Asianet Suvarna News Asianet Suvarna News

ರಾಯಚೂರು: ಬೆಂಗಳೂರಿನಿಂದ ಬಂದವರಿಗೆಲ್ಲಾ ಕ್ವಾರಂಟೈನ್‌ ಸೀಲ್‌

ಒಂದು ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್‌| ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳನ್ನ ಸೇರಿಕೊಳ್ಳುತ್ತಿರುವ ಜನರು| ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿಳಿದ ಜನರಿಗೆ ಹೋಂ ಕ್ವಾರಂಟೈನ್‌ ಸೀಲ್‌|

ರಾಯಚೂರು(ಜು.14): ಇಂದಿನಿಂದ(ಮಂಗಳವಾರ) ಒಂದು ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್‌ ಆಗಿರಲಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳನ್ನ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರು ಬಿಟ್ಟು ರಾಯಚೂರು ಜಿಲ್ಲೆಗೆ ಬಂದ ಜನರಿಗೆಲ್ಲ ಹೋಂ ಕ್ವಾರಂಟೈನ್‌ ಸೀಲ್‌ ಹಾಕಲಾಗುತ್ತಿದೆ.

ಕೊರೊನಾ ಭೀತಿ: ಹಳ್ಳಿಗಳಲ್ಲಿ ಈಗ ಬೆಂಗಳೂರಿಗರದ್ದೇ ಆತಂಕ..!

ಬೆಂಗಳೂರಿನಿಂದ ಸಾಕಷ್ಟು ಜನರು ನಗರದ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಹೀಗೆ ಬಂದ ಎಲ್ಲ ಜನರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹೋಂ ಕ್ವಾರಂಟೈನ್‌ ಸೀಲ್‌ ಹಾಕುತ್ತಿದ್ದಾರೆ.