Asianet Suvarna News Asianet Suvarna News

Suvarna Focus: ಆಕಾಶ ಮಾರ್ಗ ಅವಘಡ ರಹಸ್ಯ!

ಆಕಾಶ ಮಾರ್ಗದಲ್ಲಿ ಡಿಕೆಶಿಗೆ ಎದುರಾಯ್ತು ಅಪಾಯ !
ಅವಘಡ ತಪ್ಪಿದ ಬೆನ್ನಲ್ಲೇ ಅಜ್ಜಯ್ಯನ ಮೊರೆ ಹೋದ ಡಿಕೆಶಿ
ಇದು ಶುಭ ಸೂಚನೆಯೋ, ಅಶುಭದ ಸಂಕೇತವೋ ?
 

ಡಿ.ಕೆ. ಶಿವಕುಮಾರ್‌ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಅವರ ಹೆಲಿಕಾಪ್ಟರ್‌ಗೆ ಹದ್ದೊಂದು ಡಿಕ್ಕಿ ಹೊಡೆದಿತ್ತು. ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಡಿಕೆಶಿ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಜಕ್ಕೂರಿನಿಂದ ಹೆಲಿಕಾಪ್ಟರ್‌ ಟೇಕಾಫ್‌ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಹೆಲಿಕಾಪ್ಟರ್‌ ಮುಂದಿನ ಗಾಜು ಪುಡಿ ಪುಡಿಯಾಗಿದೆ.ಕೂಡಲೇ ಎಚ್ಚೆತ್ತ ಪೈಲಟ್‌ ಹೆಲಿಕಾಪ್ಟರ್‌ನನ್ನು ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಘಟನೆ ನಡೆದ ತಕ್ಷಣ ಡಿಕೆಶಿ ನೊಣವಿನ ಕೆರೆ ಅಜ್ಜಯ್ಯನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್‌ ಮಾಡುವುದಾಗಿ ಘೋಷಿಸಿದ್ದಕ್ಕೆ ಹೀಗೆಲ್ಲಾ ಆಯ್ತು ಎಂಬುದು ಕೆಲವರ ವಾದವಾಗಿದೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ಗೆ ಕಂಟಕವಾಗುತ್ತಾ ಆ 4 ತಪ್ಪುಗಳು ?: ಕೈ ಎಡವಟ್ಟು, ಬಿಜೆಪಿಗೆ ಭಜರಂಗಿ ಅಸ್ತ್ರ !

Video Top Stories