ಲಿ ಮತ್ತೆ ದೋಸ್ತಿ, ಮತ್ತೆ ಕುಸ್ತಿ. ಇದು ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಜೆಡಿಎowda) ದೋಸ್ತಿ-ಕುಸ್ತಿಯ ಅಸಲಿ ಕಥೆ.ಸ್ ಶಾಸಕ ಜಿ.ಟಿ ದೇವೇಗೌಡರ(JDS MLA GT Deveg ಕುಚಿಕೂ ದೋಸ್ತಿಗಳ ಮಧ್ಯೆ ಕುಸ್ತಿಗೆ ಕಾರಣವಾಯ್ತು ಸಿದ್ದು ಕಿಚ್ಚು ಮಾತು. ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ್ರು ಒಟ್ಟೊಟ್ಟಿಗೇ ರಾಜಕಾರಣ ಶುರು ಮಾಡಿದವರು. ಇವ್ರಿಬ್ರ ಮಧ್ಯೆ ಸ್ನೇಹವೂ ಇದೆ, ಸೇಡಿನ ಯುದ್ಧವೂ ಇದೆ. ದೋಸ್ತಿಯೂ ಇದೆ, ದುಷ್ಮನಿಯೂ ಇದೆ. ಒಮ್ಮೆ ಒಂದೇ ದೋಣಿಯಲ್ಲಿ ಕೂತು ಪ್ರಯಾಣ ಮಾಡ್ತಾರೆ.. ಸೀನ್ ಕಟ್ ಮಾಡಿದ್ರೆ ನೀನಾ-ನಾನಾ ಅಂತ ಒಬ್ಬರಿಗೊಬ್ರು ಸವಾಲ್ ಹಾಕಿ ನಿಲ್ತಾರೆ. ಮೊನ್ನೆ ಮೊನ್ನೆಯವರೆಗೆ ನಾನು-ನೀನು ಕುಚಿಕೂ ದೋಸ್ತ್'ಗಳಂತಿದ್ದವರ ಮಧ್ಯೆ ಈಗ ಹೊಸ ದುಷ್ಮನಿ ಶುರುವಾಗಿದೆ.  ಆ ದುಷ್ಮನಿಗೆ ಕಾರಣವಾಗಿರೋದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲ ದಿನಗಳ ಹಿಂದೆ ಚಾಮುಂಡೇಶ್ವರಿ(Chamundeshwari) ಅಖಾಡದಲ್ಲಿ ನಿಂತು ಆಡಿರೋ ಅದೊಂದು ಮಾತು.

ಇದನ್ನೂ ವೀಕ್ಷಿಸಿ:  ಅವಧಿಪೂರ್ವ ಚುನಾವಣೆ ನಡೆದುಬಿಡುತ್ತಾ..? ಅಧಿವೇಶನದಲ್ಲಿ ಸಮರ ಘೋಷ?! ಏನಿದು ರಹಸ್ಯ?