Asianet Suvarna News Asianet Suvarna News

ಲಿಂಗಾಯತರೇ ಬೇರೆ, ವೀರಶೈವರೇ ಬೇರೆ: ಮುರುಘಾ ಶ್ರೀಗಳ ನಡೆಗೆ ವ್ಯಾಪಕ ವಿರೋಧ

* ವೀರಶೈವ- ಲಿಂಗಾಯತ ವೆಬ್‌ಸೈಟ್‌ಗೆ ಚಿತ್ರದುರ್ಗದ ಮುರುಘಾ ಶ್ರೀ ಚಾಲನೆ
* ಬಸವ ಕೇಂದ್ರ, ಬಸವ ಸಮಿತಿ, ಬಸವ ಬಳಗ, ಬಸವ ದಳದಲ್ಲೂ ವಿರೋಧ
* ಲಿಂಗಾಯತ ಮತ್ತು ವೀರಶೈವರು ಒಂದು ಆಗಲ್ಲ
 

First Published Aug 12, 2021, 10:21 AM IST | Last Updated Aug 12, 2021, 10:21 AM IST

ರಾಯಚೂರು(ಆ.12): ವೀರಶೈವ -ಲಿಂಗಾಯತರ ಕುರಿತು ವೆಬ್‌ಸೈಟ್‌ಗೆ ರಾಯಚೂರಿನ ಬಸವ ಕೇಂದ್ರದ ಆಡಳಿತ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವೆಬ್‌ಸೈಟ್‌ಗೆ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದ್ದರು. ವೀರಶೈವರು ಹಾಗೂ ಲಿಂಗಾಯತರು ಒಂದೇ ಅಲ್ಲ. ಲಿಂಗಾಯತರೇ ಬೇರೆ, ವೀರಶೈವರೇ ಬೇರೆ ಇದ್ದಾರೆ. ಲಿಂಗಾಯತರ ಧರ್ಮ ಗ್ರಂಥ ಹಾಗೂ ಗುರುಗಳು ಬೇರೆ ಆಗಿವೆ. ಆಚಾರಗಳು ಭಿನ್ನವಾಗಿವೆ, ನಾವು ಲಿಂಗಾಯತರು ನಮ್ಮ ಆಚಾರಗಳು ನಾವು ಬಿಡುವುದಿಲ್ಲ. ವೀರಶೈವರು ಅವರ ಆಚಾರಗಳು ಅವರು ಬಿಡುವುದಿಲ್ಲ. ಲಿಂಗಾಯತ ಮತ್ತು ವೀರಶೈವರು ಒಂದು ಆಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಹಠ ಬಿಡಲಾರೆ.. ಇಟ್ಟ ಹೆಜ್ಜೆ ಹಿಂದಿಡಲಾರೆ: ಆನಂದ ಸಿಂಗ್‌ ಮಾಡಿದ ಶಪಥವೇನು?