ರೌಡಿಸಂ ನಿಲ್ಲಿಸಿ ಎಂದ ಡಾ. ಸುಧಾಕರ್‌ಗೆ ಶಾಸಕ ಪ್ರದೀಪ್‌ ಈಶ್ವರ್‌ ತಿರುಗೇಟು!

ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಶಾಸಕ ಡಾ. ಕೆ ಸುಧಾಕರ್ ಜಗಳ ಜೋರಾಗಿದೆ. ರೌಡಿಸಂ ನಿಲ್ಲಿಸಿಸಿ ಎಂದು ಕೆ ಸುಧಾಕರ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ
 

First Published Jul 29, 2023, 7:24 PM IST | Last Updated Jul 29, 2023, 7:24 PM IST

ಚಿಕ್ಕಬಳ್ಳಾಪುರ(ಜು.29) ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಶಾಸಕ ಡಾ.ಕೆ ಸುಧಾಕರ್ ವಾಕ್ಸಮರ ಜೋರಾಗಿದೆ. ಪಕ್ಷೇತ್ರರಾಗಿ ಸ್ಪರ್ಧಿಸಿ ಯಾರು ಗೆಲ್ಲುತ್ತಾರೆ ನೋಡೋಣ. ನಿಮ್ಮ ರೌಡಿಸಂ ಎಲ್ಲಾ ನಿಲ್ಲಿಸಿ ಎಂದು ಕೆ ಸುಧಾಕರ್ ವಾರ್ನಿಂಗ್ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರದೀಪ್ ಈಶ್ವರ್, ನಿಮ್ಮ ಬೆಂಬಲಿಗರನ್ನೇ ಜೈಲಿಗೆ ಹಾಕಿರುವ ನೀವು ಯಾವ ನಾಯಕ ಎಂದು ಸುಧಾಕರ್ ಅವರನ್ನು ಪ್ರಶ್ನಿಸಿದ್ದಾರೆ. ಇತ್ತ ಶಾಸಕ ಹಾಗೂ ಮಾಜಿ ಶಾಸಕರ ನಡುವಿನ ಗುದ್ದಾಟ ಜೋರಾಗಿದೆ.