Asianet Suvarna News Asianet Suvarna News

Big 3 Impact: ಸುವರ್ಣ ನ್ಯೂಸ್‌ ಬಿಟ್ಟ ಬ್ರಹ್ಮಾಸ್ತ್ರಕ್ಕೆ ನೆಟ್ಟಗಾದವು ವಿದ್ಯುತ್‌ ಕಂಬಗಳು

ಧಾರವಾಡದ ಕಮಲಾಪುರದಲ್ಲಿ ನಡೆದಿದ್ದ ಶಾರ್ಟ್‌ ಸರ್ಕ್ಯೂಟ್‌| ಸುವರ್ಣ ನ್ಯೂಸ್‌ ವರದಿಯ ನಂತರ ಎಚ್ಚೆತ್ತ ಅಧಿಕಾರಿಗಳು| ಸುದ್ದಿ ಪ್ರಸಾರವಾದ ಕೇವಲ ಒಂದೇ ದಿನದಲ್ಲಿ ಸಮಸ್ಯೆ ಸರಿಪಡಿಸಿದ ಅಧಿಕಾರಿಗಳು|   

ಧಾರವಾಡ(ಜ.29): ಧಾರವಾಡದ ಕಮಲಾಪುರದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮ ಎರಡು ಎತ್ತುಗಳು ಸಜೀವ ದಹನವಾಗಿದ್ದವು. ಈ ಬಗ್ಗೆ ಮಂಗಳವಾರ ಸುವರ್ಣ ಸುದ್ದಿ ವಾಹಿನಿ ವರದಿಯನ್ನ ಬಿತ್ತರಿಸಿತ್ತು. ಈ ವರದಿಯನ್ನ ನೋಡಿದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 

ಜನರ ಕೈಗೆ ಎಟುಕುತ್ತಿದೆ ಕರೆಂಟ್ ಕಂಬ; ಎಲ್ಲೆಂದರಲ್ಲಿ ಶಾರ್ಟ್ ಸರ್ಕ್ಯೂಟ್!

ಗ್ರಾಮದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ವಿದ್ಯುತ್‌ ಕಂಬಗಳನ್ನ ಸರಿಪಡಿಸಿದ್ದಾರೆ. ಸುವರ್ಣ ನ್ಯೂಸ್‌ ವರದಿ ಬಿತ್ತರಿಸಿ ಕೇವಲ ಒಂದೇ ದಿನದಲ್ಲಿ ಎಚ್ಚೆತ್ತ ಅಧಿಕಾರಿಗಳು ಗ್ರಾಮದಲ್ಲಿ ಹೊಸ ವಿದ್ಯುತ್ ಕಂಬಗಳನ್ನ ಹಾಕಿದ್ದಾರೆ. ಹೀಗಾಗಿ ಕಮಲಾಪುರದ ಗ್ರಾಮಸ್ಥರು ಸಂತಸದಲ್ಲಿದ್ದು ಸುವರ್ಣ ನ್ಯೂಸ್‌ ಧನ್ಯವಾದಗಳನ್ನ ತಿಳಿಸಿದ್ದಾರೆ.