Asianet Suvarna News Asianet Suvarna News

ಹಳೆ ಸ್ನೇಹಿತರನ್ನು ಒಂದುಗೂಡಿಸಿದ SM ಕೃಷ್ಣ ಜೀವನ ಚರಿತ್ರೆ

ಎಸ್.ಎಂ. ಕೃಷ್ಣ ಅವರ ಆತ್ಮಕಥೆ ಅನಾವರಣ| ಈದು ದಶಕಗಳ ರೋಚಕ ಘಟನೆಗಳುಳ್ಳ ಪುಸ್ತಕ ಬಿಡುಗಡೆ| ಸ್ಮೃತಿ ವಾಹಿನಿ ಕೃಷ್ಣಪಥ ಸೇರಿ ಒಟ್ಟು ಆರು ಪುಸ್ತಕಗಳು ಲೋಕಾರ್ಪಣೆ|  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಒಂದಾದ ಸ್ನೇಹಿತರು|

ಬೆಂಗಳೂರು(ಜ.04): ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆತ್ಮಕಥೆ ಅನಾವರಣಗೊಂಡಿದೆ. ಐದು ದಶಕಗಳ ರೋಚಕ ಘಟನೆಗಳುಳ್ಳ ಪುಸ್ತಕ ಬಿಡುಗಡೆಯಾಗಿದೆ. ಸ್ಮೃತಿ ವಾಹಿನಿ ಕೃಷ್ಣಪಥ ಸೇರಿ ಒಟ್ಟು ಆರು ಪುಸ್ತಕಗಳು ಲೋಕಾರ್ಪಣೆಯಾಗಿವೆ. ನಿವೃತ್ತ ನ್ಯಾ.ವೆಂಕಟಾಚಲಯ್ಯ, ನಿರ್ಮಲಾನಂದ ಶ್ರೀಗಳು, ಮುಕ್ತಿದಾದನಂದ ಮಹಾರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ನಾಟಕಕ್ಕೆ ಹಣ ಕೊಟ್ಟಿದ್ದಕ್ಕಾಗಿ ಅನರ್ಹ ಶಾಸಕ: ಕೃಷ್ಣ ರಾಜಕಾರಣದ ರಸ ನಿಮಿಷಗಳು!

ಎಸ್.ಎಂ. ಕೃಷ್ಣ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಾದ ರೋಚಕ ಘಟನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಸ್. ಎಂ.ಕೃಷ್ಣ ಅವರ ಸ್ನೇಹಿತರಾದ ಮಾಜಿ ಸಚಿವ ಡಿ. ಕೆ. ಶಿವಕುಮಾರ್, ಗೋಪಾಲಯ್ಯ ಹಾಗೂ ಹೆಚ್. ವಿಶ್ವನಾಥ್ ಒಂದಾಗಿರುವುದು ಮತ್ತೊಂದು ವಿಶೇಷವಾಗಿದೆ.