ವಿಧಾನಸಭೆ: ನೋವಿನ ಧ್ವನಿಯಲ್ಲಿ ಬಿಎಸ್ ಯಡಿಯೂರಪ್ಪ ವಿದಾಯ ಭಾಷಣ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಇನ್ನು ಅಧಿವೇಶನಕ್ಕೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಇದು ನಾನು ಶಾಸಕನಾಗಿ ಅಧಿವೇಶನದಲ್ಲಿ ಮಾಡುತ್ತಿರುವ ಕೊನೆಯ ಭಾಷಣದಲ್ಲಿ ಯಡಿಯೂರಪ್ಪ ನೋವಿನ ಧ್ವನಿಯಲ್ಲಿ ಘೋಷಿಸಿದ್ದಾರೆ.
ವಿಧಾನಸಭೆ (ಫೆ.24): ‘ಪ್ರತಿಪಕ್ಷಗಳು ಆರೋಪಿಸಿದಂತೆ ನನ್ನನ್ನು ಬಿಜೆಪಿ ಮೂಲೆಗುಂಪು ಮಾಡಿಲ್ಲ. ಯಾರಿಗೂ ಕೊಡದಷ್ಟುಅವಕಾಶ, ಸ್ಥಾನಮಾನ ಹಾಗೂ ಗೌರವವನ್ನು ಬಿಜೆಪಿ ಹಾಗೂ ನರೇಂದ್ರ ಮೋದಿ ನನಗೆ ನೀಡಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಹೀಗಾಗಿ ನಾನು ಮೋದಿಗೆ ಸದಾ ಋುಣಿಯಾಗಿರುತ್ತೇನೆ. ನನ್ನ ಕೊನೆಯ ಉಸಿರು ಎಳೆಯುವವರೆಗೂ ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಇನ್ನು ಅಧಿವೇಶನಕ್ಕೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಇದು ನಾನು ಶಾಸಕನಾಗಿ ಅಧಿವೇಶನದಲ್ಲಿ ಮಾಡುತ್ತಿರುವ ಕೊನೆಯ ಭಾಷಣ ಹಾಗೂ ವಿದಾಯ ಭಾಷಣ’ ಎಂದು ಯಡಿಯೂರಪ್ಪ ನೋವಿನ ಧ್ವನಿಯಲ್ಲಿ ಘೋಷಿಸಿದರು.