Asianet Suvarna News Asianet Suvarna News

ಹೋಟೆಲ್ ಆಹಾರವನ್ನು ಎಂಜಲು ಮಾಡಿದ ಮಾಲೀಕನ ಮಗ..!

ಮುಖ್ಯವಾಗಿ ಹೋಟೆಲ್ ಉದ್ಯಮ. ಯಾವ ನಂಬಿಕೆ ಮೇಲೆ ನಾವು ಹೋಟೆಲ್‌ಗೆ ಹೋಗಬೇಕು ಎಂದು ಗ್ರಾಹಕ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ ಆಘಾತಕಾರಿಯಾದ ಸುದ್ದಿಯೊಂದು ಹಾಸನದಲ್ಲಿ ಬೆಳಕಿಗೆ ಬಂದಿದೆ.

ಹಾಸನ(ಜೂ.02): ನಾಲ್ಕನೇ ಹಂತದ ಲಾಕ್‌ಡೌನ್ ಮುಕ್ತಾಯವಾದ ಬೆನ್ನಲ್ಲೇ ನಿಧಾನವಾಗಿ ಒಂದೊಂದೇ ಉದ್ಯಮಗಳು ಬಾಗಿಲು ತೆರೆಯಲಾರಂಭಿಸಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವುದು ಅತ್ಯಂತ ಪ್ರಮುಖ ಆದ್ಯತೆ ಎನಿಸಿಕೊಂಡಿದೆ.

ಅದರಲ್ಲೂ ಮುಖ್ಯವಾಗಿ ಹೋಟೆಲ್ ಉದ್ಯಮ. ಯಾವ ನಂಬಿಕೆ ಮೇಲೆ ನಾವು ಹೋಟೆಲ್‌ಗೆ ಹೋಗಬೇಕು ಎಂದು ಗ್ರಾಹಕ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ ಆಘಾತಕಾರಿಯಾದ ಸುದ್ದಿಯೊಂದು ಹಾಸನದಲ್ಲಿ ಬೆಳಕಿಗೆ ಬಂದಿದೆ.

ವಿದ್ಯುತ್ ಕಂಬ ಹತ್ತಿ ಹೈಡ್ರಾಮಾ ಮಾಡಲು ಹೋದ ವ್ಯಕ್ತಿ ಸಾವು

ಹಾಸನದ ಕೆ.ಆರ್. ಪುರಂನಲ್ಲಿನ ಹೋಟೆಲ್‌ನಲ್ಲಿ ಆಹಾರಕ್ಕೆ ಮಾಲೀಕನ ಮಗ ಎಂಜಲು ಮಾಡಿದ್ದಾನೆ. ಈ ವಿಡಿಯೋವೀಗ ಸಾಕಷ್ಟು ವೈರಲ್ ಆಗಲಾರಂಭಿಸಿದೆ. ಒಂದೇ ಗೋಬಿ ಸ್ಟಿಕ್‌ನಲ್ಲಿ ಮೂರ್ನಾಲ್ಕು ಬಾರಿ ಕಬಾಬ್ ತಿಂದಿದ್ದಾನೆ. ಅದನ್ನೇ ಪಾರ್ಸೆಲ್‌ಗೂ ಹಾಕಿ ಕಳಿಸಿದ್ದಾನೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.