ಇದು ಕುಮಟಳ್ಳಿ ಚುನಾವಣೆ ಅಲ್ಲ, ಸವದಿ ಚುನಾವಣೆ: ಅಥಣಿಯಲ್ಲಿ BSY ಘೋಷಣೆ!
ಸಿಎಂ ಬಿ.ಎಸ್. ಯಡಿಯೂರಪ್ಪರ ಒಂದು ಬದಿಯಲ್ಲಿ ಮೂಲ ಬಿಜೆಪಿಗ, ಡಿಸಿಎಂ ಲಕ್ಷ್ಮಣ ಸವದಿ ಇದ್ದರೆ, ಇನ್ನೊಂದು ಕಡೆ ವಲಸಿಗ ಮಹೇಶ್ ಕುಮಟಳ್ಳಿ. ಮುಂದೆ ಬಂಡಾಯ ಅಭ್ಯರ್ಥಿಯಾಗಿ ಅಶೋಕ್ ಪೂಜಾರಿ! ಅಥಣಿಯಲ್ಲಿ ಪ್ರಚಾರ ಆರಂಭಿಸಿದ ಬಿಎಸ್ವೈ ಏನು ಹೇಳ್ತಿದ್ದಾರೆ ಕೇಳೋಣ....
ಬೆಳಗಾವಿ (ನ.23): ಅಥಣಿ- ಸದ್ಯ ರಾಜ್ಯ ರಾಜಕೀಯದಲ್ಲಿ ಅತೀ ಹೆಚ್ಚು ಸದ್ದುಮಾಡುತ್ತಿರುವ ಕ್ಷೇತ್ರಗಳಲ್ಲೊಂದು. ಪ್ರಬಲ ರಾಜಕೀಯ ಎದುರಾಳಿಗಳಾಗಿರುವ ಇಬ್ಬರು ಘಟಾನುಘಟಿ ನಾಯಕರನ್ನು ಒಂದೇ ವೇದಿಕೆಯಲ್ಲಿ ತಂದಿರುವ ಬಿಜೆಪಿಗೆ, ಚುನಾವಣಾ ಅಖಾಡದಲ್ಲಿ ಬಂಡಾಯ ಮತ್ತೊಂದು ತಲೆನೋವು ತಂದಿಟ್ಟಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪರ ಒಂದು ಬದಿಯಲ್ಲಿ ಮೂಲ ಬಿಜೆಪಿಗ, ಡಿಸಿಎಂ ಲಕ್ಷ್ಮಣ ಸವದಿ ಇದ್ದರೆ, ಇನ್ನೊಂದು ಕಡೆ ವಲಸಿಗ ಮಹೇಶ್ ಕುಮಟಳ್ಳಿ. ಮುಂದೆ ಬಂಡಾಯ ಅಭ್ಯರ್ಥಿಯಾಗಿ ಅಶೋಕ್ ಪೂಜಾರಿ! ಅಥಣಿಯಲ್ಲಿ ಪ್ರಚಾರ ಆರಂಭಿಸಿದ ಬಿಎಸ್ ವೈ ಏನು ಹೇಳ್ತಿದ್ದಾರೆ ಕೇಳೋಣ....
15 ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದ್ದು, ಡಿ. 09ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.