Asianet Suvarna News Asianet Suvarna News

ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಪತ್ನಿಗೆ ಸೀಮಂತ ಪ್ರಕರಣ: ಅದು ಹುಟ್ಟುಹಬ್ಬ ಕಾರ್ಯಕ್ರಮ ಅಂತೆ

ಬೆಂಗಳೂರಿನಲ್ಲಿ ಸೀಮಂತ ಕಾರ್ಯಕ್ರಮ ರಣರಂಗವಾಗಿದ್ದು, 2ನೇ ಪತ್ನಿಗೆ ಸೀಮಂತ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.
 

ಬೆಂಗಳೂರಿನಲ್ಲಿ ಸೀಮಂತ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿದ್ದು, ಅದು ಸೀಮಂತ  ಕಾರ್ಯಕ್ರಮವೇ ಅಲ್ಲ. ಹುಟ್ಟುಹಬ್ಬ ಕಾರ್ಯಕ್ರಮ ಎಂದು ತೇಜಸ್‌ ಕುಟುಂಬ ತಿಳಿಸಿದೆ. ಸೀಮಂತ ಕಾರ್ಯಕ್ರಮ ಅಲ್ಲ ಮೊಮ್ಮಗಳ ಹುಟ್ಟುಹಬ್ಬ ಕಾರ್ಯಕ್ರಮ.  ಹುಟ್ಟುಹಬ್ಬ ಮಾಡುವಾಗ ಚೈತ್ರಾ ಮತ್ತು ಅವರ ಅಣ್ಣ ಬಂದು ಏಕಾಏಕಿ ಹೊಡೆದಿದ್ದಾರೆ. ಕೋರ್ಟ್‌'ನಲ್ಲಿ ನಾಲ್ಕು ಕೇಸ್‌ ನಡಿತಾ ಇದೆ. ಕೋರ್ಟ್‌ಗೆ ಅಟೆಂಡ್‌ ಮಾಡುತ್ತಿಲ್ಲ. ಅವರು ಹುಡುಗಿ 40 ಲಕ್ಷ ಕೊಟ್ರೆ ಬಿಟ್ಟು ಬಿಡ್ತೀನಿ ಅಂತಿದಾಳೆ ಎಂದು ತಿಳಿಸಿದ್ದಾರೆ. ನಮ್ಮ ಹತ್ತಿರ ದುಡ್ಡು ಇಲ್ಲ, ನಮಗೆ ಕೊಡೋಕೆ ಆಗಲ್ಲ ಎಂದು ಹೇಳಿದ್ದೇವೆ ಎಂದು ಹೇಳಿದರು. 2018ರಲ್ಲಿ ತೇಜಸ್‌ ಹಾಗೂ ಚೈತ್ರಾ ವಿವಾಹ ನಡೆದಿತ್ತು. ಮದುವೆ ನಂತರವೂ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಗಂಡನಿಂದ ಹಲ್ಲೆ ಮಾಡಲಾಗಿತ್ತು. ಡಿವೋರ್ಸ್‌ ಕೇಸ್‌ ಕೋರ್ಟ್‌'ನಲ್ಲಿ ಇರುವಾಗಲೇ ಮತ್ತೊಂದು ಮದುವೆ ಎಂಬ ಆರೋಪ ಕೇಳಿ ಬಂದಿದೆ.

Bengaluru: ಯುಕೆಜಿ ಮಗು ಫೇಲ್: ಶಿಕ್ಷಣ ಸಂಸ್ಥೆಯ ಎಡವಟ್ಟಿಗೆ ಆಕ್ರೋಶ

Video Top Stories