Asianet Suvarna News Asianet Suvarna News

ಬಿಎಸ್‌ಎಫ್‌ ಯೋಧನಿಗೆ ವಕ್ಕರಿಸಿದ ಕೊರೋನಾ

ರೈಲಿನ ಮೂಲಕ ಯೋಧ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಸೋಂಕಿತಬ ಯೋಧ| ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಮನೆಗೆ ಹೋಗಿದ್ದ ಸೋಂಕಿತ ಯೋಧ| ಯೋಧ ಹತ್ತಿದ್ದ ಆಟೋ ಚಾಲಕನಿಗಾಗಿ ಹುಡುಕಾಟ ಆರಂಭ|

ಆನೇಕಲ್‌(ಜೂ.13): ಬಿಎಸ್‌ಎಫ್‌ ಯೋಧನೊಬ್ಬನಿಗೆ ಮಹಾಮಾರಿ ಕೊರೋನಾ ವಕ್ಕರಿಸಿದ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಮೊನ್ನೆಯಷ್ಟೇ ರೈಲಿನ ಮೂಲಕ ಯೋಧ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದನು. ಇದೀಗ ಬಿಎಸ್‌ಎಫ್‌ ಯೋಧನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಕೊರೋನಾ ಭೀತಿ: ಜಿಂದಾಲ್‌ ನೌಕರರನ್ನು ಗ್ರಾಮಕ್ಕೆ ಬಿಡದ ಜನರು

ಸೋಂಕಿತ ಯೋಧ ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಮನೆಗೆ ಹೋಗಿದ್ದನು ಎಂದು ತಿಳಿದು ಬಂದಿದೆ. ಹೀಗಾಗಿ ಯೋಧ ಹತ್ತಿದ್ದ ಆಟೋ ಚಾಲಕನಿಗಾಗಿ ಹುಡುಕಾಟ ಆರಂಭವಾಗಿದೆ. ಯೋಧ ಹತ್ತಿದ್ದ ಆಟೋ ನಗರದಲ್ಲಿ ಯಾವ ಯಾವ ಕಡೆ ಸಂಚರಿಸಿತ್ತೋ ಎಂಬ ಭಯ ಅಧಿಕಾರಿಗಳಿಗೆ ಕಾಡುತ್ತಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.